ಬೆಂಗಳೂರು: ಸಿಡಿ ಬಹಿರಂಗದ ಮಹಾನಾಯಕನ ಬಗ್ಗೆ ನನಗೇನು ಗೊತ್ತಿಲ್ಲ, ಆ ನಾಯಕ ಯಾರು ಎಂದು ಎಸ್ಐಟಿ ಪೊಲೀಸರೇ ತಿಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ
ಬೆಂಗಲೂರಿನಲ್ಲಿ ಬಸವ ಕಲ್ಯಾಣ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಹೆಸರು ಬಿಡುಗಡೆ ಮಾಡಿದ ಮಾತನಾಡಿದ ಅವರು, ಎಸ್ಐಟಿ ಯಾವುದೇ ಮುಲಾಜಿಲ್ಲದೆ ರಾಜ್ಯದ ಜನತೆ ಮುಂದೆ ಸಿಡಿ ಪ್ರಕರಣದ ಸತ್ಯಾಸತ್ಯತೆ ಬಹಿರಂ ಪಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಮಹಾನಾಯಕರು ಯಾರೆಂದು ಚರ್ಚೆ ನಡೆದಿದೆ. ಆದರೆ ‘ರಾಜ್ಯದ ಮಹಾನಾಯಕ ಬಗ್ಗೆ ನನಗೂ ಗೊತ್ತಿಲ್ಲ, ಆ ನಾಯಕ ಯಾರು ಎಂದು ಎಸ್ಐಟಿ ಪೊಲೀಸರೇ ತಿಳಿಸಬೇಕು. ಬಲ್ಲಮೂಲಗಳಿಂದನನಗೂ ಕೆಲವರ ಬಗ್ಗೆ ಮಾಹಿತಿ ಇದೆ, ಅದನ್ನು ಸಮಯ ಬಂದಾಗ ಹೇಳುತ್ತೇನೆ ಎಂದಷ್ಟೇ ಹೇಳಿದರು.
ಬಸವಕಲ್ಯಾಣದಲ್ಲಿ ಜೆಡಿಎಸ್ನಿಂದ ಸೈಯ್ಯದ್ ಯಸ್ರಬ್ ಅಲಿ ಖಾದ್ರಿ ಕಣಕ್ಕಿಳಿಯಲಿದ್ದು, ಮಸ್ಕಿ ಮತ್ತು ಬೆಳಗಾವಿ ಅಭ್ಯರ್ಥಿಗಳನ್ನು ಪಕ್ಷದ ಮುಖಂಡರೊಂದಿಗೆ ಚರ್ಚೆ ನಡೆಸಿ ಎರಡು ದಿನದೊಳಗೆ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ