ಟಿಎಂಸಿಯಿಂದ ಬಿಜೆಪಿಗೆ ಸಾಮೂಹಿಕ ವಲಸೆ ತಡೆಗೆ ನಿರ್ಧಾರ

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್‌ನಿಂದ  ಬಿಜೆಪಿಗೆ ಸಾಮೂಹಿಕ ವಲಸೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿರು ತಮ್ಮ ಪಕ್ಷ ಆಡಳಿತ ಪಕ್ಷದ “ಬಿʼ ಟೀಮ್‌ ಆಗಲು ಇಷ್ಟಪಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಮುಂದೆ ಪಕ್ಷದ ಸ್ಥಳಿಯ  ಮುಖಂಡರ ಸಲಹೆ ಪಡೆದುಕೊಂಡು ಆಯ್ಕೆ ಮಾಡಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಬಿಜೆಪಿ  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗಿಯ ತಿಳಿಸಿದ್ದಾರೆ.

ತೃಣಮೂಲ ಕಾಂಗ್ರೆಸ್‌ ಶಾಸಕ ದೀಪಕ ಹಲ್ದರ  ಟಿಎಂಸಿ ತೊರೆದು ಬಿಜೆಪಿ ಸೇರ್ಪಡೆಗೊಂಡ ದಿನವೇ ಬಿಜೆಪಿ ಘೋಷಣೆ ಮಾಡಿದೆ. ಶುದ್ಧ ಚಾರಿತ್ರ್ಯ ಹೊಂದಿರದ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡವರು ನಮ್ಮ ಪಕ್ಷಕ್ಕೆ ಬರುವುದು ನಮಗೆ ಬೇಕಾಗಿಲ್ಲ. ಆದ್ದರಿಂದ ಸಾಮೂಹಿಕ ವಲಸೆಯನ್ನು ಮುಂದೆ ನಾವು ಬಯಸುವುದಿಲ್ಲ. ಆಯ್ಕೆ ಮಾಡಿ ಯೋಗ್ಯರನ್ನು ಮಾತ್ರ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಕೈಲಾಶ್‌ ತಿಳಿಸಿದ್ದಾರೆ.

ಟಿಎಂಸಿ ಪಕ್ಷದಿಂದ ಬಿಜೆಪಿಗೆ ಬರುವವರಿಗೆ ಪ್ರಾಶಸ್ತ್ಯ ನೀಡುತ್ತಿರುವುದು ಮೂಲ ಬಿಜೆಪಿಗರ ಕಣ್ಣು ಕೆಂಪಾಗಿಸಿದ್ದರಿಂದ ಪಕ್ಷ ಈ ನಿರ್ಧಾರ ತೆಗೆದುಕೊಂಡಿದೆ. ಅಲ್ಲದೇ ರಾಜ್ಯದ ಆರ್‌ಎಸ್‌ಎಸ್‌ ಮುಖಂಡರು ಕೂಡ ಟಿಎಂಸಿಯಿಂದ ಸಾಮೂಹಿಕವಾಗಿ ಬಿಜೆಪಿಗೆ ಸೇರ್ಪಡೆಗೊಳ್ಳುವವರ ಬಗ್ಗೆ ಅಪಸ್ವರ ಎತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ಪ್ರಮುಖ ಮಾವೋವಾದಿ ನಾಯಕ ಸೇರಿ 29 ಮಂದಿ ಮಾವೋವಾದಿಗಳನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ ಭದ್ರತಾ ಪಡೆಗಳು

೨೦೧೯ರ ಲೋಕಸಭಾ ಚುನಾವಣೆ ನಂತರ ಟಿಎಂಸಿಯ ೧೮ ಶಾಸಕರು ಹಾಗೂ ಒಬ್ಬ ಸಂಸದ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಅಲ್ಲದೇ ಮೂವರು ಸಿಪಿಐ (ಎಂ) , ಸಿಪಿಐ ಹಾಗೂ ಕಾಂಗ್ರೆಸ್‌ ಪಕ್ಷದ ತಲಾ ಒಬ್ಬರು‌ ಶಾಸಕ ಕೂಡ ಕೇಸರಿ ಪಡೆಯನ್ನು ಸೇರಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement