75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ…: ಕೇಂದ್ರವು ದೆಹಲಿ ಬಜೆಟ್ ಮಂಡನೆ ತಡೆಹಿಡಿದ ನಂತರ ಪ್ರಧಾನಿ ಮೋದಿಗೆ ಕೇಜ್ರಿವಾಲ್ ಪತ್ರ

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೆಹಲಿ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಲು ಅನುಮೋದನೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ದೇಶದ 75 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ, ಬಜೆಟ್ ಮಂಡನೆಯನ್ನು ತಡೆಹಿಡಿಯಲಾಗಿದೆ” ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ನೀವು ದೆಹಲಿಯ ನಿವಾಸಿಗಳನ್ನು ದ್ವೇಷಿಸುತ್ತೀರಾ ಎಂದು ಪ್ರಧಾನಿಯನ್ನು ಕೇಳಿರುವ ಅವರು, ಬಜೆಟ್ ಮಂಡನೆಗೆ ಸಮ್ಮತಿ ಕೊಡುವ ಮೊದಲು ಮೂಲಸೌಕರ್ಯಕ್ಕಿಂತ ಜಾಹಿರಾತುಗಳ ಮೇಲಿನ ವೆಚ್ಚ ಏಕೆ ಹೆಚ್ಚಿದೆ ಎಂಬುದರ ಕುರಿತು ಕೇಂದ್ರವು ದೆಹಲಿ ಸರ್ಕಾರದಿಂದ ಸ್ಪಷ್ಟೀಕರಣ ಕೋರಿದ ಒಂದು ದಿನದ ನಂತರ ಈ ಪತ್ರ ಬಂದಿದೆ. ಇಂದು ಮಂಗಳವಾರ (ಮಾರ್ಚ್ 21) ದೆಹಲಿ ಬಜೆಟ್ ಮಂಡನೆಯಾಗಬೇಕಿತ್ತು.
“ನೀವು ದೆಹಲಿಯವರಾದ ನಮ್ಮ ಮೇಲೆ ಏಕೆ ಕೋಪಗೊಂಡಿದ್ದೀರಿ?” ದೆಹಲಿಯ ಜನರು ತಮ್ಮ ಬಜೆಟ್ ಅನ್ನು ಅಂಗೀಕರಿಸಲು ಕೈ ಜೋಡಿಸಿ ಪ್ರಧಾನಿಯನ್ನು ವಿನಂತಿಸುತ್ತಿದ್ದಾರೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ನ್ಯೂಸ್ 18 ಕಾರ್ಯಕ್ರಮವೊಂದರಲ್ಲಿ ಅರವಿಂದ್ ಕೇಜ್ರಿವಾಲ್ ಮಾತನಾಡಿರುವ ವಿಡಿಯೋವನ್ನು ಆಪ್ ಸೋಮವಾರ ಹಂಚಿಕೊಂಡಿದೆ. ಮಂಗಳವಾರ (ಮಾರ್ಚ್ 21) ದೆಹಲಿ ಬಜೆಟ್ ಮಂಡನೆಯಾಗುವುದಿಲ್ಲ ಎಂದು ಅದರಲ್ಲಿ ಮುಖ್ಯಮಂತ್ರಿ ಹೇಳುತ್ತಿದ್ದಾರೆ.
ಕೇಂದ್ರ ಸರ್ಕಾರ ಗುಂಡಾಗಿರಿಯನ್ನು ಆಶ್ರಯಿಸುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದರು ಮತ್ತು ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ಕಾರದ ಬಜೆಟ್ ಅನ್ನು ತಡೆಹಿಡಿಯಲಾಗಿದೆ ಎಂದು ಹೇಳಿದರು.
ದೆಹಲಿ ಸರ್ಕಾರವು ಸ್ಪಷ್ಟೀಕರಣವನ್ನು ನೀಡದಿರುವವರೆಗೆ, ಬಜೆಟ್‌ಗೆ ಅನುಮೋದನೆ ಗೃಹ ಸಚಿವಾಲಯದ ಮುಂದೆ (MHA) ಮುಂದೆ ಬಾಕಿ ಉಳಿಯಲಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಗುಲಾಂ ನಬಿ ಆಜಾದ್ ಸ್ಪರ್ಧಿಸಲ್ಲ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement