ಕಾಂಗ್ರೆಸ್‌ಗೆ ಬಾಹ್ಯ ಬೆಂಬಲದ ಪತ್ರ ನೀಡಿದ ಶರತ್‌ ಬಚ್ಚೇ ಗೌಡ

ಬೆಂಗಳೂರು: ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಶಾಸಕ ಶರತ್ ಬಚ್ಚೇಗೌಡ ಗುರುವಾರ (ಫೆ.೨೫) ವಿಧಾನಸಭೆ ವಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕಾಂಗ್ರೆಸ್‍ಗೆ ಬಾಹ್ಯ ಬೆಂಬಲ ನೀಡುವ ಅಧಿಕೃತ ಪತ್ರ ನೀಡಿದ್ದಾರೆ.
ಸಿದ್ದರಾಮಯ್ಯ ಅವರ ಅಧಿಕೃತ ನಿವಾಸದ ಆವರಣದಲ್ಲಿ ನಡೆದ ಕಾರ್ಕ್ರಮದಲ್ಲಿ ಶರತ್ ಬಚ್ಚೇಗೌಡ ನೀಡಿದ ಬಾಹ್ಯ ಬೆಂಬಲವನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಒಪ್ಪಿಕೊಂಡಿದ್ದು, ಶರತ್ ಬಚ್ಚೇಗೌಡರ ಬೆಂಬಲಕ್ಕೆ ಕಾಂಗ್ರೆಸ್ ನಿಲ್ಲಲಿದೆ ಎಂದು ಪ್ರಕಟಿಸಿದರು.
ಸಿದ್ದರಾಮಯ್ಯ ಮಾತನಾಡಿ, ಸಂವಿಧಾನದಲ್ಲಿ ಪಕ್ಷೇತರರಾಗಿ ಸರ್ಧೆ ಮಾಡಲು ಅವಕಾಶ ಇದೆ. ಆಯ್ಕೆಯಾದ ಮೇಲೆ ಅವ ಮುಗಿಯುವವರೆಗೂ ಯಾವ ಪಕ್ಷಕ್ಕೂ ಸೇರ್ಪಡೆಯಾಗುವಂತ್ತಿಲ್ಲ. ಸೇರ್ಪಡೆಯಾದರೆ ಪಕ್ಷಾಂತರ ಕಾಯ್ದೆ ಅಡ್ಡಿ ಬರುತ್ತದೆ. ಆದರೆ ಯಾವುದೇ ಪಕ್ಷಕ್ಕಾದರೂ ಬಾಹ್ಯ ಬೆಂಬಲ ನೀಡಬಹುದು. ಹಿಂದೆ ಒಬ್ಬ ಪಕ್ಷೇತರರು ನಮ್ಮ ಪಕ್ಷಕ್ಕೆ ಬೆಂಬಲ ಕೊಟ್ಟಿದ್ದರು. ಆದರೆ ಪಕ್ಷಕ್ಕೆ ಸೇರ್ಪಡೆಯಾಗಿರಲಿಲ್ಲ ಎಂದು ಹೇಳಿದರು.
ಅಕಾಂಗ್ರೆಸ್‍ಗೆ ಶರತ್ ಬಚ್ಚೇಗೌಡ ಈ ಮೊದಲು ಸದನದ ಒಳಗೆ ಹೊರಗೆ ಬೆಂಬಲ ಕೊಟ್ಟಿದ್ದರು. ಇಂದು ಅಕೃತವಾಗಿ ಪತ್ರ ಕೊಟ್ಟಿದ್ದಾರೆ ಎಂದರು.
ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ, ಒಂದು ರೂಪಾಯಿ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಕೊರೊನಾದಿಂದಾಗಿ ದುಡ್ಡಿಲ್ಲ ಎನ್ನುತ್ತಾರೆ. ಕೊರೊನಾ ಹೆಸರು ಹೇಳಿ 36 ಸಾವಿರ ಕೋಟಿ ರೂ.ಸಾಲ ಮಾಡಿದ್ದಾರೆ. ಅದರಲ್ಲಿ ಶೇ.50ರಷ್ಟು ಅಥವಾ ಅದಕ್ಕಿಂತ ಹೆಚ್ಚು ನುಂಗಿದ್ದಾರೆ. ಸರ್ಕಾರ ಕೊರೊನಾಗೆ ಖರ್ಚು ಮಾಡಿರುವುದು ಕೇವಲ ಐದಾರು ಸಾವಿರ ಕೋಟಿ ಮಾತ್ರ. ಉಳಿದ ದುಡ್ಡೇಲ್ಲಾ ಎಲ್ಲಿ ಹೋಯ್ತು ಎಂದು ಪ್ರಶ್ನಿಸಿದರು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

ಮುಖ್ಯಮಂತ್ರಿ ಯಡಿಯೂರಪ್ಪ ನಿಂತು ಹೋಗಿರುವ ಡಕೋಟಾ ಬಸ್ ಮೇಲೆ ಕುಳಿತಿದ್ದಾರೆ. ಈ ಸರ್ಕಾರದ ವಿರುದ್ಧದ ಹೋರಾಟಕ್ಕೆ ಶರತ್ತು ಬಚ್ಚೇಗೌಡ ಬೆಂಬಲವಿದೆ. ಜನ ಮತ ಹಾಕಿರುವುದು ಶರತ್ ಬಚ್ಚೇಗೌಡರಿಗೆ ಎಂ.ಟಿ.ಬಿ.ನಾಗರಾಜರಿಗೆ ಅಲ್ಲ. ಹಿಂಬಾಗಿಲ ಮೂಲಕ ಅವರು ಸಚಿವನಾಗಿದ್ದಾರೆ.

ನಿಯಮ ಪ್ರಕಾರ ಶರತ್ ಬಚ್ಚೇಗೌಡರಿಗೆ ಶಿಷ್ಠಚಾರ ಅನ್ವಯವಾಗುತ್ತದೆ. ದೇಶದ ಪ್ರಧಾನಿ ಅಥವಾ ರಾಷ್ಟ್ರಪತಿ ಬಂದರೂ ಆ ಕಾರ್ಯಕ್ರಮ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲೇ ನಡೆಯಬೇಕು. ಅಧ್ಯಕ್ಷರ ಸಮಯಕ್ಕೆ ಹೊಂದಾಣಿಕೆ ಮಾಡಿಕೊಂಡೇ ಕಾರ್ಯಕ್ರಮ ನಿಗದಿ ಮಾಡಬೇಕು. ಆದರೆ ಹೊಸಕೋಟೆಯಲ್ಲಿ ಬೇರೆ ರೀತಿ ನಡೆದಿದೆ ಎಂದು ಟೀಕಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಇದು ಪಕ್ಷದ ಸಭೆಯಲ್ಲ, ಮುಂದೆ ಎಲ್ಲರೂ ಒಗ್ಗಟ್ಟಿನಿಂದ ಬಿಜೆಪಿ ಆಡಳಿತದ ವಿರುದ್ಧ ಹೋರಾಟ ಮಾಡೋಣ ಎಂದರು.
ಕಾಂಗ್ರೆಸ್‍ಗೆ ಬೆಂಬಲ ವ್ಯಕ್ತ ಪಡಿಸಿದ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ನನಗೆ ಮತ ಹಾಕಿದವರ ಹಿತಕ್ಕಾಗಿ ನಾನು ಈ ರಾಜಕೀಯ ನಿರ್ಧಾರ ಮಾಡಿದ್ದೇನೆ. 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಸ್ವತಂತ್ರವಾಗಿ ಸರ್ಧೆ ಮಾಡಿ ಸ್ವಾಭಿಮಾನಿಯಾಗಿ ವಿಧಾನಸಭೆ ಆಯ್ಕೆಯಾಗಿದ್ದೇನೆ. ಮುಂದೆಯೂ ಸ್ವತಂತ್ರ ಶಾಸಕನಾಗಿ ಮುಂದುವರೆಯುತ್ತೇನೆ ಎಂದರು.
ಮಾಜಿ ಸಚಿವರಾದ ಕೆ.ಜೆ.ಜಾರ್ಜ್, ರಮೇಶ್ ಕುಮಾರ್, ಜಮೀರ್ ಅಹಮದ್, ಕೃಷ್ಣಬೈರೇಗೌಡ, ಶಾಸಕಾಂಗ ಪಕ್ಷದ ಕಾರ್ಯದರ್ಶಿ ತುಕರಾಂ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಮೊದಲಾದವರಿದ್ದರು.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement