ಮಧ್ಯರಾತ್ರಿ ಆಸ್ಪತ್ರೆಗಳಿಗೆ ತಲುಪಿದ ಆಮ್ಲಜನಕದ​ ಟ್ಯಾಂಕರ್​​; ಸ್ವಲ್ಪ ತಡವಾಗಿದ್ದರೂ ಅನಾಹುತವಾಗುತ್ತಿತ್ತು…!.

ದೆಹಲಿ: ದೆಹಲಿಯಲ್ಲಿ ಆಮ್ಲಜನಕದ ಕೊರತೆ ತೀವ್ರವಾಗಿ ಕಾಣಿಸಿಕೊಂಡ ಬೆನ್ನಲ್ಲೇ ಆರೋಗ್ಯ ಸಚಿವ ಸತ್ಯೇಂದ್ರ ಜೈನ್​ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಅವರಿಗೆ ಈ ಕುರಿತು ಟ್ವೀಟ್‌ ಮಾಡಿದ್ದು ಅನೇಕರ ಪ್ರಾಣ ಉಳಿಸಿದೆ.
ಮಂಗಳವಾರ ರಾತ್ರಿ ದೆಹಲಿಯ ಜಿಟಿಬಿ ಆಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆ ಉಂಟಾಗಿದೆ. ಹೆಚ್ಚೆಂದರೆ ಇನ್ನು ನಾಲ್ಕು ತಾಸುಗಳಿಗಷ್ಟೇ ಆಕ್ಸಿಜನ್​ ಸಾಕಾಗುವಷ್ಟು ಇತ್ತು. ಈ ಕುರಿತು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್​ ತಕ್ಷಣವೇ ಟ್ವೀಟ್‌ ಮಾಡಿ, ಇಲ್ಲಿ ಸುಮಾರು 500 ರೋಗಿಗಳಿಗೆ ಆಕ್ಸಿಜನ್​ ಅಗತ್ಯವಿದೆ. ದಯವಿಟ್ಟು ಸಹಾಯ ಮಾಡಿ ಎಂದು ಬರೆದಿದ್ದಾರೆ, ರೈಲ್ವೆ ಸಚಿವ ಪಿಯುಷ್​ ಗೋಯಲ್​ ಅವರನ್ನು ಟ್ಯಾಗ್ ಮಾಡಿದ್ದರು. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಇದೆ ಮನವಿ ಮಾಡಿದ್ದಲ್ಲದೆ, ದೆಹಲಿಯ ಹಲವು ಆಸ್ಪತ್ರೆಗಳಲ್ಲಿ ಆಮ್ಲಜನಕದ ತೀವ್ರ ಕೊರತೆ ಆಗಿದೆ ಎಂದು ಹೇಳಿದ್ದರು.
ಟ್ವೀಟ್‌ ಮಾಡಿದ ಕೆಲಹೊತ್ತಿನಲ್ಲಿಯೇ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆಯಾಗಿದೆ. ವೈದ್ಯಕೀಯ ಆಕ್ಸಿಜನ್ ಹೊತ್ತ ಟ್ರಕ್​ ಅಲ್ಲಿಗೆ ತೆರಳಿದೆ. ಇದರಿಂದಾಗಿ ಹಲವು ರೋಗಿಗಳ ಪ್ರಾಣ ಉಳಿದಿದೆ. ಈ ಆಸ್ಪತ್ರೆಯಲ್ಲಿ ಸುಮಾರು 500 ರೋಗಿಗಳಿದ್ದು, ಮುಂಜಾನೆ 2ಗಂಟೆ ವರೆಗೆ ಮಾತ್ರ ಸಾಕಾಗುಷ್ಟು ವೈದ್ಯಕೀಯ ಆಮ್ಲಜನಕ ಇತ್ತು. ಒಂದೊಮ್ಮೆ ಸರಿಯಾದ ಸಮಯಕ್ಕೆ ಆಕ್ಸಿಜನ್ ಪೂರೈಕೆ ಆಗದೆ ಇದ್ದರೆ ಜೀವ ಹಾನಿ ಸಂಭವಿಸಬಹುದಾಗಿತ್ತು. ಈಗ ಅನಾಹುತ ತಪ್ಪಿದಂತಾಗಿದೆ. ಮಧ್ಯರಾತ್ರಿ 1.30ರ ಹೊತ್ತಿಗೆ ಮೆಡಿಕಲ್​ ಆಕ್ಸಿಜನ್ ಹೊತ್ತ ಟ್ರಕ್​ ಜಿಟಿಬಿ ಆಸ್ಪತ್ರೆಗೆ ತಲುಪಿದೆ.
ಅಲ್ಲದೆ, ಬುಧವಾರ ಮುಂಜಾನೆ ಹೊತ್ತಿಗೆ ದೆಹಲಿಯ ಹಲವು ದೊಡ್ಡ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ವೈದ್ಯಕೀಯ ಆಮ್ಲಜನಕ ಪೂರೈಕೆ ಆಗಿದೆ. ನಮ್ಮ ಆಸ್ಪತ್ರೆಗೆ ಮುಂಜಾನೆ 3 ಗಂಟೆ ಹೊತ್ತಿಗೆ ಆಮ್ಲಜನಕ ಪೂರೈಕೆ ಆಗಿದ್ದಾಗಿ ಲೋಕ್​ ನಾಯಕ್​ ಜೈ ಪ್ರಕಾಶ್​ ನಾರಾಯಣ್ ಆಸ್ಪತ್ರೆಯ ನಿರ್ದೇಶಕ ಡಾ. ಸುರೇಶ್​ ಕುಮಾರ್​ ತಿಳಿಸಿದ್ದಾರೆ. ಅಂಬೇಡ್ಕರ್ ಆಸ್ಪತ್ರೆಗೆ ಮುಂಜಾನೆ 5 ಗಂಟೆಗೆ ಪೂರೈಕೆಯಾಗಿದೆ. ಕಳೆದ ಕೆಲವು ದಿನಗಳಿಂದಲೂ ದೆಹಲಿಯಲ್ಲಿ ಆಮ್ಲಜನಕದ ತೀವ್ರ ಕೊರತೆ ಆಗಿತ್ತು.

ಪ್ರಮುಖ ಸುದ್ದಿ :-   ವೀಡಿಯೊ..| ಅಯೋಧ್ಯೆಯಲ್ಲಿ ರಾಮನವಮಿ ದಿನ ಬಾಲರಾಮನ ಹಣೆಗೆ ʼಸೂರ್ಯ ರಶ್ಮಿಯ ತಿಲಕ ʼ ; ಅದ್ಭುತ ದೃಶ್ಯ ಕಣ್ತುಂಬಿಕೊಂಡ ಭಕ್ತ ಸಾಗರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement