2022 ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಶಿರೋಮಣಿ ಅಕಾಲಿ ದಳ (ಎಸ್ಎಡಿ) ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಯೊಂದಿಗೆ ಶನಿವಾರ ಮೈತ್ರಿ ಮಾಡಿಕೊಂಡಿದ್ದು, ಈ ನಿರ್ಧಾರವನ್ನು ಎಸ್ಎಡಿಯ ಪ್ರಮುಖ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಎಸ್ಎಡಿ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಇದನ್ನು “ಪಂಜಾಬ್ ರಾಜಕೀಯದಲ್ಲಿ ಹೊಸ ದಿನ” ಎಂದು ಬಣ್ಣಿಸಿದರು.
ಇಂದು, ಒಂದು ಐತಿಹಾಸಿಕ ದಿನ … ಪಂಜಾಬ್ ರಾಜಕೀಯದಲ್ಲಿ ಒಂದು ದೊಡ್ಡ ತಿರುವು” ಎಂದು ಅವರು ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ಅವರ ಸಮ್ಮುಖದಲ್ಲಿ ಹೇಳಿದರು. ಎಸ್ಎಡಿ ಮತ್ತು ಬಿಎಸ್ಪಿ ಜಂಟಿಯಾಗಿ 2022ರ ಚುನಾವಣೆ ಮತ್ತು ಇತರ ಚುನಾವಣೆಗಳಲ್ಲಿ ಹೋರಾಡಲಿವೆ ಎಂದು ಅವರು ಹೇಳಿದರು.
ಮಾಯಾವತಿ ನೇತೃತ್ವದ ಬಿಎಸ್ಪಿ ಪಂಜಾಬ್ನ 117 ವಿಧಾನಸಭಾ ಸ್ಥಾನಗಳ ಪೈಕಿ 20 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಉಳಿದ 97 ಸ್ಥಾನಗಳಲ್ಲಿ ಎಸ್ಎಡಿ ಸ್ಪರ್ಧಿಸಲಿದೆ ಎಂದರು.
ಬಿಎಸ್ಪಿ ಸ್ಪರ್ಧಿಸಲಿರುವ ಸ್ಥಾನಗಳಲ್ಲಿ ಜಲಂಧರ್, ಜಲಂಧರ್-ಪಶ್ಚಿಮ, ಜಲಂಧರ್-ಉತ್ತರ, ಫಾಗ್ವಾರಾ, ಹೋಶಿಯಾರ್ಪುರ್ ಅರ್ಬನ್, ದಾಸುಯಾ, ರುಪ್ನಗರ ಜಿಲ್ಲೆಯ ಚಮ್ಕೌರ್ ಸಾಹಿಬ್, ಬಾಸ್ಸಿ ಪಥಾನಾ, ಪಠಾಣ್ಕೋಟ್ನ ಸುಜನ್ಪುರ, ಅಮೃತಸರ ಮಧ್ಯ ಕ್ಷೇತ್ರಗಳು ಸೇರಿವೆ.
ಇದು ಐತಿಹಾಸಿಕ ದಿನವಾಗಿದ್ದು, ಪಂಜಾಬ್ನ ಅತಿದೊಡ್ಡ ಪಕ್ಷವಾದ ಶಿರೋಮಣಿ ಅಕಾಲಿ ದಳ (ಎಸ್ಎಡಿ) ನೊಂದಿಗೆ ಮೈತ್ರಿ ರೂಪುಗೊಂಡಿದೆ. 1996 ರಲ್ಲಿ ಬಿಎಸ್ಪಿ ಮತ್ತು ಎಸ್ಎಡಿ ಎರಡೂ ಜಂಟಿಯಾಗಿ ಲೋಕಸಭಾ ಚುನಾವಣೆಯಲ್ಲಿ ಹೋರಾಡಿ 13 ಸ್ಥಾನಗಳಲ್ಲಿ 11 ಸ್ಥಾನಗಳಲ್ಲಿ ಜಯಗಳಿಸಿದ್ದವು. ಈ ಬಾರಿ ಮೈತ್ರಿ. ಮುರಿಯಲಾಗುವುದಿಲ್ಲ “ಎಂದು ಬಿಎಸ್ಪಿ ಸಂಸದ ಸತೀಶ್ ಮಿಶ್ರಾ ಹೇಳಿದ್ದಾರೆ.
ಕಾಂಗ್ರೆಸ್ ನಾಯಕತ್ವದಲ್ಲಿ ಭ್ರಷ್ಟಾಚಾರ ಮತ್ತು ಹಗರಣಗಳನ್ನು ಕೊನೆಗೊಳಿಸಲು ನಾವು ಕೆಲಸ ಮಾಡುತ್ತೇವೆ. ಪ್ರಸ್ತುತ ಸರ್ಕಾರವು ದಲಿತ ವಿರೋಧಿ ಮತ್ತು ರೈತ ವಿರೋಧಿ ಎಂದು ಅವರು ಹೇಳಿದರು.
ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವ ಹರ್ಸಿಮ್ರತ್ ಕೌರ್ ಬಾದಲ್ ಅವರ ರಾಜೀನಾಮೆಯೊಂದಿಗೆ ಕೃಷಿ ಮಸೂದೆಗಳ ಬಗ್ಗೆ ಸೆಪ್ಟೆಂಬರ್ನಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಿಂದ (ಎನ್ಡಿಎ) ಎಸ್ಎಡಿ ಹಿಂದೆ ಸರಿಯಿತು. ಎಸ್ಎಡಿ ಜೊತೆಗಿನ ಮೈತ್ರಿಕೂಟದಲ್ಲಿ ಬಿಜೆಪಿ 23 ಸ್ಥಾನಗಳಿಗೆ ಸ್ಪರ್ಧಿಸುತ್ತಿತ್ತು.
ಈ ಹಿಂದೆ ಜೂನ್ 5 ರಂದು ಎಸ್ಎಡಿ ಅಧ್ಯಕ್ಷ ಬಾದಲ್ ಅವರು ತಮ್ಮ ಪಕ್ಷವು ಕಾಂಗ್ರೆಸ್, ಭಾರತೀಯ ಜನತಾ ಪಕ್ಷ ಮತ್ತು ಆಮ್ ಆದ್ಮಿ ಪಕ್ಷವನ್ನು ಹೊರತುಪಡಿಸಿ ಇತರ ಪಕ್ಷಗಳೊಂದಿಗೆ ಚುನಾವಣಾ ಪೂರ್ವ ಮೈತ್ರಿಗಾಗಿ ಮುಕ್ತವಾಗಿದೆ ಎಂದು ಹೇಳಿದ್ದರು.
ಕಳೆದ ವರ್ಷ ಹೊಸ ಕೃಷಿ ಕಾನೂನುಗಳನ್ನು ತರುವ ಮೊದಲು ಕೇಂದ್ರದಲ್ಲಿ ಎನ್ಡಿಎ ಆಡಳಿತ ನಡೆಸುವ ಭಾಗವಾಗಿದ್ದ ಬಾದಲ್, ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದರು.
“ನಾವು ಕಾಂಗ್ರೆಸ್, ಬಿಜೆಪಿ ಮತ್ತು ಎಎಪಿ ಹೊರತುಪಡಿಸಿ ಇತರ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಲು ಸಿದ್ಧರಿದ್ದೇವೆ. ಈ ಪಕ್ಷಗಳೊಂದಿಗೆ ನಾವು ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾವು ಇತರರಿಗೆ ಮುಕ್ತರಾಗಿದ್ದೇವೆ. ಎಂದು ಅವರು ತಿಳಿಸಿದ್ದರು. ಮುಂದಿನ ವರ್ಷ ಪಂಜಾಬ್ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ