ಉಪಚುನಾವಣೆಯಲ್ಲಿ ಯಾವ ಜೋಡೆತ್ತುಗಳು ಕೆಲಸ ಮಾಡಲ್ಲ: ಸಚಿವ ಶ್ರೀರಾಮಲು

ಬಳ್ಳಾರಿ: ಉಪಚುನಾವಣೆಯಲ್ಲಿ ಯಾವ ಜೋಡೆತ್ತುಗಳು ಕೆಲಸ ಮಾಡಲ್ಲ, ಮಸ್ಕಿ, ಬಸವಕಲ್ಯಾಣ ಹಾಗೂ ಬೆಳಗಾವಿಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಸಚಿವ ಶ್ರೀರಾಮಲು ಹೇಳಿದರು.

ಕಾಂಗ್ರೆಸ್‌ ಮುಖಂಡರು ಎಲ್ಲಿ ಪ್ರಚಾರಕ್ಕೆ ಹೋಗಿದ್ದಾರೋ ಅಲ್ಲೆಲ್ಲ ಕಾಂಗ್ರೆಸ್‌ ಸೋಲನುಭವಿಸಿದೆ. ಯಾವ ಜೋಡೆತ್ತುಗಳ ಕರಾಮತ್ತು ನಡೆಯೊಲ್ಲ ಎಂದರು.
ವಿಜಯೇಂದ್ರ ಬಂದರೆ ಹಣ ಎಂಬ ಸಿದ್ದು ಹೇಳಿಕೆಗೆ ರಾಮುಲು ತಿರುಗೇಟು ನೀಡಿದ್ದು, ಸುಳ್ಳು ಅಂದ್ರೆ ಕಾಂಗ್ರೆಸ್, ಸತ್ಯ ಅಂದ್ರೆ ಬಿಜೆಪಿ, ಜನ ಸತ್ಯವನ್ನೇ ಆಯ್ಕೆ ಮಾಡ್ತಾರೆ. ವಿಜಯೇಂದ್ರ ಅವರದು ಏನೂ ತಪ್ಪಿಲ್ಲ. ಅವರ ತಂದೆ ರಾಜಕಾರಣದಲ್ಲಿರೋದ್ರಿಂದ ತಂದೆಗೆ ಮಗ ಸಹಾಯ ಮಾಡೊದು ತಪ್ಪಾ? ಈ ಆರೋಪ ಯಾರಿಗೂ ಶೋಭೆ ತರಲ್ಲ. ಶಿರಾ, ರಾಜರಾಜೇಶ್ವರಿಯಲ್ಲಿ ವಿಜಯೇಂದ್ರ ಗೆದ್ದರು.
ರಮೇಶ್‌ ಜಾರಕಿಹೊಳಿ ಸಿ.ಡಿ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಎಸ್.ಐಟಿ ತನ್ನ ಕೆಲಸ ಮಾಡುತ್ತಿದೆ. ಯಾರು ಇಲ್ಲಿ ಪ್ರಭಾವ ಬೀರಿಲ್ಲ. ತನಿಖೆ ಬಳಿಕ ಯಾರು ಸುಳ್ಳು ಯಾರು ಸತ್ಯ ಎಂದು ಗೊತ್ತಾಗಲಿದೆ. ಉಪಚುನಾವಣೆ ಮೇಲೆ ಸಿಡಿ ಪ್ರಕರಣ ಪರಿಣಾಮ ಬೀರಲ್ಲ. ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತೆ ಎಂದು ಸಚಿವ ಶ್ರೀರಾಮುಲು ಹೇಳಿದರು.

ಪ್ರಮುಖ ಸುದ್ದಿ :-   ಶಿರಸಿ: ಕೆಪಿಸಿಸಿ ಸದಸ್ಯ ದೀಪಕ ದೊಡ್ಡೂರು, ಇತರರ ನಿವಾಸದ ಮೇಲೆ ಐಟಿ ದಾಳಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement