ಹೊಸದಿಲ್ಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ ಚುನಾವಣೆ ಆಯೋಜಿಸಿರುವುದಕ್ಕೆ ಮದ್ರಾಸ್ ಹೈಕೋರ್ಟ್ ನಿಂದ ನಿರ್ದಯ, ಅವಹೇಳನಕಾರಿ ಛೀಮಾರಿ ಎದುರಿಸಿದ್ದ ಚುನಾವಣಾ ಆಯೋಗವು ಶನಿವಾರ ಸುಪ್ರೀಂಕೋರ್ಟ್ಗೆ ದೂರು ನೀಡಿದೆ.
ಏಪ್ರಿಲ್ 26ರಂದು ವಿಚಾರಣೆ ವೇಳೆ ಮದ್ರಾಸ್ ಹೈಕೋರ್ಟ್, ಕೋವಿಡ್-19 ಸೋಂಕು ತೀವ್ರವಾಗಿ ಹರಡುತ್ತಿರುವ ವೇಳೆ ತಮಿಳುನಾಡು ಚುನಾವಣೆಯಲ್ಲಿ ರಾಜಕೀಯ ಸಮಾವೇಶ ಹಾಗೂ ಜಾಥಾ ತಡೆ ಹೇರದ ಚುನಾವಣಾ ಆಯೋಗದ ವಿರುದ್ಧ ಬಹುಶಃ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಹೇಳಿತ್ತು.
ಸುಪ್ರೀಂಕೋರ್ಟ್ನಲ್ಲಿ ಸೋಮವಾರ ಚುನಾವಣಾ ಆಯೋಗದ ಅರ್ಜಿ ವಿಚಾರಣೆ ನಡೆಯಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ