ಸಂಸತ್ತಿನಲ್ಲಿ ರೈತರ ಬೇಡಿಕೆ ವಿಷಯ ಚರ್ಚೆಗೆ ತನ್ನಿ: ಪ್ರತಿಪಕ್ಷಗಳಿಗೆ ಎಸ್‌ಕೆಎಂ ಒತ್ತಾಯ

ನವದೆಹಲಿ: ಮುಂಬರುವ ಮುಂಗಾರು ಅಧಿವೇಶನದಲ್ಲಿ ಇತರ ಯಾವುದೇ ವಿಷಯಗಳ ಚರ್ಚೆಗೂ ಮುನ್ನ ನೂತನ ಮೂರು ಕೃಷಿ ಕಾಯ್ದೆ ಮತ್ತು ಎಂಎಸ್ಪಿಗಳ ಕುರಿತ ರೈತರ ಬೇಡಿಕೆ ಸಂಸತ್ತಿನಲ್ಲಿ ಚರ್ಚೆಯಾಗುವಂತೆ ವಿರೋಧ ಪಕ್ಷಗಳು ಒತ್ತಡ ಹೇರಬೇಕು ಎಂದು ಒತ್ತಾಯಿಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ಹೇಳಿದೆ.
ಕೇಂದ್ರ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಆಂದೋಲನಕ್ಕೆ ನಾಂದಿ ಹಾಡುತ್ತಿರುವ 40ಕ್ಕೂ ಹೆಚ್ಚು ರೈತ ಸಂಘಗಳು ಜುಲೈ 22ರಿಂದ ಸಂಸತ್ತಿನಲ್ಲಿ ತಮ್ಮ ಯೋಜಿತ ಪ್ರತಿಭಟನೆಗಳಿಗೆ ಸಿದ್ಧತೆ ಪೂರ್ಣ ಹಂತದಲ್ಲಿದೆ ಎಂದರು.
ಪ್ರತಿಭಟನೆಯಲ್ಲಿ ಭಾಗವಹಿಸಲು ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ರಾಜಸ್ಥಾನ, ಮತ್ತು ದೂರದ ರಾಜ್ಯಗಳಾದ ಪಶ್ಚಿಮ ಬಂಗಾಳ, ಛತ್ತೀಸ್‌ಗಢ ಮತ್ತು ಕರ್ನಾಟಕದ ರೈತರು ಮತ್ತು ಮುಖಂಡರು ದೆಹಲಿಯ ಗಡಿಗೆ ಆಗಮಿಸುತ್ತಿದ್ದಾರೆ.
ಪ್ರತಿಭಟನೆಯನ್ನು ಶಾಂತಿಯುತವಾಗಿ ಕಾರ್ಯಗತಗೊಳಿಸಲಾಗುವುದು. ಪ್ರತಿದಿನ 200 ರೈತರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ. ರೈತರು ಪ್ರತಿಭಟನೆಯನ್ನು ತಡೆಯುವ ಯಾವುದೇ ಪ್ರಯತ್ನ ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಎಸ್‌ಕೆಎಂ ಹೇಳಿದೆ.
ಪ್ರತಿಭಟನೆಯ ಪೂರ್ವಭಾವಿಯಾಗಿ ಜುಲೈ 17ರಂದು ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲ ವಿರೋಧ ಪಕ್ಷದ ಸಂಸದರಿಗೆ ಪತ್ರಗಳನ್ನು ನೀಡುವುದಾಗಿ ಒಕ್ಕೂಟ ಹೇಳಿದೆ.

ಪ್ರಮುಖ ಸುದ್ದಿ :-   ರಾಂಚಿಯ ಆರ್‌ಎಸ್‌ಎಸ್ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿಗೆ ಯತ್ನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement