ಕುಮಟಾ: ಮಿರ್ಜಾನ-ಕೋಡ್ಕಣಿಯ ವೈದ್ಯ ಡಾ. ರತ್ನಾಕರ ಶಾನಭಾಗ ನಿಧನ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಮಿರ್ಜಾನ-ಕೋಡ್ಕಣಿಯ ಹೆಸರಾಂತ ವೈದ್ಯರಾಗಿದ್ದ ಡಾ. ರತ್ನಾಕರ ರಾಮ ಶಾನಭಾಗ (77) ಗುರುವಾರ ತಡರಾತ್ರಿ ನಿಧನರಾಗಿದ್ದಾರೆ. ಕಳೆದ ವಾರ ಮಿರ್ಜಾನ ಬಳಿ ನಡೆದ ರಿಕ್ಷಾ ಅಪಘಾತದಲ್ಲಿ ಗಾಯಗೊಂಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಅಪಾರ … Continued

ಕುಮಟಾ : ಬಾಳಿಗಾ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿಗಳಿಗೆ ಸಂಭವನೀಯ ಅಪಾಯದಿಂದ ಪಾರಾಗುವ ಬಗ್ಗೆ ಪ್ರಾತ್ಯಕ್ಷಿಕೆ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ.ಎ. ವಿ. ಬಾಳಿಗಾ ಮಹಾವಿದ್ಯಾಲಯದಲ್ಲಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪದವಿಪೂರ್ವ ವಿದ್ಯಾರ್ಥಿಗಳಿಗೆ ಸಂಭವನೀಯ ಅಪಾಯದಿಂದ ಪಾರಾಗುವ ಕುರಿತು ಸೋಮವಾರ ಮಾಹಿತಿ ನೀಡಲಾಯಿತು. ಅಗ್ನಿಶಾಮಕ ದಳದ ಎಸ್. ಪಿ. ರಾಘವೇಂದ್ರ ಪಟಗಾರ ಮಾಹಿತಿ ನೀಡಿ, ಎಲ್ ಪಿ ಜಿ ಗ್ಯಾಸ್, ನೀರಿನಲ್ಲಿ ಮುಳುಗುತ್ತಿರುವವರ ರಕ್ಷಣೆ, ವಿದ್ಯುತ್ … Continued

ಉತ್ತರ ಕನ್ನಡ ಜಿಲ್ಲೆಯ 9 ತಾಲೂಕುಗಳು ಬರ ಪೀಡಿತ : ಸರ್ಕಾರ ಘೋಷಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ 9 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ. ರಾಜ್ಯದ 195 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಅದರಲ್ಲಿ 161 ತೀವ್ರ ಬರ ಪೀಡಿತ ತಾಲೂಕುಗಳು ಹಾಗೂ 34 ತಾಲೂಕುಗಳನ್ನು ಸಾಧಾರಣ ಬರ ಪೀಡಿತ ಎಂದು ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ವಿಭಾಗದ ಸರ್ಕಾರದ‌ ಜಂಟಿ ಕಾರ್ಯದರ್ಶಿ ಟಿ.ಸಿ.ಕಾಂತರಾಜ್ … Continued

ಶಿಕ್ಷಕರದ್ದು ವೈವಿಧ್ಯಮಯ ಪಾತ್ರ….

(ಶಿಕ್ಷಕರ ದಿನಾಚರಣೆ ನಿಮಿತ್ತ ಲೇಖನ) ಭಾರತದಲ್ಲಿ ಶಿಕ್ಷಣ ಪದ್ಧತಿಯು ಮಹಾಭಾರತದ ಕಾಲದಿಂದ ಆರಂಭಗೊಂಡಿದ್ದು ದ್ರೋಣಾಚಾರ‍್ಯ, ಸೌಂದೀಪಿನಿ ಮುನಿ, ವಶಿಷ್ಠ ಋಷಿ ಮುಂತಾದವರು ಆಚಾರ‍್ಯ ಗುರುಗಳಾಗಿ ಅನೇಕ ಶಿಷ್ಯರನ್ನು ನಾಡಿಗೆ ನೀಡಿದ್ದು, ಈ ಪರಂಪರೆ ಈಗಲೂ ಮುಂದುವರೆದಿದೆ. ಟ್ಯಾಗೋರ್ ಅವರು “ಶಿಕ್ಷಕ ಸ್ವತಃ ಕಲಿಕೆಯಲ್ಲಿ ತೊಡಗದೇ ಇದ್ದರೆ, ಇನ್ನಿತರರಿಗೆ ಪರಿಣಾಮಕಾರಿಯಾಗಿ ಬೋಧಿಸಲಾರ” ಎಂದು ಹೇಳಿದ್ದರು. ಇಂದು ಶಿಕ್ಷಕರು … Continued

ಶ್ರೀ ಲಕ್ಷ್ಮೀ ನರಸಿಂಹ ದೇವರಿಗೆ ಲಕ್ಷಾಧಿಕ ತುಳಸಿ ದಳದಿಂದ ಅರ್ಚನೆ

ಕುಮಟಾ : ತಾಲೂಕಿನ ಹೊಲನಗದ್ದೆ ತೆಪ್ಪದಮಠದ ಶ್ರೀ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ಭಾನುವಾರ ಲಕ್ಷಾಧಿಕ ತುಳಸಿ ದಳದಿಂದ ಪೂಜೆ ನಡೆಯಿತು. ಸತತವಾಗಿ 10 ವರ್ಷದಿಂದ ಪ್ರತಿವರ್ಷ ವಾರ್ಷಿಕವಾಗಿ ಲಕ್ಷಾಧಿಕ ತುಳಸಿದಳದಿಂದ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ. ಈವರ್ಷ ಅಧಿಕ ಮಾಸ ಇರುವುದರಿಂದ ಈ ಸಂದರ್ಭದಲ್ಲಿ ನಾಡಿನ ಕ್ಷೇಮಕ್ಕಾಗಿ ನಡೆಸುವ ಈ ಪೂಜೆಯಿಂದ ಜನರಿಗೆ ಅಧಿಕ ಫಲ ಪ್ರಾಪ್ತಿಯಾಗುವದು ಎಂದು … Continued

ಹೊಲನಗದ್ದೆಯ ಗ್ರಾಪಂ ಅಧ್ಯಕ್ಷರಾಗಿ ಎಂ. ಎಂ. ಹೆಗಡೆ ಆಯ್ಕೆ

ಕುಮಟಾ: ತಾಲೂಕಿನ ಹೊಲನಗದ್ದೆಯ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಭಾರತೀಯ ಜನತಾ ಪಕ್ಷದ ಎಂ. ಎಂ. ಹೆಗಡೆ ಹಾಗೂ ಉಪಾಧ್ಯಕ್ಷರಾಗಿ ಮಹಾಂತೇಶ ಹರಿಕಂತ್ರ ಅವರು ಆಯ್ಕೆಯಾಗಿದ್ದಾರೆ. ಸತತವಾಗಿ 5 ಬಾರಿ ಆಯ್ಕೆಯಾಗಿದ್ದ ವೇಳೆ ಗ್ರಾಮ ಪಂಚಾಯತ ಅಧ್ಯಕ್ಷ ಸ್ಥಾನದಿಂದ ವಂಚಿತವಾಗಿದ್ದ ಎಂ.ಎಂ. ಹೆಗಡೆ ಅವರು ಕೊನೆಗೂ 6ನೇ ಬಾರಿ ಗಾಪಂಗೆ ಆಯ್ಕೆಯಾಗಿರುವ ವೇಳೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎಂ.ಎಂ. … Continued

ಕುಮಟಾ: ಜುಲೈ 23ರಂದು ಗಂಧರ್ವ ಕಲಾಕೇಂದ್ರದ ವಾರ್ಷಿಕೋತ್ಸವ

ಕುಮಟಾ: ಇಲ್ಲಿನ ಗಂಧರ್ವ ಕಲಾಕೇಂದ್ರದ ವಾರ್ಷಿಕೋತ್ಸವ ಜುಲೈ 23, ಭಾನುವಾರ ಮೂರೂರು ರಸ್ತೆಯಲ್ಲಿರುವ ಹವ್ಯಕ ಸಭಾಭವನದಲ್ಲಿ ನಡೆಯಲಿದೆ. ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ವಿವಿಧ ಕಲಾವಿದರು ಹಾಗೂ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ನಡೆಯಲಿದೆ. ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮವಿದ್ದು, ವೈದ್ಯ ಡಾ.ಅನಿಲ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಅರೇಅಂಗಡಿಯ ಎಸ್‌.ಕೆ.ಪಿ.ಸಂಯುಕ್ತ ಪದವಿಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕರಾದ … Continued

ಸಿ.ಎ. ಅಂತಿಮ ಪರೀಕ್ಷೆಯಲ್ಲಿ ರಶ್ಮಿ ಭಟ್ ಉತ್ತೀರ್ಣ

ಬೆಂಗಳೂರು : ಬೆಂಗಳೂರಿನ ರಶ್ಮಿ ಎಲ್. ಭಟ್ ಅವರು ಇತ್ತೀಚಿಗೆ ನಡೆದ ಸಿ. ಎ. ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ರಶ್ಮಿ ಅವರು ಹಾಲಿ ಬೆಂಗಳೂರು ನಿವಾಸಿಗಳಾದ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತಲಗೋಡು ಮೂಲದ ಲಂಬೋದರ ಭಟ್ ಹಾಗು ವೀಣಾ ಭಟ್ ದಂಪತಿ ಪುತ್ರಿಯಾಗಿದ್ದಾರೆ. ಕಠಿಣ ಅಭ್ಯಾಸ ಮತ್ತು ದೇವರ ಆಶೀರ್ವಾದ ತಮ್ಮ … Continued

ಯೋಗ ವಿಜ್ಞಾನ-ನ್ಯಾಚುರೋಪಥಿ ಜನಪ್ರಿಯಗೊಳಿಸುತ್ತಿರುವ ಡಾ. ವಿವೇಕ ಉಡುಪ

(೧೬-೦೭-೨೦೨೩) ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯದ ಬಯೋಟೆಕ್ನಾಲಜಿ ಸಭಾಂಗಣದಲ್ಲಿ ಸಾಯಂಕಾಲ ೫.೦೦ ರಿಂದ ೭.೦೦ ವರೆಗೆ ಯೋಗ ಪರ್ಯಟನ ಕಾರ್ಯಕ್ರಮವಿದೆ) ಡಾ. ಎ. ವಿವೇಕ ಉಡುಪ ಅವರು ಡಿವೈನ್ ಪಾರ್ಕ್‌ ಅಂಗಸಂಸ್ಥೆಯಾದ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನದ ವೈದ್ಯಕೀಯ ನಿರ್ದೇಶಕರು ಮತ್ತು ಡಿವೈನ್ ಪಾರ್ಕ್‌ ಟ್ರಸ್ಟಿಗಳಲ್ಲಿ ಒಬ್ಬರು. ಸರ್ವಕ್ಷೇಮ ಆಸ್ಪತ್ರೆಯ ಮೂಲಕ ಸಾವಿರಾರು ರೋಗಿಗಳಿಗೆ ಪ್ರಕೃತಿ … Continued

ಪ್ರಾಧ್ಯಾಪಕರ ಕಾರ್ಯಕ್ಕೆ ಹೊಸ ಭಾಷ್ಯ ಬರೆದ ಡಾ.ವೀರೇಶಸ್ವಾಮಿ ಕಟ್ಟೀಮಠ

ಸೇವೆಗೆ ಹೊಸ ಭಾಷ್ಯ ಬರೆದ ಪ್ರಾಧ್ಯಾಪಕರಾದ ಡಾ.ವೀರೇಶಸ್ವಾಮಿ ಶಶಿಧರಸ್ವಾಮಿ ಕಟ್ಟೀಮಠ ಜೂನ್‌ ೩೦ರಂದು ಸೇವಾ ನಿವೃತ್ತಿಯಾಗಿದ್ದಾರೆ. ಕೆಎಲ್‌ಇ ಸಂಸ್ಥೆಯ ಶ್ರೀ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಿಂದ ಸೇವಾ ನಿವೃತ್ತಿಯಾದರು. ವಿದ್ಯಾಕಾಶಿ ಧಾರವಾಡದಲ್ಲಿ ಜನಿಸಿದ ಅವರು ೧೯೯೧ ರಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಹುಬ್ಬಳ್ಳಿಯ ಆರ್. ಎನ್. ಶೆಟ್ಟಿ ಗ್ರೂಪ್ ಆಪ್ ಕಂಪನಿಯಲ್ಲಿ ಸೇವೆ ಆರಂಭಿಸುವ ಮೂಲಕ … Continued