ಸಿಡಿ ಪ್ರಕರಣ ತನಿಖೆಗೆ 20 ಅಧಿಕಾರಿಗಳ ಎಸ್‌ಐಟಿ ತಂಡ ರಚನೆ

ಬೆಂಗಳೂರು: ಮಾಜಿ ಸಚಿವ ಸಚಿವ ರಮೇಶ್​ ಜಾರಕಿಹೊಳಿ ಅವರದ್ದು ಎಂದು ಆರೋಪಿಸಲಾದ ಅಶ್ಲೀಲ ಸಿಡಿ ಪ್ರಕರಣದ ವಿಚಾರಣೆಗೆ ವಿಶೇಷ ತನಿಖಾ ತಂಡ ನೇಮಕ ಮಾಡಲಾಗಿದೆ.
ರಮೇಶಜ ಜಾರಕಿಹೊಳಿ ಇದು ನಕಲಿ ಸಿಡಿ ಎಂದು ಹೇಳಿ ಠಾಣಗೆ ಪತ್ರ ಬರೆದ ನಂತರ ಹಾಗೂ ಈ ಪ್ರಕರಣದಲ್ಲಿ ದೂರುದಾರ ಅನಂತರದಲ್ಲಿ ಏಕಾಕೀ ಪ್ರಕರಣ ಹಿಂಪಡೆದ ನಂತರ ಈ ಪ್ರಕರಣದ ತನಿಖೆಗಾಗಿ ಹಿರಿಯ ಅಧಿಕಾರಿ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ 20 ಅಧಿಕಾರಿಗಳ ತಂಡ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ ಎಂದು ಹೇಳಲಾಗಿದ್ದು,  ಪ್ರಕರಣದ ಸತ್ಯಾಸತ್ಯತೆ ಶೀಘ್ರದಲ್ಲೇ ಬಯಲಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.
ರಮೇಶ್​ ಜಾರಕಿಹೊಳಿ ಅವರದ್ದು ಎಂದು ಆರೋಪಿಸಲಾದ ಅಶ್ಲೀಲ ಸಿಡಿ ಪ್ರಕರಣ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮುಜುಗರವನ್ನು ಉಂಟು ಮಾಡಿದೆ. ಅಲ್ಲದೆ, ವಿರೋಧ ಪಕ್ಷ ಕಾಂಗ್ರೆಸ್‌ ಸರ್ಕಾರ ಹಅಗೂ ಸಚಿವರ ವಿರುದ್ಧ ಇದೇ ವಿಚಾರ ಮುಂದಿಟ್ಟು ವಾಗ್ದಾಳಿ ನಡೆಸುತ್ತಿದ್ದಾರೆ. ಈ ವಿಚಾರ ವಿಧಾನಮಂಡಲ ಅಧಿವೇಶನದಲ್ಲೂ ಸಾಕಷ್ಟು ಚರ್ಚೆಯಾಗಿತ್ತು. ಅಲ್ಲದೆ, ಈ ಸ್ವತಃ ರಮೇಶ್​ ಜಾರಕಿಹೊಳಿ ಈ ವಿಡಿಯೋ ನಕಲಿ ಎಂದು ಹೇಳಿಕೆ ನೀಡಿದ್ದು, ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಇದೇ ಕಾರಣಕ್ಕೆ ಈ ಪ್ರಕರಣದ ಸತ್ಯಾಸತ್ಯತೆ ಬಯಲಿಗೆ ಎಳೆಯಲು ಎಸ್​ಐಟಿ ತನಿಖೆಗೂ ನೀಡಿದೆ. ಇದು ಎಲ್ಲ ಆಯಾಮಗಳಿಂದಲೂ ತನಖೆ ನಡೆಸಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಎಸ್‌ಐಟಿ ತಂಡದಲ್ಲಿ ಕಬ್ಬನ್ ಪಾರ್ಕ್ ಎಸಿಪಿ, ಕಬ್ಬನ್ ಪಾರ್ಕ್ ಠಾಣೆ ಇನ್ಸ್‌ಪೆಕ್ಟರ್, ಸಿಸಿಬಿ ಎಸಿಪಿ, ಇನ್ಸ್‌ಪೆಕ್ಟರ್ ಗಳು, ಸೈಬರ್ ಕ್ರೈಮ್ ಪೊಲೀಸರು ಸೇರಿದಂತೆ ಒಟ್ಟು 20ಕ್ಕು ಹೆಚ್ಚು ಅಧಿಕಾರಿಗಳನ್ನು ಸಿಡಿ ಪ್ರಕರಣದ ತನಿಖೆಗೆ ನೇಮಕ ಮಾಡಲಾಗಿದೆ. ಎ ಮತ್ತು ಬಿ ತಂಡಗಳಾಗಿ ಎಸ್‌ಐಟಿ ತಂಡ ವಿಭಾಗ ಮಾಡಿ ತನಿಖೆಯ ಎಲ್ಲ ಮಗ್ಗಲುಗಳಲ್ಲಿ ತನಿಖೆ ನಡೆಲಾಗುತ್ತದೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಏರ್ ಇಂಡಿಯಾ ವಿಮಾನದಲ್ಲಿ 7 ಮಂದಿ ಅಸ್ವಸ್ಥ

ವಿಶೇಷ ತನಿಖಾ ತಂಡವು (ಎಸ್‌ಐಟಿ) ಸರ್ಕಾರ ಮಾರ್ಗಸೂಚಿ ಅನ್ವಯ ಕಾರ್ಯನಿರ್ವಹಿಸಲಿದ್ದು, ತಎಸ್‌ಐಟಿ ಕಾರ್ಯವ್ಯಾಪ್ತಿ ಹಾಗೂ ಎಷ್ಟು ದಿನದಲ್ಲಿ ತನಿಖೆ ಪೂರ್ಣಗೊಳಿಸಬೇಕು ಸಹ ಸರ್ಕಾರದ ಮಾರ್ಗಸೂಚಿಯಂತೆ ನಡೆಯಲಿದೆ. ಎರಡು ದಿನಗಳೊಳಗೆ ಸರ್ಕಾರದ ತನಿಖೆ ಮಾರ್ಗಸೂಚಿ ಬರಲಿದೆ ಎನ್ನಲಾಗಿದ್ದು, ಎಸ್​ಐಟಿ ತಂಡ ಸಿಡಿ ಬಿಡುಗಡೆ ಮಾಡಿದ ಬಗ್ಗೆ ತನಿಖೆ ವೇಳೆ ಎಫ್‌ಐಆರ್ ಅವಶ್ಯಕತೆಯಿದ್ದರೆ ಮಾತ್ರ ತನಿಖೆ ವೇಳೆಯೇ ನಿರ್ಧರಿಸಲಾಗುತ್ತದೆ. ಅಲ್ಲದೆ ತನಿಖಾ ತಂಡಕ್ಕೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ತನಿಖೆಗೆ ಕಾಲ ಮಿತಿ ನಿಗದಿ ಮಾಡಿಲ್ಲ ಎಂದೂ ಹೇಳಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement