
ಅದಾನಿ ಸಮೂಹ ಸಂಸ್ಥೆಯಿಂದ ೧೦೦ ಕೋಟಿ ರೂ. ಮಾನಹಾನಿ ಮೊಕದ್ದಮೆ ಎದುರಿಸುತ್ತಿರುವ ನ್ಯೂಸ್ಕ್ಲಿಕ್ ಸುದ್ದಿ ಪೋರ್ಟಲ್ ಕಚೇರಿ ಮೇಲೆ ಕುರಿತು ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ.
ಅದಾನಿ ಸಂಸ್ಥೆ ಕಳೆದ ವರ್ಷ ಪೋರ್ಟಲ್ನಲ್ಲಿ ಪ್ರಕಟಗೊಂಡ ಎರಡು ವರದಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಸುದ್ದಿ ಪೋರ್ಟಲ್ ವಿವಾದಾತ್ಮಕ ಕೃಷಿ ಕಾನೂನುಗಳ ಜಾರಿಯಿಂದ ಅದಾನಿ ಸಂಸ್ಥೆಗೆ ಲಾಭವಾಗಲಿದೆ ಎಂದು ವರದಿ ಮಾಡಿತ್ತು. ನ್ಯೂಸ್ಕ್ಲಿಕ್ನ ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಸ್ಥ ಮತ್ತು ಸಂಪಾದಕ ಪ್ರಂಜಲ್ ಪಾಂಡೆ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಮತ್ತು ಅಂಕಣಕಾರ ಬಪ್ಪಾದಿತ್ಯ ಸಿನ್ಹಾ ನಿವಾಸಗಳ ಮೇಲೆ ದಾಳಿ ಮಾಡಲಾಯಿತು.
ಪುರ್ಕಸ್ಥ, ಪಾಂಡೆ ಮತ್ತು ಸಿನ್ಹಾ ಸಿಪಿಎಂ ಪಕ್ಷದೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಪುರ್ಕಸ್ಥ ಭಾರತದ ಉಚಿತ ಸಾಫ್ಟ್ವೇರ್ ಆಂದೋಲನದ ಮುಖ್ಯಸ್ಥರಾಗಿದ್ದಾರೆ ಮತ್ತು ದೆಹಲಿ ವಿಜ್ಞಾನ ವೇದಿಕೆಯ ಸ್ಥಾಪಕ ಸದಸ್ಯರಾಗಿದ್ದಾರೆ. ವಿಜ್ಞಾನವನ್ನು ಜನಪ್ರಿಯಗೊಳಿಸಲು ಸಿಪಿಎಂ ಬೆಂಬಲಿತ ಸಮಾಜ ಮತ್ತು ವಿಜ್ಞಾನ ನೀತಿಯ ಚಿಂತಕರ ಚಾವಡಿಯಲ್ಲಿದ್ದಾರೆ. ಅವರು ತುರ್ತು ಸಮಯದಲ್ಲಿ ಎಸ್ಎಫ್ಐ ಕಾರ್ಯಕರ್ತರಾಗಿ ಜೈಲುವಾಸ ಅನುಭವಿಸಿದ್ದಾರೆ.
ಸಿನ್ಹಾ ಅವರು 2017 ರಲ್ಲಿ ಭಾರತದ ಚುನಾವಣಾ ಆಯೋಗದ “ಇವಿಎಂ ಚಾಲೆಂಜ್” ನಲ್ಲಿ ಪಕ್ಷದ ಪ್ರತಿನಿಧಿಯಾಗಿದ್ದರು.
ಸಿಪಿಎಂ ಪೊಲಿಟ್ಬ್ಯುರೊ ಸದಸ್ಯೆ ಸುಭಾಶಿಣಿ ಅಲಿ ಅವರು ಟ್ವೀಟ್ ಮಾಡಿದ್ದು, ನ್ಯೂಸ್ಕ್ಲಿಕ್ ಕಚೇರಿ ಮತ್ತು ಪ್ರಬೀರ್ ಪುರ್ಕಸ್ಥ ಅವರ ಮನೆಯ ಮೇಲೆ ಇಡಿ ನಡೆಸಿದ ದಾಳಿ ನಿರ್ಭೀತ ಪತ್ರಿಕೋದ್ಯಮದ ಪರಿಣಾಮವಾಗಿದೆ. ರೈತ ಚಳವಳಿಯ ಪ್ರಚಂಡ ವ್ಯಾಪ್ತಿಯ ಪರಿಣಾಮವಾಗಿ ನ್ಯೂಸ್ಕ್ಲಿಕ್ನ ಜನಪ್ರಿಯತೆ ಬಹಳ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಖಂಡನೆ: ಮೀಡಿಯಾ ಪೋರ್ಟಲ್ ನ್ಯೂಸ್ ಕ್ಲಿಕ್ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿರುವುದನ್ನು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಖಂಡಿಸಿದೆ. ಸ್ವತಂತ್ರ ಹಾಗೂ ಮುಕ್ತ ಪತ್ರಿಕೋದ್ಯಮವನ್ನು ನಿಗ್ರಹಿಸಲು ಸರಕಾರಿ ಸಂಸ್ಥೆಗಳನ್ನು ಬಳಸಿಕೊಳ್ಳುವ ಪ್ರಯತ್ನದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಪತ್ರಕರ್ತರಿಗೆ ಯಾವುದೇ ಕಿರುಕುಳ ನೀಡುವುದು ಸರಿಯಲ್ಲ. ಪತ್ರಕರ್ತರನ್ನು ಬೆದರಿಸಲು ಹಾಗೂ ಮುಕ್ತ ಪತ್ರಿಕೋದ್ಯಮವನ್ನು ನಿಗ್ರಹಿಸುವುದು ಪತ್ರಿಕಾ ಸ್ವಾತಂತ್ರ್ಯಕ್ಕೆ ಮಾತ್ರವಲ್ಲ, ಇದು ಪ್ರಜಾಪ್ರಭುತ್ವದ ತತ್ವದ ಅನುಷ್ಠಾನಕ್ಕೂ ಕೂಡ ಧಕ್ಕೆ ತರುವುದು ಎಂದು ತಿಳಿಸಿದೆ.



ನಿಮ್ಮ ಕಾಮೆಂಟ್ ಬರೆಯಿರಿ