ನವದೆಹಲಿ : ಹೊಸ ಐಟಿ ನಿಯಮಗಳ ವಿಚಾರವಾಗಿ ಟ್ವಿಟ್ಟರ್ ಹಾಗೂ ಕೇಂದ್ರ ಸರ್ಕಾರದ ಮಧ್ಯೆ ಜಟಾಪಟಿ ಮುಂದುವರೆದಿದೆ. ಈಗಾಗಲೇ ಹಲವು ನಾಯಕರ ಟ್ವಿಟ್ಟರ್ ಖಾತೆಯನ್ನ ಬ್ಲೂ ಟಿಕ್ ತೆಗೆದು ಹಾಕಿ, ವಿವಾದಕ್ಕೆ ಕಾರಣವಾಗಿದ್ದ ಟ್ವಿಟ್ಟರ್, ಈಗ ಕೇಂದ್ರ ಪ್ರಸಾರ ಖಾತೆ ಸಚಿವ ರವಿ ಶಂಕರ್ ಪ್ರಸಾದ್ ಅವರ ಖಾತೆಗೆ ಪ್ರವೇಶವನ್ನು 1 ಗಂಟೆಗಳ ಕಾಲ ನಿರಾಕರಿಸಿದೆ.
ಈ ಕುರಿತು ಮತ್ತೊಂದು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವಂತ ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರು, ಟ್ವಿಟ್ಟರ್ ನನ್ನ ಖಾತೆಯನ್ನು ಪ್ರವೇಶಿಸುವುದಕ್ಕೆ ನಿರ್ಬಂಧಿಸಿದೆ. ಈ ಬಗ್ಗೆ ಮಾಹಿತಿ ಪಡೆದಾಗ, ತಾವು ಅಮರಿಕ ಡಿಜಿಟಲ್ ಮಿಲೇನಿಯಂ ಕೃತಿಸ್ವಾಮ್ಯ ಕಾಯ್ದೆಯ ಉಲ್ಲಂಘನೆ ಮಾಡಿದ್ದಾಗಿ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಸಾರ್ವಜನಿವಾಗಿ ರವಿಶಂಕರ್ ಪ್ರಸಾದ್ ಅವರ ಖಾತೆ ಕಾಣುತ್ತಿತ್ತು, ಆದರೆ ಅಕೌಂಟ್ ತೆರೆಯಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಕೊ ಆಪ್ನಲ್ಲಿ ಈ ಬಗ್ಗೆ ಸಚಿವರು ತಿಳಿಸಿದ್ದರು. 1 ಗಂಟೆಗಳ ಸ್ಥಗಿತದ ಬಳಿಕ ಟ್ವಿಟ್ಟರ್ ಎಚ್ಚರಿಕೆ ಸಂದೇಶದೊಂದಿಗೆ ಮತ್ತೆ ಅಕೌಂಟ್ ತೆರೆಯಲು ಅನುಮತಿ ನೀಡಿದೆ. ನಿಮ್ಮೆ ಖಾತೆ ಬಗ್ಗೆ ಮತ್ತೆ ದೂರುಗಳು ಬಂದರೆ ಶಾಶ್ವತವಾಗಿ ಖಾತೆ ಬಂದ್ ಆಗಬಹುದು ಎಂದು ಸಂದೇಶದಲ್ಲಿ ತಿಳಿಸಲಾಗಿದೆ. ಹಿಂಸೆ, ಕೃತಿ ಸ್ವಾಮ್ಯಕ್ಕೆ ಧಕ್ಕೆ ಬರವಂತೆ ಮತ್ತೆ ಮಾಡಬೇಡಿ ಎಂದು ಎಚ್ಚರಿಸಲಾಗಿದೆ.
ಈ ಬಗ್ಗೆ ಸಚಿವರ ಕಚೇರಿ ಸಿಬ್ಬಂದಿ ಪ್ರತಿಕ್ರಿಯೆ ನೀಡಿ , ಟ್ವಿಟ್ಟರ್ ಖಾತೆ ಸ್ಥಗಿತದ ಬಗ್ಗೆ ಮೊದಲೇ ತಿಳಿಸಿರಲಿಲ್ಲ. ಜೊತೆಗೆ ಯಾವ ವಿಚಾರದಲ್ಲಿ ನಿಯಮಗಳನ್ನು ಮೀರಲಾಗಿದೆ ಎಂದೂ ಟ್ವಿಟ್ಟರ್ ತಿಳಿಸಿಲ್ಲ ಎಂದು ತಿಳಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಹೊಸ ಐಟಿ ನಿಯಮಗಳ ವಿಚಾರವಾಗಿ ನಡೆಯುತ್ತಿರುವ ತಿಕ್ಕಾಟ ಸಂಬಂಧ ಟ್ವಿಟ್ಟರ್ ಹೀಗೆ ಮಾಡಿದೆ ಎನ್ನಲಾಗುತ್ತಿದೆ. ಟ್ವಿಟ್ಟರ್ ಎಚ್ಚರಿಕೆ ಸಂದೇಶ ಕಳಹಿಸಿರುವುದು ತೀವ್ರ ಚರ್ಚೆಗೆ ಗುರಿಯಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ