ಕರ್ನಾಟಕದಲ್ಲಿ ಸತತ ಎರಡನೇ ದಿನವೂ ಕೊರೊನಾ ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚು

ಬೆಂಗಳೂರು: ಕರ್ನಾಟಕದಲ್ಲಿ ಸತತ ಎರಡನೇ ದಿನವಾದ ಬುಧವಾರವೂ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ.
ಕಳೆದ 24 ತಾಸಿನಲ್ಲಿ 49,953 ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ.ಇದೇ ಸಮಯದಲ್ಲಿ 34,281 ಜನರಿಗೆ ಹೊಸ ಸೋಂಕು ತಗುಲಿದೆ.
ರಾಜ್ಯದಲ್ಲಿ ಒಟ್ಟು 17,24,438 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇದೇವೇಳೆ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 5,58,890ಕ್ಕೆ ಬಂದು ನಿಂತಿದೆ.
ಆದರೆ ಸಾವಿನ ಸಂಖ್ಯೆ ಮಾತ್ರ ಕಡಿಮೆಯಾಗುತ್ರಿಲ್ಲ . ಇದೇ ಸಮಸಯದಲ್ಲಿ ರಾಜ್ಯದಲ್ಲಿ 468 ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 23306 ಕ್ಕೆ ಏರಿಕೆಯಾಗಿದೆ.
ಬೆಂಗಳೂರು ನಗರದಲ್ಲಿ ಸಾವಿನ ಸಂಖ್ಯೆ ಇಳಿಮುಖವಾಗಿದೆ. ಇಂದು ನಗರದಲ್ಲಿ 218 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 10238 ಕ್ಜೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಬಿಡುಗಡೆಯಾದವರ‌ ಸಂಖ್ಯೆ ಹೆಚ್ಚಳವಾಗಿದ್ದು, ಇಂದು 29,238 ಮಂದಿ ಚೇತರಿಸಿಕೊಂಡಿದ್ದಾರೆ. ಈ ಮೂಲಕ ಒಟ್ಟು 751324 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದಂತಾಗಿದೆ.
ಜಿಲ್ಲಾವಾರು ಸೋಂಕಿತರ ವಿವರ :
ಬಾಗಲಕೋಟೆ 362, ಬಳ್ಳಾರಿ 1297, ಬೆಳಗಾವಿ 2234, ಬೆಂಗಳೂರು ಗ್ರಾಮಾಂತರ 812, ಬೆಂಗಳೂರು ನಗರ 11,772, ಬೀದರ್ 149, ಚಾಮರಾಜನಗರ 578, ಚಿಕ್ಕಬಳ್ಳಾಪುರ 555, ಚಿಕ್ಕಮಗಳೂರು 1047, ಚಿತ್ರದುರ್ಗ 422, ದಕ್ಷಿಣ ಕನ್ನಡ 829, ದಾವಣಗೆರೆ 700, ಧಾರವಾಡ 871, ಗದಗ 486, ಹಾಸನ 1428, ಹಾವೇರಿ 170, ಕಲಬುರಗಿ 440, ಕೊಡಗು 197, ಕೋಲಾರ 895, ಕೊಪ್ಪಳ 336, ಮಂಡ್ಯ 730, ಮೈಸೂರು 1730, ರಾಯಚೂರು 469, ರಾಮನಗರ 302, ಶಿವಮೊಗ್ಗ 819, ತುಮಕೂರು 2427, ಉಡುಪಿ 856, ಉತ್ತರ ಕನ್ನಡ 833, ವಿಜಯಪುರ 227 ಮತ್ತು ಯಾದಗಿರಿಯಲ್ಲಿ 308 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.
ಜಿಲ್ಲಾವಾರು ಸಂಪೂರ್ಣ ವಿವರಗಳನ್ನುಪಿಡಿಎಫ್‌ ಫಾರ್ಮಾಟಿನಲ್ಲಿ ಕೆಳಗೆ ಕೊಡಲಾಗಿದೆ.

ಪ್ರಮುಖ ಸುದ್ದಿ :-   ಅಪಘಾತದಲ್ಲಿ ಮಗ ಸಾವು ; ಸುದ್ದಿ ಕೇಳಿ ಆಘಾತದಿಂದ ತಾಯಿಯೂ ಕುಸಿದುಬಿದ್ದು ಸಾವು

19-05-2021 HMB Kannada

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement