2023ರ ಬಜೆಟ್‌ನಲ್ಲಿ 400 ಹೊಸ ವಂದೇ ಭಾರತ ರೈಲುಗಳ ಘೋಷಣೆ ಸಾಧ್ಯತೆ : ವರದಿ

ನವದೆಹಲಿ: ಸಚಿವಾಲಯದ ಮೂಲಗಳ ಪ್ರಕಾರ, ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಸರಿಸುಮಾರು 300 ರಿಂದ 400 ಹೊಸ ವಂದೇ ಭಾರತ್ ರೈಲುಗಳನ್ನು ಘೋಷಿಸಬಹುದು. 2024ರ ಮೊದಲ ತ್ರೈಮಾಸಿಕದಲ್ಲಿ ಸ್ಲೀಪರ್ ಕೋಚ್‌ಗಳೊಂದಿಗೆ ಮೊದಲ ವಂದೇ ಭಾರತ್ ರೈಲನ್ನು ಹೊರತರಲಾಗುವುದು ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ. ಮಾಧ್ಯಮ ಸಮಾರಂಭದಲ್ಲಿ ಮಾತನಾಡಿದ ರೈಲ್ವೆ ಸಚಿವರು … Continued

ಮದ್ಯದ ವ್ಯಾಪಾರ ಬಿಟ್ಟುಬಿಡಿ, 1 ಲಕ್ಷ ರೂ.ಬಹುಮಾನ ಪಡೆಯಿರಿ: ಮದ್ಯ ನಿಷೇಧ ಬಲಪಡಿಸಲು ಹೊಸ ಯೋಜನೆ ಜಾರಿಗೆ ಮುಂದಾದ ಬಿಹಾರ ಸರ್ಕಾರ

ಪಾಟ್ನಾ: ಬಿಹಾರದಲ್ಲಿ ಮದ್ಯಪಾನ ನಿಷೇಧವನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನದಲ್ಲಿ ಮುಖ್ಯಮಂತ್ರಿ ನಿತೀಶಕುಮಾರ ರಾಜ್ಯದಲ್ಲಿ ಅಕ್ರಮ ಮತ್ತು ನಕಲಿ ಮದ್ಯ ವ್ಯಾಪಾರದ ಹಾವಳಿ ತಡೆಗೆ ಹೊಸ ವಿಧಾನವನ್ನು ಹೊರತಂದಿದ್ದಾರೆ. ಜೀವನೋಪಾಯಕ್ಕಾಗಿ ಮದ್ಯದ ವ್ಯವಹಾರವನ್ನು ತ್ಯಜಿಸುವವರಿಗೆ ತಮ್ಮ ಸರ್ಕಾರ 1 ಲಕ್ಷ ರೂಪಾಯಿ ನೀಡಲಿದೆ ಎಂದುಅವರು ಪ್ರಕಟಿಸಿದ್ದಾರೆ. ಬಿಹಾರದಲ್ಲಿ ಮದ್ಯ ನಿಷೇಧದ ಹಿನ್ನೆಲೆಯಲ್ಲಿ ಈ ಯೋಜನೆ ಬಂದಿದೆ. ಮದ್ಯ … Continued

ಹೊರಬಿದ್ದ ಹೊಸ ಸಿಸಿಟಿವಿ ಕ್ಲಿಪ್‌ನಲ್ಲಿ, ಬಂಧಿತ ದೆಹಲಿ ಸಚಿವರನ್ನು ಜೈಲಿನೊಳಗೆ ಭೇಟಿ ಮಾಡಿದ ಜೈಲಿನ ಮುಖ್ಯಸ್ಥ

ನವದೆಹಲಿ: ಜೈಲಿನಲ್ಲಿರುವ ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್‌ಗೆ ಹೊಸ ತೊಂದರೆ ಉಂಟಾಗಬಹುದು, ಏಕೆಂದರೆ ಅವರ ಜೈಲಿನ ಸೆಲ್‌ನ ಮತ್ತೊಂದು ಸಿಸಿಟಿವಿ ವೀಡಿಯೊ ಹೊರಬಿದ್ದಿದ್ದು, ಅದರಲ್ಲಿ ಜೈನ್‌ ಅತಿಥಿಗಳಿಗೆ ಆತಿಥ್ಯ ನೀಡುತ್ತಿರುವುದನ್ನು ತೋರಿಸುತ್ತದೆ ಮತ್ತು ಈಗ ಅಮಾನತುಗೊಂಡಿರುವ ತಿಹಾರ್ ಜೈಲು ಅಧೀಕ್ಷಕರ ಭೇಟಿಯನ್ನು ಸಹ ಒಳಗೊಂಡಿದೆ. ಚುನಾವಣೆಯಲ್ಲಿ ಬಿಜೆಪಿ ತನ್ನ ನಾಯಕರನ್ನು ಕೆಣಕಲು ಕೇಂದ್ರೀಯ … Continued

ಮಕ್ಕಳ ಜೊತೆ ಅಸಭ್ಯ ವರ್ತನೆ : ಚಾಲಕನನ್ನು ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿದ ಗ್ರಾಮಸ್ಥರು

ಚಿಕ್ಕಮಗಳೂರು: ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ ತೋರಿಸಿ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯೋರ್ವನನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಚಿಕ್ಕಮಗಳೂರಿನ ಸಕ್ಕರಾಯಪಟ್ಟಣದಲ್ಲಿ ಈ ಘಟನೆ ನಡೆದ ವರದಿಯಾಗಿದ್ದು, ಆರೋಪಿ ರಾಜಪ್ಪ ವಿರುದ್ಧ ಚಿಕ್ಕಮಗಳೂರಿನ ಸಕ್ಕರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಇತರ ಸೆಕ್ಷನ್‌ಗಳ … Continued

ಛತ್ತೀಸ್‌ಗಢದ ಬಿಜಾಪುರದಲ್ಲಿ ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ 4 ನಕ್ಸಲರು ಹತ

ರಾಯ್ಪುರ: ಛತ್ತೀಸ್‌ಗಢದ ಬಿಜಾಪುರದಲ್ಲಿ ಶನಿವಾರ ಬೆಳಗಿನ ಜಾವ ನಡೆಸಿದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ನಾಲ್ವರು ನಕ್ಸಲರನ್ನು ಹೊಡೆದುರುಳಿಸಿದ್ದಾರೆ. ಸುಮಾರು 50 ನಕ್ಸಲರು ಆ ಪ್ರದೇಶದಲ್ಲಿನ ಅಭಿವೃದ್ಧಿ ಕಾಮಗಾರಿಗಳ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಲು ಜಮಾಯಿಸಿದ್ದರು ಎಂದು ಪಡೆಗಳು ದಾಳಿ ನಡೆಸಿದವು ಎಂದು ಬಸ್ತಾರ್‌ನ ಪೊಲೀಸ್ ಮಹಾನಿರೀಕ್ಷಕ ಪಿ ಸುಂದರರಾಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೇಂದ್ರೀಯ ಮೀಸಲು … Continued

ಕಿತವಾಡ್ ಫಾಲ್ಸ್: ಸೆಲ್ಫಿ ತೆಗೆಯುವಾಗ ಜಾರಿ ಬಿದ್ದು ಬೆಳಗಾವಿ ನಾಲ್ವರು ಯುವತಿಯರು ನೀರುಪಾಲು

ಬೆಳಗಾವಿ: ಗಡಿ ಭಾಗದಲ್ಲಿರುವ ಮಹಾರಾಷ್ಟ್ರದ ಚಂದಗಡ ತಾಲೂಕಿನ ಕಿತವಾಡ ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದು ಬೆಳಗಾವಿ ನಗರದ ನಾಲ್ವರು ಯುವತಿಯರು ಮೃತಪಟ್ಟಿದ್ದು, ಓರ್ವ ಯುವತಿ ಗಂಭೀರ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದ ವರದಿಯಾಗಿದೆ. ಮೃತರನ್ನು ಬೆಳಗಾವಿ ಉಜ್ವಲ ನಗರದ ಅಸೀಯಾ ಮುಜಾವರ (17 ), ತಸ್ಮೀಯಾ (20 ), ಅನಗೋಳದ ಕುದಶೀಯಾ ಹಾಸಂ‌ ಪಟೇಲ … Continued

ಮಹಾ ಕನ್ನಡಿಗರ ನಕಾಶೆ ನೋಡಿ ಬೆಚ್ಚಿ ಬಿದ್ದ ಮಹಾರಾಷ್ಟ್ರ…!

ಬೆಳಗಾವಿ : ಸದಾ ಗಡಿ ವಿವಾದ ಕೆದಕುವ ಮಹಾರಾಷ್ಟ್ರಕ್ಕೆ ಈ ಬಾರಿ ತುಸು ಹಿನ್ನಡೆಯಾಗಿದೆ. ಯಾಕೆಂದರೆ ಆ ರಾಜ್ಯದಲ್ಲಿರುವ ಕನ್ನಡಿಗರೇ ಸ್ವತಃ ತಮ್ಮನ್ನು ಕರ್ನಾಟಕಕ್ಕೆ ಸೇರಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ಬೆಳವಣಿಗೆ ನೋಡಿ ಇದೀಗ ಮಹಾರಾಷ್ಟ್ರವಾದಿಗಳು ಬೆಚ್ಚಿ ಬಿದ್ದಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರ, ಕೊಲ್ಲಾಪುರ, ಸಾಂಗ್ಲಿ, ಉಸ್ಮಾನಬಾದ್, ಲಾತೂರ್ ಜಿಲ್ಲೆಗಳನ್ನು ಹೊಸ ನಕಾಶೆಯಲ್ಲಿ ಕರ್ನಾಟಕದ ಜೊತೆ ಸೇರಿಸಲಾಗಿದೆ. ಇವೆಲ್ಲವೂ … Continued

ಇಸ್ರೊದಿಂದ ಪಿಎಸ್‌ಎಲ್‌ವಿ-ಸಿ54 ರಾಕೆಟ್, 8 ನ್ಯಾನೊ ಉಪಗ್ರಹ ಬಾಹ್ಯಾಕಾಶಕ್ಕೆ ಯಶಸ್ವಿ ಉಡಾವಣೆ

ಶ್ರೀಹರಿಕೋಟ: ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ (ISRO) ಶನಿವಾರ ಪಿಎಸ್‌ಎಲ್‌ವಿ-ಸಿ 54 ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. Oceansat-3 ಎಂದೂ ಕರೆಯಲ್ಪಡುವ EOS-06 ಮತ್ತು ಎಂಟು ನ್ಯಾನೊ ಉಪಗ್ರಹಗಳನ್ನು ಹೊತ್ತ ರಾಕೆಟ್ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು. PSLV-C54 ಭೂಮಿಯ ವೀಕ್ಷಣಾ ಉಪಗ್ರಹ (EOS-06) ಅಥವಾ ಓಷನ್‌ಸ್ಯಾಟ್ ನ್ನು … Continued

ವಾಟ್ಸಾಪ್ ಡೇಟಾ ಸೋರಿಕೆ: ಭಾರತ ಸೇರಿದಂತೆ 84 ದೇಶಗಳ 50 ಕೋಟಿ ಬಳಕೆದಾರರ ಫೋನ್ ಸಂಖ್ಯೆಗಳ ಸೋರಿಕೆ..?

ಸರಿಸುಮಾರು 48.7 ಕೋಟಿ ವಾಟ್ಸಾಪ್ ಬಳಕೆದಾರರ ಫೋನ್ ಸಂಖ್ಯೆಗಳು ಸೋರಿಕೆಯಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೆಟಾ-ಮಾಲೀಕತ್ವದ ಇನ್‌ಸ್ಟೆಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್‌ ಆಪ್‌ (WhatsApp) ಬಳಕೆದಾರರ ವೈಯಕ್ತಿಕ ಮಾಹಿತಿ ಪ್ರಸಿದ್ಧ ಹ್ಯಾಕಿಂಗ್ ಸಮುದಾಯ ಫೋರಮ್‌ನಲ್ಲಿ ಮಾರಾಟಕ್ಕೆ ಸಿದ್ಧವಾಗಿದೆ ಎಂದು ವರದಿ ಹೇಳಿದೆ. ಸೈಬರ್‌ನ್ಯೂಸ್ ವರದಿಯ ಪ್ರಕಾರ, ಕೆಲವರು ನವೆಂಬರ್ 16 ರಂದು ಹ್ಯಾಕಿಂಗ್ ಸಮುದಾಯದ ವೇದಿಕೆಯಲ್ಲಿ … Continued

ಬಾಲಿವುಡ್‌ ಹಿರಿಯ ನಟ ವಿಕ್ರಮ್ ಗೋಖಲೆ ನಿಧನ

ಪುಣೆ: ಹಿರಿಯ ಚಲನಚಿತ್ರ ಮತ್ತು ಕಿರುತೆರೆ ನಟ ವಿಕ್ರಮ್ ಗೋಖಲೆ ನಿಧನರಾಗಿದ್ದಾರೆ. ಅವರು, ಇಂದು ಶನಿವಾರ (ನವೆಂಬರ್ 26) ಪುಣೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಹಮ್ ದಿಲ್ ದೇ ಚುಕೆ ಸನಮ್ ಮತ್ತು ಭೂಲ್ ಭುಲೈಯಾ ಮುಂತಾದ ಚಿತ್ರಗಳಲ್ಲಿನ ಪಾತ್ರಗಳಿಗೆ ಜನಪ್ರಿಯತೆ ಪಡೆದಿದ್ದ ವಿಕ್ರಮ್ ಗೋಖಲೆ ಅವರು ಈ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. … Continued