ಇಂದಿನಿಂದ ಭಕ್ತರ ದರ್ಶನಕ್ಕೆ ತೆರೆದ ಬದರೀನಾಥ ದೇವಸ್ಥಾನ : 15 ಕ್ವಿಂಟಾಲ್ ಹೂಗಳಿಂದ ದೇಗುಲಕ್ಕೆ ಸಿಂಗಾರ | ವೀಕ್ಷಿಸಿ

ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಇರುವ ಬದರೀನಾಥ ದೇಗುಲ ಇಂದು, ಗುರುವಾರ (ಏಪ್ರಿಲ್‌ 27) ಬೆಳಿಗ್ಗೆ 7:10 ಕ್ಕೆ ಧಾರ್ಮಿಕ ವಿಧಿ ವಿಧಾನಗಳು ನಡೆದ ನಂತರ ಭಕ್ತರಿಗೆ ತೆರೆಯಲಾಯಿತು.
ಚಳಿಗಾಲದ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಬದರೀನಾಥ ದೇಗುಲದ ಬಾಗಿಲುಗಳನ್ನು ಮಂತ್ರಘೋಷಗಳೊಂದಿಗೆ ತೆರೆಯಲಾಯ್ತು. ಇಂದು, ಗುರುವಾರ ದೇಗುಲದ ಬಾಗಿಲು ತೆರೆಯುವ ಹಿನ್ನೆಲೆಯಲ್ಲಿ ಇಡೀ ದೇವಸ್ಥಾನವನ್ನು 15 ಕ್ವಿಂಟಲ್ ವಿವಿಧ ಹೂಗಳಿಂದ ಸಿಂಗರಿಸಲಾಗಿತ್ತು. ದೇವಸ್ಥಾನದ ಬಾಗಿಲು ತೆರೆಯುವ ವೇಳೆ ಭಕ್ತರ ಭಕ್ತಯ ಪರಾಕಾಷ್ಠೆ ಮುಗಿಲು ಮುಟ್ಟಿತ್ತು. ಕೀರ್ತನೆಗಳನ್ನು ಹಾಡಿ, ನೃತ್ಯ ಮಾಡಿ ಸಂಭ್ರಮಿಸಿದರು. ಬಳಿಕ ದೇಗುಲದಲ್ಲಿ ವಿವಿಧ ಪೂಜೆಗಳು ನಡೆದವು.
ಉತ್ತರಾಖಂಡದ ನಾಲ್ಕು ಧಾಮಗಳಲ್ಲಿ ಒಂದಾಗಿರುವ ಬದರೀನಾಥ ಧಾಮವು ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ಹಿಮದಿಂದ ಆವೃತವಾದ ಪರ್ವತಗಳ ನಡುವೆ ಇದೆ. ಅಲಕನಂದಾ ನದಿಯ ಬಲದಂಡೆಯಲ್ಲಿರುವ ಈ ದೇವಾಲಯವು ಬದರಿನಾಥನ ಸ್ವಯಂ-ಶೈಲಿಯ ಸಾಲಿಗ್ರಾಮ ಕಲ್ಲಿನ ಪ್ರತಿಮೆಗೆ ನೆಲೆಯಾಗಿದೆ.

ವೈಷ್ಣವರು ಪೂಜಿಸುವ ಭಗವಾನ್ ವಿಷ್ಣುವಿನ 108 ಅವತಾರಗಳಲ್ಲಿ ಬದರಿನಾಥದ ಪವಿತ್ರ ಕ್ಷೇತ್ರವೂ ಒಂದಾಗಿದೆ. ಬದರಿನಾಥ ದೇವಾಲಯದ ಜೊತೆಗೆ, ಬದರಿನಾಥ ಪಟ್ಟಣವು ಪಂಚ ಬದರಿ ದೇವಾಲಯಗಳನ್ನು ಹೊಂದಿದೆ. ಯೋಗ ಧ್ಯಾನ ಬದರಿ, ಭವಿಷ್ಯ ಬದರಿ, ಆದಿ ಬದರಿ ಮತ್ತು ವೃದ್ಧಾ ಬದರಿಗಳನ್ನು ಸಹ ಬದರಿನಾಥ ಪಟ್ಟಣದಲ್ಲಿ ಕಾಣಬಹುದು.

ಪ್ರಮುಖ ಸುದ್ದಿ :-   'ಅಕ್ರಮ' ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ : ಮಹಾರಾಷ್ಟ್ರ ಸೈಬರ್ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್

ಹಿಂದೂ ಧರ್ಮದ ಕಳೆದುಹೋದ ಪ್ರತಿಷ್ಠೆಯನ್ನು ಮರುಸ್ಥಾಪಿಸಲು ಮತ್ತು ರಾಷ್ಟ್ರವನ್ನು ಒಂದುಗೂಡಿಸಲು ಶ್ರೀ ಆದಿ ಶಂಕರಾಚಾರ್ಯರಿಂದ ಬದರಿನಾಥವನ್ನು ಪುನರ್‌ ಪ್ರತಿಷ್ಠಾಪಿಸಿದರು. ಸಾಮಾನ್ಯವಾಗಿ ಇದನ್ನು ಬದರಿ ವಿಶಾಲ ಎಂದು ಕರೆಯಲಾಗುತ್ತದೆ. “ಸ್ಕಂದ ಪುರಾಣದ ಪ್ರಕಾರ, ಭಗವಾನ್ ಬದರಿನಾಥನ ವಿಗ್ರಹವನ್ನು ಆದಿಗುರು ಶಂಕರಾಚಾರ್ಯರು ನಾರದ ಕುಂಡದಿಂದ ಮರುಪಡೆದರು ಮತ್ತು ಈ ದೇವಾಲಯದಲ್ಲಿ 8ನೇ ಶತಮಾನದಲ್ಲಿ ಮರು ಪ್ರತಿಷ್ಠಾಪಿಸಲಾಯಿತು.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement