ಹುಬ್ಬಳ್ಳಿ: ವ್ಯಕ್ತಿಗೆ ಸಿಡಿ ಬ್ಲ್ಯಾಕ್ ಮೇಲ್, ಹಣಕ್ಕಾಗಿ ಅಪಹರಿಸಿ ಹಲ್ಲೆ

ಹುಬ್ಬಳ್ಳಿ: ತನ್ನ ಪ್ರೇಯಿಸಿಯೊಂದಿಗಿದ್ದ ಸಮಯದಲ್ಲಿ ಶೂಟ್ ಮಾಡಿದ್ದ ರೌಡಿಗಳ ಗುಂಪೊಂದು ಹಣಕ್ಕಾಗಿ ಪೀಡಿಸಿ, ಹಲ್ಲೆ ಮಾಡಿರುವ ಪ್ರಕರಣ ಗೋಕುಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕುಮಾರಸ್ವಾಮಿ ಎಂಬ ಯುವಕ ತನ್ನ ಪ್ರೇಯಿಸಿ ಜೊತೆಗಿದ್ದಾಗ ಅಕ್ಷಯ ಪಾರ್ಕ್ ನಿವಾಸಿಗಳಾದ ಶಕ್ತಿರಾಜ ದಾಂಡೇಲಿ, ಹಲವರು ಶೂಟ್ ಮಾಡಿದ್ದಾರೆ. ಇದೇ ವೀಡಿಯೋ ಇಟ್ಟುಕೊಂಡು ಕುಮಾರಸ್ವಾಮಿಯನ್ನ ಬ್ಲ್ಯಾಕ್ ಮೇಲ್ ಮಾಡಿದ್ದರು ಎಂದು ದೂರು ದಾಖಲಾಗಿದೆ.
ಶಕ್ತಿರಾಜ ದಾಂಡೇಲಿ ಜೊತೆಗೆ ಸಂತೋಷ ಬ್ಯಾಹಟ್ಟಿ, ರಾಹುಲ ಪ್ರಭು ಸೇರಿದಂತೆ ಹಲವರು ಕುಮಾರಸ್ವಾಮಿಯನ್ನ ಅಪಹರಿಸಿ ಹಣಕ್ಕಾಗಿ ಪೀಡಿಸಿದ್ದಾರೆ. ಅಷ್ಟೇ ಅಲ್ಲ, ಮಾಧ್ಯಮದವರಿಗೆ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಕುಮಾರಸ್ವಾಮಿ ತಾಯಿ ಗೋಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

 

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

ನಿಮ್ಮ ಕಾಮೆಂಟ್ ಬರೆಯಿರಿ

advertisement