ಹಿಂದೂ ಯುವಕನ ಹತ್ಯೆ ಪ್ರಕರಣ: ಹೈದರಾಬಾದ್ ಪೊಲೀಸರಿಂ ವರದಿ ಕೇಳಿದ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ

ನವದೆಹಲಿ: ತೆಲಂಗಾಣದಲ್ಲಿ ನಡೆದಿದೆ ಎನ್ನಲಾದ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಕೈಗೊಂಡ ಕ್ರಮಗಳ ಕುರಿತು ಶುಕ್ರವಾರ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ಹೈದರಾಬಾದ್ ಪೊಲೀಸರಿಂದ ವರದಿ ಕೇಳಿದೆ. 25ರ ಹರೆಯದ ದಲಿತ ಬಿ ನಾಗರಾಜು ಎಂಬಾತ ತನ್ನ ಪತ್ನಿಯೊಂದಿಗೆ ಮೋಟಾರು ಸೈಕಲ್‌ನಲ್ಲಿ ಹೋಗುತ್ತಿದ್ದಾಗ ದಾಳಿ ಮಾಡಿದ ಸೈಯದ್ ಮೊಬಿನ್ ಅಹಮದ್ ಮತ್ತು ಮಹಮ್ಮದ್ ಮಸೂದ್ ಅಹಮದ್ ಸ್ಕೂಟರ್‌ನಲ್ಲಿ … Continued

ಬಿಜೆಪಿ ನಾಯಕ ಬಗ್ಗಾ ಬಂಧನಕ್ಕೆ ಸಿನಿಮೀಯ ತಿರುವು: ದೆಹಲಿಯಲ್ಲಿ ಪಂಜಾಬ್‌ ಪೊಲೀಸರಿಂದ ಬಂಧನ, ಹರ್ಯಾಣದಲ್ಲಿ ಪಂಜಾಬ್‌ ಪೊಲೀಸರಿಗೆ ತಡೆ. ಮತ್ತೆ ದೆಹಲಿಗೆ ವಾಪಸ್‌…!

ನವದೆಹಲಿ: ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ಅವರ ನಿವಾಸದಲ್ಲಿಯೇ ಪಂಜಾಬ್‌ ಪೊಲೀಸರು ಬಂಧಿಸಿದ ನಂತರ ಪ್ರಕರಣವು ಸಿನಿಮೀಯ ರೀತಿಯಲ್ಲಿ ತಿರುವು ಪಡೆದುಕೊಂಡಿದೆ. ದೆಹಲಿಯಲ್ಲಿನ ಬಗ್ಗಾ ಅವರ ನಿವಾಸದಲ್ಲಿ ಶುಕ್ರವಾರ ಬೆಳಿಗ್ಗೆ ಅವರನ್ನು ಬಂಧಿಸಿ ಕರೆದೊಯ್ದಿದ್ದ ಪಂಜಾಬ್ ಪೊಲೀಸರನ್ನು ತಡೆದ ಹರ್ಯಾಣ ಪೊಲೀಸರು, ಬಗ್ಗಾ ಅವರನ್ನು ಬಿಡಿಸಿಕೊಂಡು ಮರಳಿ ದೆಹಲಿಗೆ ಕಳುಹಿಸಿದ್ದಾರೆ. ದೆಹಲಿಯಲ್ಲಿ … Continued

ಕೋವಿಡ್‌ ಉಲ್ಬಣ:ಚೀನಾದಲ್ಲಿ ನಡೆಯಬೇಕಿದ್ದ ಏಷ್ಯನ್ ಗೇಮ್ಸ್ -2022 ಮುಂದೂಡಿಕೆ

ಕೋವಿಡ್ -19 ಕಾರಣದಿಂದಾಗಿ ಚೀನಾದ ನಗರವಾದ ಹ್ಯಾಂಗ್‌ಝೌನಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟವನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ ಎಂದು ಸಂಘಟಕರು ಶುಕ್ರವಾರ ತಿಳಿಸಿದ್ದಾರೆ. ಕ್ರೀಡಾಕೂಟವನ್ನು ಸೆಪ್ಟೆಂಬರ್ 10ರಿಂದ 25ರ ವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಚೀನಾದ ಹಲವಾರು ಭಾಗಗಳಲ್ಲಿ ಸೋಂಕುಗಳ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಹ್ಯಾಂಗ್‌ಝೌ ದೇಶದ ಅತಿದೊಡ್ಡ ನಗರವಾದ ಶಾಂಘೈನಿಂದ 200 ಕಿಲೋಮೀಟರ್‌ಗಳಿಗಿಂತ … Continued

ಬದುಕಿದರೂ ನಿನ್ನ ಜೊತೆ, ಸಾಯುವುದಿದ್ದರೂ ನಿನ್ನ ಜೊತೆ ಎಂದು ನನ್ನ ಗಂಡ ಹೇಳಿದ್ದ; ನನ್ನ ಅಣ್ಣ ನನ್ನ ಎರಡು ಬಾರಿ ಕೊಲ್ಲಲು ಯತ್ನಿಸಿದ್ದ: ಕೊಲೆಯಾದ ನಾಗರಾಜ ಪತ್ನಿ ಆಶ್ರಿನ್ ಸುಲ್ತಾನಾ

ನಾಗರಾಜು ಮತ್ತು ಸೈಯದ್ ಆಶ್ರಿನ್ ಸುಲ್ತಾನಾ ತಮ್ಮ ಪ್ರೀತಿಯು ತಮ್ಮ ಸುರಕ್ಷತೆಗೆ ಅಪಾಯ ಉಂಟುಮಾಡುತ್ತದೆ ಎಂದು ಚೆನ್ನಾಗಿ ತಿಳಿದಿದ್ದರು. ಅವರು ಮದುವೆಯಾಗುವ ಮುಂಚೆಯೇ, ಅವರಿಬ್ಬರಿಗೆ ಬೆದರಿಕೆಗಳು ಮತ್ತು ಕೊಲ್ಲುವ ಪ್ರಯತ್ನಗಳು ಹೊಸದಾಗಿರಲಿಲ್ಲ. ಮುಸ್ಲಿಮರಾದ ಸುಲ್ತಾನಾ ಕುಟುಂಬವು ಹಿಂದೂ ದಲಿತ ನಾಗರಾಜು ಅವರೊಂದಿಗಿನ ಮದುವೆಯನ್ನು ವಿರೋಧಿಸಿತ್ತು. ಮದುವೆ ಬಗ್ಗೆ ಅವರಿಗೆ ಎಷ್ಟು ಸಿಟ್ಟಿತ್ತೆಂದರೆ ಆಕೆಯ ಸಹೋದರ ಅವಳನ್ನು … Continued

2,500 ಕೋಟಿ ಕೊಡಿ ನಿಮ್ಮನ್ನ ಸಿಎಂ ಮಾಡ್ತೀವಿ ಎಂದು ದೆಹಲಿಯಿಂದ ಬಂದ ಕೆಲವರು ಹೇಳಿದ್ರು: ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ ಯತ್ನಾಳ್

ಬೆಳಗಾವಿ: ದೆಹಲಿಯಿಂದ ಕೆಲವರು ನಿಮ್ಮನ್ನು ಮುಖ್ಯಮಂತ್ರಿ ಮಾಡ್ತೀವಿ 2500 ಕೋಟಿ ರೂ. ಕೊಡಿ ಎಂದು ಹೇಳುತ್ತ ಬಂದಿದ್ದರು ಎಂಬ ಸ್ಫೋಟಕ ಹೇಳಿಕೆ ನೀಡಿರುವ ಬಿಜೆಪಿ ಶಾಶಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ರಾಮದುರ್ಗದ ಕಾರ್ಯಕ್ರಮವೊಂದಲ್ಲಿ ಮಾತನಾಡಿದ ಅವರು, ಚುನಾವಣಾ ಸಂದರ್ಭದಲ್ಲಿ ಕೆಲವರು ಹಣ ಮಾಡಲು ಹೀಗೆಲ್ಲ ಮಾಡುತ್ತಾರೆ. ದೆಹಲಿಗೆ ಕರೆದುಕೊಂಡು ಹೋಗಿ ಸೋನಿಯಾಗಾಂಧಿ, ಜೆ.ಪಿ ನಡ್ಡಾ … Continued

ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಕಲಿಕೆ ಕಡ್ಡಾಯ

ಬೆಂಗಳೂರು: ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಕಲಿಕೆ ಕಡ್ಡಾಯಗೊಳಿಸಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ನಿಯಮಾವಳಿ ಪ್ರಕಾರ ಸರ್ಕಾರಿ ನೌಕರರು ಕಂಪ್ಯೂಟರ್ ಪರೀಕ್ಷೆ ಪಾಸಾಗದಿದ್ದರೆ ಮುಂಬಡ್ತಿ, ವಾರ್ಷಿಕ ವೇತನ ಭಡ್ತಿಗೆ ಅರ್ಹರಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಸರ್ಕಾರಿ ಸೇವೆಯಲ್ಲಿರುವ ಡಿ ಗ್ರೂಪ್ ಹೊರತು ಪಡಿಸಿ ಎಲ್ಲ ನೌಕರರಿಗೂ … Continued

“ಮಸೀದಿಯಲ್ಲಿ ಧ್ವನಿವರ್ಧಕ ಬಳಸುವುದು ಮೂಲಭೂತ ಹಕ್ಕಲ್ಲ”: ಧ್ವನಿವರ್ಧಕಗಳಲ್ಲಿ ಅಜಾನ್ ಕೂಗಲು ಅನುಮತಿ ಕೋರಿದ್ದ ಮನವಿ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್

ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ‘ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸುವುದು ಮೂಲಭೂತ ಹಕ್ಕಲ್ಲ’ ಎಂದು ಹೈಕೋರ್ಟ್‌ ಹೇಳಿದೆ. ನ್ಯಾಯಮೂರ್ತಿ ವಿವೇಕಕುಮಾರ್ ಬಿರ್ಲಾ ಮತ್ತು ನ್ಯಾಯಮೂರ್ತಿ ವಿಕಾಸ್ ಅವರಿದ್ದ ವಿಭಾಗೀಯ ಪೀಠವು ಬುಧವಾರ ಈ ಆದೇಶ ನೀಡಿದ್ದು, ‘‘ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವುದು ಸಾಂವಿಧಾನಿಕ ಹಕ್ಕಲ್ಲ ಎಂದು ಹೇಳಿದೆ. ಡಿಸೆಂಬರ್ 3, 2021 … Continued

ಅರವಿಂದ್ ಕೇಜ್ರಿವಾಲ್‌ಗೆ ಬೆದರಿಕೆ: ಬಿಜೆಪಿಯ ತಜೀಂದರ್ ಬಗ್ಗಾ ಬಂಧಿಸಿದ ಪಂಜಾಬ್ ಪೊಲೀಸರು

ನವದೆಹಲಿ: ಪ್ರಚೋದನಕಾರಿ ಹೇಳಿಕೆಗಳು, ಧಾರ್ಮಿಕ ದ್ವೇಷವನ್ನು ಉತ್ತೇಜಿಸುವುದು ಮತ್ತು ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ ದೆಹಲಿ ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ಶುಕ್ರವಾರ ಬೆಳಿಗ್ಗೆ ದೆಹಲಿಯ ನಿವಾಸದಿಂದ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ವಿಡಿಯೋ ಹೇಳಿಕೆಯಲ್ಲಿ ದೆಹಲಿ ಬಿಜೆಪಿ ವಕ್ತಾರ ನವೀನ್ ಕುಮಾರ್ ಜಿಂದಾಲ್ ಅವರು ಸುಮಾರು 50 ಪೊಲೀಸರು ಬೆಳಿಗ್ಗೆ 8:30 … Continued

ಧಾರವಾಡದಲ್ಲಿ ಕ್ಯಾಂಪಸ್‌ ಸಂದರ್ಶನ

ಧಾರವಾಡ: ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ, ಹುಬ್ಬಳ್ಳಿಯ ನಾಗಶಾಂತಿ ಗ್ರುಪ್ ಆಫ್ ಕಂಪನಿಯವರು ಮೇ 7ರಂದು, ಬೆಳಿಗ್ಗೆ 9 ಗಂಟೆಗೆ ಜೆ.ಎಸ್.ಎಸ್ ಉತ್ಸವ ಸಭಾಭವನದಲ್ಲಿ ಕ್ಯಾಂಪಸ್ ಸಂದರ್ಶನ ನಡೆಯಲಿದೆ. ಸಿಇಓ, ಸಿಎಫ್ಓ, ಇನ್ಶೂರೆನ್ಸ್‌ ಹೆಡ್, ಐ.ಟಿ ಅಡ್ಮಿನ್, ಜ್ಯೂನಿಯರ್ ಡಿಜಿಟಲ್ ಮಾರ್ಕೆಟರ್ ಟೆಕ್ನಿಶಿಯನ್ ಹುದ್ದೆಗಳಿಗಾಗಿ ಕ್ಯಾಂಪಸ್ ಸಂದರ್ಶನ … Continued

ಜಿಯೋದಿಂದ ಡಿಸ್ನಿ+ ಹಾಟ್ ಸ್ಟಾರ್ ನೊಂದಿಗೆ ಮೂರು ತಿಂಗಳ ಭರ್ಜರಿ ಆಫರ್

ಬೆಂಗಳೂರು: ರಿಲಯನ್ಸ್ ಜಿಯೋ ಹೊಸದಾಗಿ ನಾಲ್ಕು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಲಾಂಚ್ ಮಾಡಿದೆ. ರೂ 151, ರೂ 333, ರೂ 583 ಮತ್ತು ರೂ 783 ಯೋಜನೆಗಳಾಗಿದ್ದು, ಈ ಎಲ್ಲಾ ಯೋಜನೆಗಳು ಬಳಕೆದಾರರಿಗೆ ಮೂರು ತಿಂಗಳ ಉಚಿತ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ನೀಡುತ್ತದೆ. ಡಿಸ್ನಿ+ ಹಾಟ್ ಸ್ಟಾರ್ ಜೊತೆಗಿನ ಈ ಪಾಲುದಾರಿಕೆಯ ಮೂಲಕ, … Continued