ಮೈಯಲ್ಲಿ ಹೊಕ್ಕ ‘ಭೂತʼ ಓಡಿಸಲು ಮಾಂತ್ರಿಕನಿಂದ ಬಾಲಕನಿಗೆ ಥಳಿತ : ಗಾಯಗಳಿಂದ ಬಾಲಕ ಸಾವು

ಮುಂಬೈ,: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ 14 ವರ್ಷದ ಅಸ್ವಸ್ಥ ಬಾಲಕನೊಬ್ಬನಿಗೆ ಮೈಯಲ್ಲಿ ಹೊಕ್ಕಿರುವ ಭೂತ ಬಿಡಿಸುವುದಾಗಿ ಹೇಳಿ ಮಾಂತ್ರಿಕರೊಬ್ಬರು ತೀವ್ರವಾಗಿ ಥಳಿಸಿದ ನಂತರ ಆತ ಸಾವಿಗೀಡಾಗಿದ್ದಾನೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಜಿಲ್ಲೆಯ ಕವಠೆ ಮಹಾಂಕಲ್‌ನಲ್ಲಿ ವಾಸವಿದ್ದ ಆರ್ಯನ್ ದೀಪಕ್ ಲಾಂಜೆ ಎಂಬ ಹದಹರೆಯದ ಬಾಲಕ ಮೇ 20 ರಂದು ಗಾಯಗೊಂಡು ಮೃತಪಟ್ಟಿದ್ದಾನೆ. ಆದರೆ ಮೂಢನಂಬಿಕೆ ವಿರೋಧಿ ಕಾರ್ಯಕರ್ತರು ಪೊಲೀಸರನ್ನು ಸಂಪರ್ಕಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿ ಹೇಳಿದರು.
ಮೂಢನಂಬಿಕೆ ಮತ್ತು ಅಂಧಶ್ರದ್ಧೆ ನಿರ್ಮೂಲನೆಗಾಗಿ ಶ್ರಮಿಸುತ್ತಿರುವ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಕಾರ್ಯಕರ್ತರು ದೂರಿನಂತೆ ದೀಪಕ ಲಾಂಜೆಗೆ ಹಲವು ದಿನಗಳಿಂದ ಜ್ವರವಿತ್ತು, ಚಿಕಿತ್ಸೆ ನೀಡಿದರೂ ಕಡಿಮೆಯಾಗಿರಲಿಲ್ಲ. ಕುಟುಂಬವು ಆತನನ್ನು ನೆರೆಯ ಕರ್ನಾಟಕದ ಶಿರಗೂರಿನ ‘ಮಾಂತ್ರಿಕ’ ಅಪ್ಪಾಸಾಹೇಬ್ ಕಾಂಬಳೆ ಎಂಬಾತನ ಬಳಿಗೆ ಕರೆದೊಯ್ದರು ಎಂದು ಅಧಿಕಾರಿ ಹೇಳಿದರು.

ಹುಡುಗನಿಗೆ “ಭೂತ” ಹಿಡಿದಿದೆ ಎಂದು ಕಾಂಬ್ಳೆ ಹೇಳಿಕೊಂಡಿದ್ದಾನೆ ಮತ್ತು ಮಾಂತ್ರಿಕ ಭೂತವನ್ನು ಓಡಿಸಲು ಬಾಲಕನಿಗೆ ಥಳಿಸಿದ್ದಾನೆ. ಆದರೆ, ಥಳಿತದಿಂದ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು, ನಂತರ ಆತನನ್ನು ಕುಟುಂಬಸ್ಥರು ಶಿರ್ಗೂರಿನಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಸಾಂಗ್ಲಿ ಜಿಲ್ಲೆಯ ಮೀರಜ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ವೇಳೆ ಬಾಲಕ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಕನ ಸಾವಿನ ಬಗ್ಗೆ ತಿಳಿದ ನಂತರ, ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಕಾರ್ಯಕರ್ತರು ಆತನ ಕುಟುಂಬ ಸದಸ್ಯರನ್ನು ಮತ್ತು ನಂತರ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಜಿತೇಂದ್ರ ಶಹಾನೆ ಅವರನ್ನು ಕವಠೆ ಮಹಂಕಲ್ ಪೊಲೀಸ್ ಠಾಣೆಯಲ್ಲಿ ಭೇಟಿಯಾಗಿ ದೂರು ದಾಖಲಿಸಿದ್ದಾರೆ.
ಘಟನೆ ಮಹಾರಾಷ್ಟ್ರ ಗಡಿಯ ಕರ್ನಾಟಕದಲ್ಲಿ ನಡೆದಿದ್ದು, ಆದರೆ ಕರ್ನಾಟಕದಲ್ಲಿ ಯಾವುದೇ ಮೂಢನಂಬಿಕೆ ವಿರೋಧಿ ಕಾನೂನು ಇಲ್ಲದಿರುವುದರಿಂದ, ಮಂತ್ರವಾದಿಯ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಶೂನ್ಯ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.
ಶೂನ್ಯ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ಯಾವುದೇ ಪೊಲೀಸರಿಗೆ ದೂರನ್ನು ಸ್ವೀಕರಿಸಲು ಮತ್ತು ಕ್ರಮಕ್ಕಾಗಿ ಸೂಕ್ತ ಠಾಣೆಗೆ ರವಾನಿಸಲು ಅನುಮತಿಸುತ್ತದೆ.

ಪ್ರಮುಖ ಸುದ್ದಿ :-   ವೀಡಿಯೊ...| ಬೈಕ್​ಗೆ ಡಿಕ್ಕಿ ಹೊಡೆದ ನಂತ್ರ ದೂರ ಎಳೆದೊಯ್ದ ಲಾರಿ..: ಟ್ರಕ್‌ ಹಿಡಿದುಕೊಂಡು ನೇತಾಡುತ್ತಿದ್ದ ಸವಾರ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement