ಬೆಂಗಳೂರು: ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾಡುತ್ತಿದ್ದ ಆರೋಪಗಳಿಗೆ ಸಚಿವ ಕೆ.ಎಸ್. ಈಶ್ವರಪ್ಪ ಬೀಗಮುದ್ರೆ ಒತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ಬಿಜೆಪಿ ವಿರುದ್ಧ ಟ್ವೀಟ್ ಮಾಡಿದ ಕಾಂಗ್ರೆಸ್, ಬಿಜೆಪಿ ಸರಕಾರದಲ್ಲಿ ಭೃಷ್ಟಾಚಾರ, ಸ್ವಜನಪಕ್ಷಪಾತ, ದುರಾಡಳಿತವಿದ್ದು, ರಾಜ್ಯ ಅನಾಥವಾಗಿದೆ ಎಂದು ತಿಳಿಸಿದೆ.
ಬಿಜೆಪಿ ಕೂಡಲೇ ಸರಕಾರವನ್ನು ವಿಸರ್ಜಿಸಬೇಕು. ಕೊರೊನಾ ಸೋಂಕಿನಲ್ಲಿ ಭೃಷ್ಟಾಚಾರ, ನೆರೆ ಪರಿಹಾರದಲ್ಲಿ ಭೃಷ್ಟಾಚಾರ, ವರ್ಗಾವಣೆ, ಅನುದಾನ ಬಿಡುಗಡೆಯಲ್ಲಿಯೂ ಭೃಷ್ಟಾಚಾರ ನಡೆದಿದೆ. ಬಿಜೆಪಿಯವರ ಕಿತ್ತಾಟದಲ್ಲಿ ರಹಸ್ಯಗಳು ಹೊರಬೀಳುತ್ತಿವೆ ಎಂದು ಟ್ವೀಟ್ ಮಾಡಿದೆ.
ಬಿಜೆಪಿ ಮಾಳಿಗೆ ಸೋರುತ್ತಿದೆ. ಸುಧಾಕರ-ರೇಣುಕಾಚಾರ್ಯ, ಆರ್.ಅಶೋಕ-ಅಶ್ವತ್ಥ ನಾರಾಯಣ, ಯಡಿಯೂರಪ್ಪ-ಈಶ್ವರಪ್ಪ ಮಧ್ಯದ ಕಿತ್ತಾಟವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ ಕಟೀಲ್ ಮೊದಲು ಬಗೆಹರಿಸಲಿ ಎಂದು ತಿಳಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ