ಭಟ್ಕಳ: ಹೆಬ್ಬಾವು ಕಚ್ಚಿದ್ದಕ್ಕೆ ಹಾವು ಹಿಡಿದುಕೊಂಡೇ ಆಸ್ಪತ್ರೆಗೆ ಬಂದು ದಾಖಲಾದ ವ್ಯಕ್ತಿ..!

ಭಟ್ಕಳ: ಹೆಬ್ಬಾವು ಕಚ್ಚಿದ್ದಕ್ಕೆ ಅದನ್ನು ಹಿಡಿದು ಹೆಬ್ಬಾವು ಸಮೇತ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಚಿಕಿತ್ಸೆ ದಾಖಲಾಗಿರುವ ಘಟನೆ ಸೋಮವಾರ ರಾತ್ರಿ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಹೀಗೆ ಹೆಬ್ಬಾವು ಹಿಡಿದು ಹಾವಿನ ಸಮೇತ ಆಸ್ಪತ್ರೆಗೆ ಬಂದ ವ್ಯಕ್ತಿಯನ್ನು ಮಣ್ಕುಳಿ ಸೀತಾರಾಮ ನಾರಾಯಣ ನಾಯ್ಕ ಎಂದು ಗುರುತಿಸಲಾಗಿದೆ. ಭಟ್ಕಳದಲ್ಲಿ ಕೆಲದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಮಳೆಗೆ … Continued

ಸಂಸತ್ ಅಧಿವೇಶನ; ನವೆಂಬರ್‌ 28ರಂದು ಸರ್ವಪಕ್ಷಗಳ ಸಭೆ ಕರೆದ ಪ್ರಧಾನಿ ಮೋದಿ

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ಕೇಂದ್ರ ಸರ್ಕಾರ ಭಾನುವಾರ (ನವೆಂಬರ್ 28) ಸರ್ವಪಕ್ಷ ಸಭೆ ಕರೆದಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.. ನವೆಂಬರ್ ೨೯ ರಿಂದ ಡಿಸೆಂಬರ್ ೨೩ ತನಕ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯಲಿದ್ದು ಸುಗಮ ಕಲಾಪ ನಡೆಯಲು ಸಹಕಾರ ನೀಡುವಂತೆ ಸರ್ವ ಪಕ್ಷಗಳ ನಾಯಕರಿಗೆ ಮೋದಿ … Continued

ರಾಜ್ಯದಲ್ಲಿ ಮಳೆ ಹಾನಿ: ಸಿಎಂ ಬೊಮ್ಮಾಯಿಗೆ ದೂರವಾಣಿ ಮಾಡಿದ ಪ್ರಧಾನಿ ಮೋದಿ

ಬೆಂಗಳೂರು: ರಾಜ್ಯದಲ್ಲಿ ಎಡೆಬಿಡದೆ ಕೆಲ ದಿನಗಳಿಂದ ಸುರಿದ ಭಾರಿ ಮಳೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಮಾತನಾಡಿದ್ದು, ಮಳೆ ಅನಾಹುತಗಳ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ ರಾಜ್ಯಕ್ಕೆ ಎಲ್ಲ ನೆರವು ನೀಡುವ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿನ ಮಳೆ ಅನಾಹುತದ ಬಗ್ಗೆ ಇಂದು(ಮಂಗಳವಾರ) ಬೆಳಿಗ್ಗೆ … Continued

ಬೆಂಕಿ ಹೊತ್ತಿಕೊಂಡ ಬಸ್‌: 12 ಮಕ್ಕಳು ಸೇರಿ 45 ಪ್ರವಾಸಿಗರ ಸಜೀವ ದಹನ

ಬಲ್ಗೇರಿಯಾ : ಪಶ್ಚಿಮ ಬಲ್ಗೇರಿಯಾದ ಹೆದ್ದಾರಿಯೊಂದರಲ್ಲಿ ಮಂಗಳವಾರ ಬೆಳಗಿನ ಜಾವ ಬಸ್ ಬೆಂಕಿಗೆ ಆಹುತಿಯಾಗಿ 12 ಮಕ್ಕಳು ಸೇರಿದಂತೆ ಕನಿಷ್ಠ 45 ಜನರು ಮೃತಪಟ್ಟ ಘಟನೆ ವರದಿಯಾಗಿದೆ. ಸೋಫಿಯಾದ ಪಶ್ಚಿಮಕ್ಕೆ ಸುಮಾರು 45 ಕಿಮೀ ದೂರದಲ್ಲಿರುವ ಸ್ಟ್ರೂಮಾ ಹೆದ್ದಾರಿಯಲ್ಲಿ ಸ್ಥಳೀಯ ಸಮಯ ಸುಮಾರು 2 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ಬಲ್ಗೇರಿಯನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. … Continued

ಮುರುಡೇಶ್ವರ: ಸಮುದ್ರದ ಅಲೆಗೆ ಸಿಲುಕಿ ಒಬ್ಬ ಸಾವು, ಮತ್ತೊಬ್ಬನ ರಕ್ಷಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಮುರುಡೇಶ್ವರಕ್ಕೆ ಪ್ರವಾಸಕ್ಕೆಂದು ಬಂದ ಇಬ್ಬರು ಯುವಕರು ಸಮುದ್ರಕ್ಕೆ ಇಳಿದ ವೇಳೆ ಒಬ್ಬ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿ ಮೃತಪಟ್ಟ ಘಟನೆ ಸಮೀಪದ ತೂದಳ್ಳಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮೃತಪಟ್ಟವನನ್ನು ರಘುನಂದನ (17) ಕನಕಪುರ ಎಂದು ಗುರುತಿಸಲಾಗಿದೆ. ಬಸವರಾಜು ((21) ಎಂಬ ಮತ್ತೊಬ್ಬ ಯುವಕನನ್ನು ಲೈಫ್ ಗಾರ್ಡ್‍ ರಕ್ಷಿಸಿದ್ದಾರೆ. ಕನಕಪುರದಿಂದ 10 … Continued

ಮಳೆಯಿಂದ ಬೆಳೆಹಾನಿ ವರದಿ ಕೈಸೇರಿದ 24 ಗಂಟೆಯಲ್ಲೇ ಬೆಳೆ ಪರಿಹಾರ ಬಿಡುಗಡೆಗೆ ಸೂಚನೆ: ಸಿಎಂ ಬೊಮ್ಮಾಯಿ

ಬೆಂಗಳೂರು : ಭಾರೀ ಮಳೆಯಿಂದಾಗಿ ಬೆಳೆ ಕಳೆದುಕೊಂಡ ರೈತ ಸಮುದಾಯಕ್ಕೆ ಬೆಳೆ ನಷ್ಟ ವರದಿ ಕೈಸೇರಿದ 24 ಗಂಟೆಯಲ್ಲೇ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಳಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ವಿವಿಧೆಡೆ ಮಳೆಯಿಂದ ಅಪಾರ ಪ್ರಮಾಣದ ಆಸ್ತಿ, ಬೆಳೆ ಹಾನಿ ಆಗಿದೆ. ಈ ಸಂಬಂಧ ಮುಂದಿನ 24 ಗಂಟೆಯಲ್ಲೇ ರೈತರಿಗೆ … Continued

ಇದು ಕೆಚ್ಚೆದೆಯ ಪವಾಡ…:ಮೂರು ಹುಲಿಗಳ ದಾಳಿಯಿಂದ ಬದುಕುಳಿದ ಬೆಕ್ಕಿನ ಮರಿ…! ಮೈ ನವಿರೇಳಿಸುವ ವಿಡಿಯೋ..!!

ದುಬೈ ರಾಜಕುಮಾರಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೊ ಮೈನವಿರೇಳಿಸುವಂತಿದೆ. ಅವರು ಹಂಚಿಕೊಂಡ ವಿಡಿಯೊದಲ್ಲಿ ೊಂದು ಪುಟ್ಟ ಬೆಕ್ಕು ಮೂರು ದೈತ್ಯ ಹುಲಿಗಳ ಜೊತೆ ಹೋರಾಡಿ ಬದುಕುಳಿದ ಮೈನವಿರೇಳಿಸುವ ವಿಡಿಯೊ ಹಂಚಿಕೊಂಡಿದ್ದಾರೆ..! ದುಬೈ ರಾಜಕುಮಾರಿ ಶೇಖಾ ಲತೀಫಾ ಅಲ್ ಮಕ್ತೌಮ್ Instagramನಲ್ಲಿ ಸರಣಿ ತುಣುಕುಗಳ ವಿಡಿಯೊ ಸಿಸಿಟಿಯದ್ದಾಗಿದೆ. ಮೊದಲ ಕ್ಲಿಪ್‌ನಲ್ಲಿ ಬಿಳಿ ಹುಲಿಯು ಬೆಕ್ಕಿನ ಮರಿಯನ್ನು … Continued

ಈತ ಪೊಲೀಸ್‌ ಆಗ್ತಾನಂತೆ…ಪೊಲೀಸ್‌ ನೇಮಕಾತಿ ಪರೀಕ್ಷೆ ಬರೆಯಲು ಬಂದ ಈತನ ಮಾಸ್ಕ್‌ ಒಳಗೆ ಜೆಬಿಎಸ್ ಬ್ಯಾಟರಿ, ಚಾರ್ಜಿಂಗ್ ಪಾಯಿಂಟ್, ಸಿಮ್ ಕಾರ್ಡ್, ಸ್ವಿಚ್ ಮೈಕ್..!

ಮುಂಬೈ: ಪುಣೆಯ ಸಮೀಪದ ಹಿಂಜೆವಾಡಿಯ ಶಾಲೆಯೊಂದರಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಆಗಮಿಸಿದ್ದ ಅಭ್ಯರ್ಥಿಯಿಂದ ಸಿಮ್ ಕಾರ್ಡ್, ಮೈಕ್ ಮತ್ತು ಬ್ಯಾಟರಿ ಹೊಂದಿದ್ದ ಎಲೆಕ್ಟ್ರಾನಿಕ್ ಸಾಧನ ಅಳವಡಿಸಿದ ಫೇಸ್ ಮಾಸ್ಕ್ ಅನ್ನು ಪಿಂಪ್ರಿ ಚಿಂಚ್‌ವಾಡ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಭ್ಯರ್ಥಿ ಪರೀಕ್ಷಾ ಕೇಂದ್ರದಿಂದ ಪರಾರಿಯಾಗಿದ್ದಾನೆ. ಅಭ್ಯರ್ಥಿಯ ವಿರುದ್ಧ ಹಿಂಜೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ, ಮಹಾರಾಷ್ಟ್ರ … Continued

ವಿರೋಧದ ನಂತರ ರಾಮಾಯಣ ವಿಶೇಷ ಎಕ್ಸ್‌ಪ್ರೆಸ್‌ ರೈಲಿನ ಸಿಬ್ಬಂದಿ ಕೇಸರಿ ಉಡುಪು ಹಿಂತೆಗೆದುಕೊಂಡ ಭಾರತೀಯ ರೈಲ್ವೆ

ನವದೆಹಲಿ: ರಾಮಾಯಣ ಎಕ್ಸ್‌ಪ್ರೆಸ್ ರೈಲಿನ ವೇಟರ್‌ಗಳ ಕೇಸರಿ ಉಡುಗೆಯನ್ನು ಹಿಂದೂ ಸಂತರು ವಿರೋಧಿಸಿದ ನಂತರ, ಐಆರ್‌ಸಿಟಿಸಿ (IRCTC) ಸೇವಾ ಸಿಬ್ಬಂದಿಯ ಉಡುಪನ್ನು ವೃತ್ತಿಪರ ಉಡುಗೆಗೆ ಬದಲಾಯಿಸಿದೆ ಮತ್ತು ಉಂಟಾದ ಅನಾನುಕೂಲತೆಗೆ ವಿಷಾದಿಸಿದೆ. ಇದಕ್ಕೂ ಮೊದಲು, ಅಡುಗೆ ಬಡಿಸುವ ಮಾಣಿಗಳು ‘ಸಾಧು’ಗಳನ್ನು ಹೋಲುವ ರೀತಿ ಕೇಸರಿ ಸಮವಸ್ತ್ರ ಧರಿಸಿದ್ದರು, ಇದಕ್ಕೆ ಹಿಂದೂ ಸಂತ ಸಮುದಾಯದಿಂದ ವಿರೋಧವನ್ನು ಎದುರಿಸಬೇಕಾಯಿತು. … Continued

ಅಮೆರಿಕದ ಬಿಲಿಯನೇರ್ ವಿರುದ್ಧ ತಾನು ಮಲಗಿದ 5,000 ಮಹಿಳೆಯರ ಮಾಹಿತಿ ಸ್ಪ್ರೆಡ್‌ಶೀಟಿನಲ್ಲಿ ದಾಖಲಿಸಿಟ್ಟ ಆರೋಪ: ವರದಿ..!

57 ವರ್ಷದ ಬಿಲಿಯನೇರ್ ಮತ್ತು ಸಿಕ್ವೊಯಾ ಕ್ಯಾಪಿಟಲ್‌ನಲ್ಲಿ ದೀರ್ಘಕಾಲದ ಪಾಲುದಾರ ಮೈಕೆಲ್ ಗೊಗೆನ್ ವಿರುದ್ಧ ನಾಲ್ಕು ಮಾಜಿ ಉದ್ಯೋಗಿಗಳು ಸರಿಸುಮಾರು $ 800 ಮಿಲಿಯನ್ ಹಾನಿ ಮೊಕದ್ದಮೆ ಹೂಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಸಿಲಿಕಾನ್ ವ್ಯಾಲಿ ಬಿಲಿಯನೇರ್ ವಿರುದ್ಧ ದಾಖಲಾದ ಆಘಾತಕಾರಿ ಸಿವಿಲ್ ದೂರು ಅವರು ಹದಿಹರೆಯದವರು ಸೇರಿದಂತೆ ಯುವತಿಯರ ಜೊತೆ ಮಲಗಿದ್ದರು … Continued