ಲೂಧಿಯಾನದಲ್ಲಿ ಅನಿಲ ಸೋರಿಕೆಯಿಂದ 11 ಸಾವು, 11 ಮಂದಿ ಅಸ್ವಸ್ಥ

ಲುಧಿಯಾನ: ಭಾನುವಾರ ಪಂಜಾಬ್‌ನ ಲೂಧಿಯಾನದಲ್ಲಿ ಅನಿಲ ಸೋರಿಕೆಯಾದ ಘಟನೆಯಲ್ಲಿ 11 ಜನರು ಸಾವಿಗೀಡಾಗಿದ್ದಾರೆ ಮತ್ತು 11 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ದಟ್ಟವಾದ ಜನನಿಬಿಡ ವಸತಿ-ಕೈಗಾರಿಕಾ ಪ್ರದೇಶವಾದ ಗಿಯಾಸ್ಪುರದಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ 7:30ಕ್ಕೆ ಕಿರಾಣಿ ಅಂಗಡಿಯಿಂದ ಗ್ಯಾಸ್ ಸೋರಿಕೆಯಾಗಿದೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೈದ್ಯರ ತಂಡ ಮತ್ತು ಆಂಬ್ಯುಲೆನ್ಸ್‌ಗಳನ್ನು ಕೂಡ ಸ್ಥಳಕ್ಕೆ ಕರೆಸಲಾಯಿತು. ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡ ಸ್ಥಳದಲ್ಲಿದೆ.
ಮೃತರಲ್ಲಿ ಆರು ಪುರುಷರು ಮತ್ತು ಐವರು ಮಹಿಳೆಯರು ಸೇರಿದ್ದಾರೆ. ಅವರನ್ನು ಸೌರವ್ (35), ವರ್ಷ (35), ಆರ್ಯನ್ (10), ಚುಲು (16), ಅಭಯ್ (13), ಕಲ್ಪೇಶ್ (40), ಅಪರಿಚಿತ ಮಹಿಳೆ (40), ಅಪರಿಚಿತ ಮಹಿಳೆ (25), ಅಪರಿಚಿತ ಪುರುಷ ( 25), ನೀತು ದೇವಿ ಮತ್ತು ನವನೀತ್ ಕುಮಾರ್ ಎಂಬವರು ಸೇರಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಿನವರು ವಲಸೆ ಕಾರ್ಮಿಕರು.

ಕಿರಾಣಿ ಅಂಗಡಿಯೊಳಗೆ ನಾಲ್ಕು ಡೀಪ್ ಫ್ರೀಜರ್‌ಗಳನ್ನು ಇರಿಸಲಾಗಿತ್ತು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಅಂಗಡಿಯಿಂದ ದಿನಸಿ ತರಲು ಹೋದವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅಲ್ಲದೇ ಜನರನ್ನು ರಕ್ಷಿಸಲು ಹೋದವರೂ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ಫ್ರೀಜರ್‌ಗಳಿಂದ ಅನಿಲ ಸೋರಿಕೆಯಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಇನ್ನೂ ಅನೇಕರು ತಮ್ಮ ಮನೆಗಳಲ್ಲಿ ಸಿಲುಕಿಕೊಂಡಿರುವ ಭಯವಿದೆ. ಮನೆಗಳು ಮತ್ತು ಕಾರ್ಖಾನೆಗಳನ್ನು ಸ್ಥಳಾಂತರಿಸಲಾಗಿದೆ ಮತ್ತು ಇಡೀ ಪ್ರದೇಶವನ್ನು ಸೀಲ್ ಮಾಡಲಾಗಿದೆ.ಇದು ಅನಿಲ ಸೋರಿಕೆ ಪ್ರಕರಣವಾಗಿದೆ. ಜನರನ್ನು ಸ್ಥಳಾಂತರಿಸಲು ಎನ್‌ಡಿಆರ್‌ಎಫ್ ತಂಡ ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಿದೆ” ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

ಎನ್‌ಡಿಆರ್‌ಎಫ್ 35 ಸದಸ್ಯರನ್ನು ಒಳಗೊಂಡ ರಾಸಾಯನಿಕ, ಜೈವಿಕ, ರೇಡಿಯೊಲಾಜಿಕಲ್ ಮತ್ತು ನ್ಯೂಕ್ಲಿಯರ್ (ಸಿಬಿಆರ್‌ಎನ್) ತಂಡವನ್ನು ನಿಯೋಜಿಸಿದೆ, ಅವರು ಅನಿಲ ಸೋರಿಕೆ ಘಟನೆಗಳನ್ನು ನಿಭಾಯಿಸುವಲ್ಲಿ ಪರಿಣತರಾಗಿದ್ದಾರೆ.
“ಪ್ರದೇಶವನ್ನು ಪ್ರತ್ಯೇಕಿಸಲಾಗುತ್ತಿದೆ ಮತ್ತು ಅನಿಲದ ಮೂಲವನ್ನು ಗುರುತಿಸಲಾಗುತ್ತಿದೆ” ಎಂದು ಎನ್‌ಡಿಆರ್‌ಎಫ್ ಇನ್ಸ್‌ಪೆಕ್ಟರ್ ಜನರಲ್ (ಐಜಿ) ನರೇಂದ್ರ ಬುಂದೇಲಾ ಹೇಳಿದ್ದಾರೆ.
ಟ್ವಿಟರ್‌ನಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಘಟನೆಯನ್ನು “ದುಃಖಕರ” ಎಂದು ಬಣ್ಣಿಸಿದ್ದಾರೆ ಮತ್ತು ಸಾಧ್ಯವಿರುವ ಎಲ್ಲ ನೆರವನ್ನೂ ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.”ಲುಧಿಯಾನದ ಗಿಯಾಸ್ಪುರ ಪ್ರದೇಶದಲ್ಲಿ ಅನಿಲ ಸೋರಿಕೆಯ ಘಟನೆಯು ತುಂಬಾ ದುಃಖಕರವಾಗಿದೆ. ಪೊಲೀಸ್, ಆಡಳಿತ ಮತ್ತು NDRF ತಂಡಗಳು ಸ್ಥಳದಲ್ಲಿವೆ. ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುತ್ತಿದೆ” ಎಂದು ಮನ್ ಪಂಜಾಬಿಯಲ್ಲಿ ಟ್ವೀಟ್ ಮಾಡಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement