ಕರಡಿ ದಾಳಿ: ಇಬ್ಬರಿಗೆ ಗಂಭೀರ ಗಾಯ

ರಾಮನಗರ:ಕರಡಿ ದಾಳಿಯಿಂದ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ರಾಮನಗರ ಜಿಲ್ಲೆ ಮಾಗಡಿಯ ಸಾವನದುರ್ಗಾ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನವಣಮ್ಮ (23), ಮುತ್ತು (33) ಗಾಯಗೊಂಡವರಾಗಿದ್ದು, ಕುಡಿಯುವ ನೀರು ತರಲು ಕಾಡಿನ ದಾರಿಯಲ್ಲಿ ಹೋಗಿದ್ದಾಗ ಕರಡಿ ದಾಳಿ ನಡೆಸಿದೆ. ಇಬ್ಬರಿಗೂ ತಲೆ ಭಾಗ, ಬೆನ್ನಿನ ಭಾಗಕ್ಕೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.
ರಾಮನಗರ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಕಬ್ಬಾಳು, ದೊಡ್ಡಮಣ್ಣುಗುಡ್ಡೆ, ಸಾವನದುರ್ಗಾ, ಸಾತನೂರು, ತೆಂಗಿನಕಲ್ಲು, ಮಾಕಳಿ ಮೊದಲಾದೆಡೆ ಮಂಡ್ಯ ಜಿಲ್ಲಾ ವ್ಯಾಪ್ತಿಗೆ ಬರುವ ಮುತ್ತತ್ತಿ ಅರಣ್ಯದಿಂದ ಕಾಡಾನೆಗಳು, ಚಿರತೆ, ಕರಡಿಗಳು ನಾಡಿನತ್ತ ಮುಖಮಾಡಿವೆ. ಕಾಡಲ್ಲಿ ಸೂಕ್ತ ಆಹಾರ, ಕುಡಿಯುವ ನೀರು ಸಿಗದ ಕಾರಣ ನಾಡಿಗೆ ಬರುತ್ತಿವೆ. ಹೀಗಾಗಿ ಈ ಕುರಿತು ಆಡಳಿತ ಕ್ರಮ ಕೈಗೊಳ್ಳಬೇಕಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement