ವಿಜ್ಞಾನದ ತತ್ವಗಳು ವೇದಗಳಿಂದ ಬಂದಿವೆ, ಆದರೆ ಪಾಶ್ಚಾತ್ಯ ಜ್ಞಾನದಂತೆ ಪ್ರತಿಬಿಂಬಿಸಲಾಗಿದೆ: ಇಸ್ರೋ ಅಧ್ಯಕ್ಷ ಸೋಮನಾಥ

ಬೀಜಗಣಿತ, ವರ್ಗಮೂಲಗಳು, ಸಮಯದ ಪರಿಕಲ್ಪನೆಗಳು, ವಾಸ್ತುಶಿಲ್ಪ, ಬ್ರಹ್ಮಾಂಡದ ರಚನೆ, ಲೋಹಶಾಸ್ತ್ರ, ವಾಯುಯಾನ ಇವುಗಳ ಮೂಲತತ್ವಗಳು ಮೊದಲು ವೇದಗಳಲ್ಲಿ ಕಂಡುಬಂದವು, ಇವು ಅರಬ್ ದೇಶಗಳ ಮೂಲಕ ಯುರೋಪಿಗೆ ಪ್ರಯಾಣಿಸಿ, ನಂತರ ಪಶ್ಚಿಮ ದೇಶಗಳ ವಿಜ್ಞಾನಿಗಳ ಆವಿಷ್ಕಾರಗಳಾಗಿ ಪ್ರತಿಪಾದಿಸಲ್ಪಟ್ಟವು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧ್ಯಕ್ಷ ಎಸ್ ಸೋಮನಾಥ ಅವರು ಬುಧವಾರ ಹೇಳಿದ್ದಾರೆ.
ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷರೂ ಆದ ಸೋಮನಾಥ ಅವರು, ವಿಜ್ಞಾನದ ತತ್ವಗಳು ಮತ್ತು ಆಧುನಿಕ ಆವಿಷ್ಕಾರಗಳು, ಸಿದ್ಧಾಂತಗಳು ಮತ್ತು ಪರಿಕಲ್ಪನೆಗಳು ವಿಶಾಲವಾಗಿ ವೇದಗಳ ಜ್ಞಾನ ಮತ್ತು ಸಾಹಿತ್ಯವನ್ನು ಆಧರಿಸಿವೆ. ಆ ಕಾಲದ ಭಾರತೀಯ ವಿಜ್ಞಾನಿಗಳು ಬಳಸುತ್ತಿದ್ದ ಭಾಷೆಯಾದ ಸಂಸ್ಕೃತಕ್ಕೆ ಲಿಖಿತ ಲಿಪಿ ಇರಲಿಲ್ಲ. ಹೀಗಾಗಿ ಅದನ್ನು ಆಲಿಸಲಾಯಿತು ಮತ್ತು ಒಬ್ಬರಿಂದ ಒಬ್ಬರಿಗೆ ಹೇಳುತ್ತ ಬರಲಾಯಿತು. ಆದರೆ ನಂತರ ಜನರು ಸಂಸ್ಕೃತಕ್ಕೆ ದೇವನಾಗರಿ ಲಿಪಿಯನ್ನು ಬಳಸಲಾರಂಭಿಸಿದರು ಎಂದು ಅವರು ಹೇಳಿದರು.

ಸೋಮನಾಥ ಅವರು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಮಹರ್ಷಿ ಪಾಣಿನಿ ಸಂಸ್ಕೃತ ಮತ್ತು ವೈದಿಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾತನಾಡಿದರು. ಪಾಣಿನಿ ಸಂಸ್ಕೃತ ವ್ಯಾಕರಣದ ನಿಯಮಗಳನ್ನು ಬರೆದ ವ್ಯಕ್ತಿ ಎಂದು ನಂಬಲಾಗಿದೆ. ಭಾಷೆಯ ಸಿಂಟ್ಯಾಕ್ಸ್ ಮತ್ತು ರಚನೆಯು “ವೈಜ್ಞಾನಿಕ ಆಲೋಚನೆಗಳು ಮತ್ತು ಪ್ರಕ್ರಿಯೆಗಳನ್ನು ತಿಳಿಸಲು” ಸೂಕ್ತವಾಗಿದೆ ಎಂದು ಹೇಳಿದರು. “ಎಂಜಿನಿಯರ್‌ಗಳು ಮತ್ತು ವಿಜ್ಞಾನಿಗಳು ಸಂಸ್ಕೃತವನ್ನು ಹೆಚ್ಚು ಇಷ್ಟಪಡುತ್ತಾರೆ. ಇದು ಕಂಪ್ಯೂಟರ್‌ಗಳ ಭಾಷೆಗೆ ಸರಿಹೊಂದುತ್ತದೆ ಮತ್ತು ಕೃತಕ ಬುದ್ಧಿಮತ್ತೆಯನ್ನು ಕಲಿಯುವವರು ಅದನ್ನು ಕಲಿಯುತ್ತಾರೆ. ಲೆಕ್ಕಾಚಾರಕ್ಕೆ ಅಥವಾ ಎಣಿಕೆಗೆ (computation) ಸಂಸ್ಕೃತವನ್ನು ಹೇಗೆ ಬಳಸಬಹುದು ಎಂಬುದರ ಕುರಿತು ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು.
ಸಂಸ್ಕೃತಕ್ಕೆ ಇತರ ಪ್ರಯೋಜನಗಳಿವೆ, ಇವು ವಿಜ್ಞಾನವನ್ನು ಮೀರಿ ವಿಸ್ತರಿಸುತ್ತವೆ. ಸಂಸ್ಕೃತದಲ್ಲಿ ಬರೆಯಲ್ಪಟ್ಟ ಭಾರತೀಯ ಸಾಹಿತ್ಯವು ಅದರ ಮೂಲ ಮತ್ತು ತಾತ್ವಿಕ ರೂಪದಲ್ಲಿ ಅತ್ಯಂತ ಶ್ರೀಮಂತವಾಗಿದೆ. ಇದು ವೈಜ್ಞಾನಿಕ ರೂಪದಲ್ಲಿಯೂ ಮುಖ್ಯವಾಗಿದೆ. ಸಂಸ್ಕೃತದಲ್ಲಿ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಅಧ್ಯಯನದ ಪ್ರತ್ಯೇಕತೆ ಇಲ್ಲ ಎಂದು ಅಭಿಪ್ರಾಯಪಟ್ಟರು.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

ಸಾವಿರಾರು ವರ್ಷಗಳ ಭಾರತೀಯ ಸಂಸ್ಕೃತಿಯ ಪಯಣದಲ್ಲಿ ಸಂಸ್ಕೃತದಲ್ಲಿ ವಿಜ್ಞಾನಿಗಳ ಕೊಡುಗೆಯ ಛಾಪನ್ನು ಕಾಣಬಹುದು. “ಖಗೋಳಶಾಸ್ತ್ರ, ಔಷಧ, ವಿಜ್ಞಾನ, ಭೌತಶಾಸ್ತ್ರ, ರಾಸಾಯನಿಕ ವಿಜ್ಞಾನ ಮತ್ತು ವೈಮಾನಿಕ ವಿಜ್ಞಾನಗಳ ಸಂಶೋಧನೆಗಳ ಬಗ್ಗೆ ಸಂಸ್ಕೃತದಲ್ಲಿ ಬರೆಯಲಾಗಿದೆ. ಆದರೆ ಅದರ ಬಗ್ಗೆ ಸಂಪೂರ್ಣವಾಗಿ ಸಂಶೋಧಿಸಲಿಲ್ಲ ಎಂದು ಅವರು ಗಮನಸೆಳೆದರು ಮತ್ತು 8 ನೇ ಶತಮಾನದ ಡೇಟಾ ಎಂದು ನಂಬಲಾದ ಖಗೋಳಶಾಸ್ತ್ರದ ಪುಸ್ತಕವಾದ ಸೂರ್ಯ ಸಿದ್ಧಾಂತದ ಉದಾಹರಣೆಯನ್ನು ನೀಡಿದರು. “ರಾಕೆಟ್ ವಿಜ್ಞಾನಿಯಾಗಿದ್ದ ನಾನು ಸೌರವ್ಯೂಹ, ಸಮಯದ ಪ್ರಮಾಣ ಮತ್ತು ಭೂಮಿಯ ಗಾತ್ರ ಮತ್ತು ಸುತ್ತಳತೆಯ ಬಗ್ಗೆ ಮಾತನಾಡುವ ಸಂಸ್ಕೃತದ ಈ ಪುಸ್ತಕದಿಂದ ಆಕರ್ಷಿತನಾಗಿದ್ದೆ” ಎಂದು ಅವರು ಹೇಳಿದರು.
ಚಂದ್ರಯಾನ-3 ಮತ್ತು ಸೂರ್ಯನನ್ನು ಅಧ್ಯಯನ ಮಾಡಲು ಆದಿತ್ಯ-1 ಮಿಷನ್ ಸೇರಿದಂತೆ ಹಲವಾರು ಪ್ರಮುಖ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಇಸ್ರೋ ಕಾರ್ಯನಿರ್ವಹಿಸುತ್ತಿದೆ.

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement