ಕರ್ನಾಟಕದಲ್ಲಿ ಸೋಮವಾರ ಕೊರೊನಾ ಸೋಂಕಿನಿಂದ 476 ಜನರು ಸಾವು

ಬೆಂಗಳೂರು:ಕರ್ನಾಟಕದಲ್ಲಿ 24 ತಾಸಿನಲ್ಲಿ (ಸೋಮವಾರ) 38,603 ಮಂದಿಗೆ‌ ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಒಂದೇ ದಿನ 476 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 22313ಕ್ಕೆ ಹೆಚ್ಚಳವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,03,639ಕ್ಕೆ ಹೆಚ್ಚಳವಾಗಿದೆ. ಖಚಿತ ಪ್ರಕರಣಗಳ ಸಂಖ್ಯೆ 2242065 ಕ್ಕೆ‌ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಸೋಮವಾರ ಸಾವಿನ ಸಂಖ್ಯೆ ಹೆಚ್ಚಳವಾಗಿದ್ದು, 239 ಮಂದಿ ಮೃತಪಟ್ಟಿದ್ದಾರೆ. .ಇದರೊಂದಿಗೆ ಮೃತರ ಸಂಖ್ಯೆ 9722 ಕ್ಕೆ ಏರಿದೆ.
ಬೆಂಗಳೂರಿನಲ್ಲಿ ಸೋಮವಾರ 13,338 ಮಂದಿಗೆ‌ ಹೊಸ ಸೋಂಕು ತಗುಲಿದೆ.
ರಾಜ್ಯದಲ್ಲಿ ಇದೇ ಸಮಯದಲ್ಲಿ 34,635 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಬಿಡುಗಡೆಯಾದವರ ಸಂಖ್ಯೆ 16,16,092ಕ್ಕೆ ಏರಿದೆ.
ಜಿಲ್ಲಾವಾರು ಸೋಂಕಿತರ ಮಾಹಿತಿ:
ಬಾಗಲಕೋಟೆ 305, ಬಳ್ಳಾರಿ 2322, ಬೆಳಗಾವಿ 1748 ಬೆಂಗಳೂರು ಗ್ರಾಮಾಂತರ 426, ಬೆಂಗಳೂರು ನಗರ 13336, ಬೀದರ್ 172, ಚಾಮರಾಜನಗರ 516, ಚಿಕ್ಕಬಳ್ಳಾಪುರ 799, ಚಿಕ್ಕಮಗಳೂರು 732, ಚಿತ್ರದುರ್ಗ 407, ದಕ್ಷಿಣ ಕನ್ನಡ 817, ದಾವಣಗೆರೆ 747, ಧಾರವಾಡ 972, ಗದಗ ,475, ಹಾಸನ 2324, ಹಾವೇರಿ 142, ಕಲಬುರಗಿ 695, ಕೊಡಗು 442, ಕೋಲಾರ 713, ಕೊಪ್ಪಳ 470, ಮಂಡ್ಯ 1087, ಮೈಸೂರು 1980, ರಾಯಚೂರು 562, ರಾಮನಗರ 397, ಶಿವಮೊಗ್ಗ 1322, ತುಮಕೂರು 1915, ಉಡುಪಿ 897, ಉತ್ತರ ಕನ್ನಡ 1288, ವಿಜಯಪುರ 233 ಮತ್ತು ಯಾದಗಿರಿಯಲ್ಲಿ 360 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.

ಪ್ರಮುಖ ಸುದ್ದಿ :-   ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದಿಂದ ಶಾಂತ್ ತಿಮ್ಮಯ್ಯ ವಜಾಗೊಳಿಸಿದ ರಾಜ್ಯ ಸರ್ಕಾರ

ಜಿಲ್ಲಾವಾರು ವಿಸ್ತೃತ ಮಾಹಿತಿಗಳನ್ನು ಪಿಡಿಎಫ್‌ನಲ್ಲಿ ಕೊಡಲಾಗಿದೆ.

17-05-2021 HMB Kannada

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement