ಕರ್ನಾಟಕದಲ್ಲಿ ದೈನಂದಿನ ಕೊರೊನಾ ಸೋಂಕಿನಲ್ಲಿ ಸ್ವಲ್ಪ ಏರಿಕೆ

ಬೆಂಗಳೂರು: ನಿನ್ನೆ ರಾಜ್ಯದಲ್ಲಿ ಸೋಂಕಿನ ಪ್ರಮಾಣ ತುಸು ಇಳಿಕೆಯಾಗಿದ್ದ ಬೆನ್ನಲ್ಲೇ ಕಳೆದ 24 ತಾಸಿನಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದ್ದು, 41,779 ಜನರಿಗೆ ಕೊರೊನಾ ಸೋಂಕು ತಗುಲಿದ್ದು ದಾಖಲಾಗಿದೆ.
ಇದೇ ಸಮಯದಲ್ಲಿ 373 ಮಂದಿ ಮೃತಪಟ್ಟಿದ್ದಾರೆ. ಕೋವಿಡ್‍ನಿಂದ ಮೃತಪಟ್ಟವರ ಸಂಖ್ಯೆ 21,085ಕ್ಕೆ ಏರಿಕೆಯಾಗಿದೆ. ಇದೇ ಸಮಯದಲ್ಲಿ ಆಸ್ಪತ್ರೆಯಿಂದ 35,879 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇದುವರೆಗೆ 15,10,557 ಗುಣಮುಖರಾಗಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 5,98,605 ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ಒದಗಿಸಿದೆ
ಸೋಂಕಿನ ಖಚಿತ ಪ್ರಮಾಣ ಶೇ.32.86 ಮತ್ತು ಮರಣ ಪ್ರಮಾಣ ಶೇ.0.89ರಷ್ಟಿದೆ. ಶುಕ್ರವಾರ 1,27,105 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಒಟ್ಟು 56,350 ಮಂದಿಗೆ ಲಸಿಕೆ ನೀಡಲಾಗಿದೆ. ಇಲ್ಲಿಯವರೆಗೆ ಒಟ್ಟು 1,10,51,982 ಡೋಸ್‍ಗಳನ್ನು ನೀಡಲಾಗಿದೆ.
ಬೆಂಗಳೂರಿನಲ್ಲಿ ಶುಕ್ರವಾರ 14,316 ಹೊಸ ಪ್ರಕರಣಗಳು ವರದಿಯಾಗಿದ್ದು, 121 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ ನಗರದಲ್ಲಿ 9,246ಕ್ಕೆ ಹೆಚ್ಚಳವಾಗಿದೆ. ಶುಕ್ರವಾರ 12,898 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 3,60,862 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಗಳಲ್ಲಿ ದಾಖಲಾಗಿರುವ ಪ್ರಕರಣಗಳು: ಬಾಗಲಕೋಟೆ -773, ಬಳ್ಳಾರಿ- 2,421, ಬೆಳಗಾವಿ -1,592, ಬೆಂಗಳೂರು ಗ್ರಾಮಾಂತರ -707, ಬೆಂಗಳೂರು ನಗರ -14,316, ಬೀದರ್ 223, ಚಾಮರಾಜನಗರ -713, ಚಿಕ್ಕಬಳ್ಳಾಪುರ -676, ಚಿಕ್ಕಮಗಳೂರು- 435, ಚಿತ್ರದುರ್ಗ- 314, ದಕ್ಷಿಣ ಕನ್ನಡ -1,215, ದಾವಣಗೆರೆ- 581, ಧಾರವಾಡ -829, ಗದಗ -591, ಹಾಸನ -1,339, ಹಾವೇರಿ -292, ಕಲಬುರಗಿ -929, ಕೊಡಗು- 539, ಕೋಲಾರ- 306, ಕೊಪ್ಪಳ- 495, ಮಂಡ್ಯ -1,385, ಮೈಸೂರು -2,340, ರಾಯಚೂರು- 1,063, ರಾಮನಗರ -459, ಶಿವಮೊಗ್ಗ -1,045, ತುಮಕೂರು -2,668, ಉಡುಪಿ- 1,219, ಉತ್ತರ ಕನ್ನಡ -787, ವಿಜಯಪುರ 444 ಮತ್ತು ಯಾದಗಿರಿಯಲ್ಲಿ -683 ಹೊಸ ಕೊರೊನಾ ಪ್ರಕರಣಗಳಿವೆ.
ಸಂಪೂರ್ಣ ವಿವರಗಳಿಗಾಗಿ ಪಟ್ಟಿಯನ್ನು ಪಿಡಿಎಫ್‌ನಲ್ಲಿ ಕೆಳಗೆ ಕೊಡಲಾಗಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ನಗರ ವಿವಿಗೆ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಹೆಸರು ; ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

14-05-2021 HMB Kannada

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement