ಜನವರಿ 14 ರಂದು ಅಯೋಧ್ಯೆಯ ಶ್ರೀರಾಮ ದೇವಸ್ಥಾನಕ್ಕಾಗಿ ಜನಸಮೂಹ ಧನಸಹಾಯ ಅಭಿಯಾನ ಪ್ರಾರಂಭಿಸಿದ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಫೆಬ್ರವರಿ 27 ರಂದು ಅಭಿಯಾನ ಮುಗಿಯುವ ಹೊತ್ತಿಗೆ ಈ ಯೋಜನೆಗೆ 1,100 ಕೋಟಿ ರೂ. ಸಂಗ್ರಹದ ನಿರೀಕ್ಷೆ ಇಟ್ಟಿತ್ತು. ಆದರೆ ೪೪ ದಿನಗಳ ಅಭಿಯಾನದಲ್ಲಿ 2,500 ಕೋಟಿ ರೂ.ಗಳಷ್ಟು ಸಂಗ್ರಹವಾಗಿದೆ ಎಂದು ವಿಶ್ವ ಹಿಂದು ಪರಿಷತ್ ಉಪಾಧ್ಯಕ್ಷ ಚಂಪತ್ ರಾಯ ತಿಳಿಸಿದ್ದಾರೆ.
ಮನೆ ಮನೆಗೆ ತೆರಳಿ 900,000 ಸ್ವಯಂಸೇವಕರು 2,500 ಕೋಟಿ ಕೋಟಿ ರೂ.ಗಳಷ್ಟು. 44 ದಿನಗಳಲ್ಲಿ ಸಂಗ್ರಹಿಸಿದ್ದಾರೆ.ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಕಾರ್ಯಕರ್ತರು, ಮತ್ತು ಟ್ರಸ್ಟ್ 1 ಮಿಲಿಯನ್ ಜನರನ್ನು ದೇಣಿಗೆಗಾಗಿ ಸಂಪರ್ಕಿಸಿತು. “ಅಭಿಯಾನದ ಅಡಿಯಲ್ಲಿ ನಾಲ್ಕು ಲಕ್ಷ ಗ್ರಾಮಗಳನ್ನು ತಲುಪುವ ಗುರಿಯಲ್ಲಿ ಅವರು ಯಶಸ್ವಿಯಾದರು” ಎಂದು ಚಂಪತ್ ರಾಯ್ ತಿಳಿಸಿದ್ದಾರೆ.
38,125 ಕಾರ್ಯಕರ್ತರು ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವ ಹಣವನ್ನು ಈ ತಿಂಗಲ್ಲಿ ಲೆಕ್ಕಪರಿಶೋಧನೆ ಮಾಡಲಾಗುವುದು ಎಂದರು.
ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 5, 2020 ರಂದು ಅಯೋಧ್ಯೆಯ ಶ್ರೀರಾಮ್ ದೇವಸ್ಥಾನಕ್ಕೆ ಅಡಿಪಾಯ ಹಾಕಿದ್ದರು. ಮೂರು ಅಂತಸ್ತಿನ ದೇಗುಲಕ್ಕೆ ಕಾಂಕ್ರೀಟ್ ತುಂಬುವ ಕೆಲಸ ಏಪ್ರಿಲ್ನಲ್ಲಿ ಪ್ರಾರಂಭವಾಗಲಿದ್ದು, 2024 ರ ವೇಳೆಗೆ ಇದರ ರಚನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ
ಪ್ರತಿದಿನ ನಗರಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ದೇವಾಲಯ ಸಂಕೀರ್ಣವನ್ನು ವಿಸ್ತರಿಸಲು ಟ್ರಸ್ಟ್ ಯೋಜಿಸಿದೆ. ರಾಮ್ ಲಲ್ಲಾ (ಶಿಶು ರಾಮ್) ವಿಗ್ರಹವನ್ನು ನೋಡಲು ಪ್ರತಿದಿನ 25 ಸಾವಿರಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ದೇವಾಲಯ ಸಿದ್ಧವಾದಾಗ ಇದು ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಹೆಚ್ಚಾಗುವ ನಿರೀಕ್ಷೆಯಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಭಕ್ತರಿಗೆ ಹೆಚ್ಚಿನ ಸಾರ್ವಜನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಿದೆ. ಹಿಂದಿನ ಯೋಜನೆಯ ಪ್ರಕಾರ, 70 ಎಕರೆ ಪ್ರದೇಶದಲ್ಲಿ ಸಂಕೀರ್ಣವನ್ನು ನಿರ್ಮಿಸಬೇಕಿತ್ತು. ಟ್ರಸ್ಟ್ ಈಗ 108 ಎಕರೆ ಪ್ರದೇಶದಲ್ಲಿ ಸಂಕೀರ್ಣವನ್ನು ನಿರ್ಮಿಸಲು ಯೋಜಿಸಿದೆ. ಕಂದಾಯ ಇಲಾಖೆಯ ತಂಡವು ಈಗಾಗಲೇ ಮಾರ್ಚ್ 3 ರಿಂದ ಸಂಕೀರ್ಣದ ಸುತ್ತಮುತ್ತಲಿನ ಪ್ರದೇಶಗಳ ಸಮೀಕ್ಷೆ ಪ್ರಾರಂಭಿಸಿದೆ.
ಯಜ್ಞಶಾಲೆ, ಜನ್ಮಭೂಮಿ ಮ್ಯೂಸಿಯಂ, ಸತ್ಸಂಗ್ ಭವನ ಸಭಾಂಗಣ, ಸ್ಟಡಿ ಕಮ್ ರಿಸರ್ಚ್ ಏರಿಯಾ, ರಾಮಲೀಲಾ ಸೆಂಟರ್, ಪ್ರೊಜೆಕ್ಷನ್ ಥಿಯೇಟರ್, ಎಕ್ಸಿಬಿಷನ್ ರೂಮ್, ಆದರ್ಶ ಗೌಶಾಲಾ, ಸೀತಾ ಕಿಚನ್ ಸೇರಿದಂತೆ ಇತರ ಅಗತ್ಯ ಸೌಲಭ್ಯಗಳ ರೂಪರೇಖೆಯನ್ನು ಟ್ರಸ್ಟ್ ಸಿದ್ಧಪಡಿಸುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ