ವಿಶಾಖಪಟ್ಟಣಂ ಎಚ್‌ಪಿಸಿಎಲ್ ಸಂಸ್ಕರಣಾಗಾರದಲ್ಲಿ ಬೆಂಕಿ;ಯಾವುದೇ ಅನಾಹುತ ಸಂಭವಿಸಿಲ್ಲ:ಎಚ್‌ಪಿಸಿಎಲ್

ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಸಂಸ್ಕರಣಾಗಾರದಲ್ಲಿ ಮಂಗಳವಾರ ಸಂಜೆ ಬೆಂಕಿ ಕಾಣಿಸಿಕೊಂಡಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಎಚ್‌ಪಿಸಿಎಲ್ ತಿಳಿಸಿದೆ. ಇದು ದಿನಕ್ಕೆ 70,000 ಬ್ಯಾರೆಲ್ (ಬಿಪಿಡಿ) ಕಚ್ಚಾ ಘಟಕ ಸ್ಥಗಿತಗೊಳಿಸಿದೆ.ಎಚ್‌ಪಿಸಿಎಲ್‌ನ ವಿಶಾಕ್ ಸಂಸ್ಕರಣಾಗಾರದ ಕಚ್ಚಾ ಸಂಸ್ಕರಣಾ ಘಟಕವೊಂದರಲ್ಲಿ ಇಂದು  (ಮಂಗಳವಾರ ) ಬೆಂಕಿ ಘಟನೆ ಸಂಭವಿಸಿದೆ.

ಸುರಕ್ಷತಾ ಕ್ರಮಗಳು ಮತ್ತು ಅಗ್ನಿಶಾಮಕ ದಳವನ್ನು ತಕ್ಷಣವೇ ಸಕ್ರಿಯಗೊಳಿಸಲಾಗಿದೆ. ಬೆಂಕಿಯನ್ನು ನಂದಿಸಲಾಗಿದೆ. ಯಾವುದೇ ಅಪಘಾತ ಸಂಭವಿಸಿಲ್ಲ ಮತ್ತು ಸಾರ್ವಜನಿಕರಿಗೆ ಯಾವುದೇ ಅಪಾಯವಿಲ್ಲ. ಕೂಲಿಂಗ್ ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ. ಸಂಸ್ಕರಣಾಗಾರ ಕಾರ್ಯಾಚರಣೆಗಳು ಸಾಮಾನ್ಯವಾಗಿದೆ ”ಎಂದು ಹೇಳಿಕೆ ತಿಳಿಸಿದೆ.
ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಎಚ್‌ಪಿಸಿಎಲ್‌ನಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಂಡಿದೆ. ಸ್ಥಳದಿಂದ ಸ್ಥಳೀಯರು ದೊಡ್ಡ ಸ್ಫೋಟವನ್ನು ಕೇಳಿದರು. ಎಚ್‌ಪಿಸಿಎಲ್‌ನ ತಂಡಗಳು, ಈಸ್ಟರ್ನ್ ನೇವಲ್ ಕಮಾಂಡ್ ಮತ್ತು ಆಂಧ್ರಪ್ರದೇಶ ರಾಜ್ಯ ವಿಪತ್ತು ಮತ್ತು ಅಗ್ನಿಶಾಮಕ ಸೇವಾ ವಿಭಾಗದ ಸಿಬ್ಬಂದಿ ಕಾರ್ಯಪ್ರವೃತ್ತರಾದರು ಮತ್ತು ತ್ವರಿತ ಕಾರ್ಯಾಚರಣೆಯಲ್ಲಿ ಬೆಂಕಿ ನಂದಿಸಿದರು.
ಮಾಹಿತಿಯ ಪ್ರಕಾರ, ಎಚ್‌ಪಿಸಿಎಲ್‌ನ ಯುನಿಟ್ -3 ಸ್ಥಾವರದಲ್ಲಿ ಸ್ಫೋಟ ಸಂಭವಿಸಿದೆ. ಐದು ಅಗ್ನಿಶಾಮಕ ದಳಗಳು ಸ್ಥಳದಲ್ಲಿಯೇ ಇವೆ. ಹೆಚ್ಚಿನ ಅಗ್ನಿಶಾಮಕ ದಳಗಳು ಧಾವಿಸುತ್ತಿವೆ. ಘಟನೆಯ ಕಾರಣವನ್ನು ಇನ್ನೂ ಕಂಡುಹಿಡಿದಿಲ್ಲ ಎಂದು ಡಿಸಿಪಿ ಐಶ್ವರ್ಯ ರಸ್ತೋಗಿ ತಿಳಿಸಿದ್ದಾರೆ.
ಅಗ್ನಿ ದುರಂತದ ವೀಡಿಯೊಗಳು ಎಚ್‌ಪಿಸಿಎಲ್ ಸ್ಥಾವರದಿಂದ ಹೊರಬರುವ ದೊಡ್ಡ ಜ್ವಾಲೆ ಮತ್ತು ಹೊಗೆಯನ್ನು ತೋರಿಸಿದೆ.
“ಸ್ಫೋಟದಂತಹ ಶಬ್ದ ಕಿವಿಗಪ್ಪಳಿಸಿತು ಮತ್ತು ನಂತರ ಬೆಂಕಿಯ ಚೆಂಡು ಕಾಣಿಸಿಕೊಂಡಿತ್ತು. ಸೈರನ್ ಸದ್ದು ಮಾಡಿತು ಮತ್ತು ನಾವೆಲ್ಲರೂ ಸುರಕ್ಷಿತವಾಗಿ ಓಡಿ ಬಂದೆವು” ಎಂದು ಸ್ಥಾವರದಿಂದ ಓಡಿಬಂದ ಕೆಲವು ಕಾರ್ಮಿಕರು ಹೇಳಿದರು.

ಪ್ರಮುಖ ಸುದ್ದಿ :-   ಭಾರತ-ಪಾಕಿಸ್ತಾನ ಪರಮಾಣು ಯುದ್ಧ ನಿಲ್ಲಿಸಲು 'ಸಹಾಯ' ಮಾಡಿದ್ದೇವೆ...ಕದನ ವಿರಾಮಕ್ಕೆ 'ದೊಡ್ಡ ಕಾರಣ' ವ್ಯಾಪಾರ ಎಂದ ಅಮೆರಿಕ ಅಧ್ಯಕ್ಷ ಟ್ರಂಪ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement