ಮುಂಬೈ: ಇಲ್ಲಿನ ಮನ್ಖುರ್ದ್ ಪ್ರದೇಶದಲ್ಲಿ ಐಸ್ ಕ್ರೀಂನಲ್ಲಿ ಇಲಿ ವಿಷವನ್ನು ಬೆರೆಸಿ 27 ವರ್ಷದ ವ್ಯಕ್ತಿ ತನ್ನ ಮೂವರು ಮಕ್ಕಳಿಗೆ ವಿಷ ಉಣಿಸಿದ್ದು, ಅವರಲ್ಲಿ ಒಬ್ಬ ಮೃತಪಟ್ಟಿದ್ದಾನೆ ಹಾಗೂ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 25 ರಂದು ಈ ಘಟನೆ ನಡೆದಿದೆ, ಆದರೆ ಬುಧವಾರ ಸರ್ಕಾರಿ ಸಿಯಾನ್ ಆಸ್ಪತ್ರೆಯಲ್ಲಿ ಆರು ವರ್ಷದ ಬಾಲಕ ಮೃತಪಟ್ಟಾಗ ಅದು ಬೆಳಕಿಗೆ ಬಂದಿದೆ. ನಂತರ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪತ್ನಿ ನಾಜಿಯಾ ಬೇಗಂ ಅವರೊಂದಿಗೆ ಜಗಳವಾಡಿದ ನಂತರ ಆರೋಪಿ ಅಲಿ ನೌಶಾದ್ ಅನ್ಸಾರಿ ತನ್ನ ಮೂವರು ಮಕ್ಕಳು ಅದರಲ್ಲಿ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಹುಡುಗಿಯನ್ನು ಹೊರಗೆ ಕರೆದೊಯ್ದು, ಅವರಿಗೆ ಐಸ್ ಕ್ರೀಮ್ ನೀಡುವ ಭರವಸೆ ನೀಡಿದ್ದಾನೆ. ಆದರೆ, ಅವರಿಗೆ ಐಸ್ ಕ್ರೀಂನಲ್ಲಿ ವಿಷ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.ಮನ್ ಖುರ್ದ್ ಸಾಥೆ ನಗರ ನಿವಾಸಿ ಕೂಲಿ ಕಾರ್ಮಿಕ ಅನ್ಸಾರಿ ವಿರುದ್ಧ ಕೊಲೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಆದರೆ, ಅನ್ಸಾರಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ದಂಪತಿ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಬೇಗಂ ಅವರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜೂನ್ 25 ರಂದು, ಜಗಳವಾಡಿದ ನಂತರ ತಅನು ಸಹೋದರಿಯೊಂದಿಗೆ ಇರಲು ಹೋದರು. ನಂತರ ಅನ್ಸಾರಿ ಮೂವರು ಮಕ್ಕಳನ್ನು ಐಸ್ಕ್ರೀಮ್ಗಾಗಿ ಹೊರಗೆ ಕರೆದೊಯ್ದಿದ್ದಾನೆ. ನಂತರ, ಆಕೆಯ ಮಕ್ಕಳು ಹೊಟ್ಟೆ ನೋವಿನಿಂದ ನರಳಲುಪ್ರಾರಂಭಿಸಿದಾಗ, ಮನೆಗೆ ಮರಳಿದ ನಾಜಿಯಾ ಅವರನ್ನು ಸಿಯಾನ್ ಆಸ್ಪತ್ರೆಗೆ ಕರೆದೊಯ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರಂಭದಲ್ಲಿ, ಮಕ್ಕಳು ಆಕಸ್ಮಿಕವಾಗಿ ಇಲಿ ವಿಷ ಸೇವಿಸಿದ್ದಾರೆ ಎಂದು ನಾಜಿಯಾ ವೈದ್ಯರಿಗೆ ಸುಳ್ಳು ಹೇಳಿದ್ದರು, ಆದರೆ ಅವರ ಮಗ ತೀರಿಕೊಂಡ ನಂತರ, ಅವರು ಪೊಲೀಸರಿಗೆ ಸತ್ಯವನ್ನು ಬಹಿರಂಗಪಡಿಸಿದರು.
ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಇಬ್ಬರು ಮಕ್ಕಳ ಹೇಳಿಕೆಗಳನ್ನು ಪೊಲೀಸರು ದಾಖಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ