ಶಿಮ್ಲಾ: ಸವಾರನೋರ್ವ ಬೈಕ್ ಹೆಗಲ ಮೇಲೆ ಹೊತ್ತು ರಸ್ತೆ ದಾಟಿರುವ ಘಟನೆ ಹಿಮಾಚಲ ಪ್ರದೇಶದ ಚಂಬಾ ಕಣಿವೆಯಲ್ಲಿ ನಡೆದಿದೆ. ಈಗ ಬೈಕ್ ಸವಾರನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ವಾರದಿಂದ ಹಿಮಾಚಲ ಪ್ರದೇಶದಲ್ಲಿ ಜೋರು ಮಳೆಯಾಗುತ್ತಿದ್ದು, ಜನಜೀವನ ತತ್ತರಿಸಿದೆ. ಬಹುತೇಕ ಗ್ರಾಮಗಳು ಭಾರಿ ಮಳೆಯಿಂದ ಸಂಪರ್ಕ ಕಳೆದುಕೊಂಡಿವೆ. ಕಣಿವೆ ಭಾಗಗಳಲ್ಲಿ ರಸ್ತೆ ಮೇಲೆ ಅಪಾರ ಪ್ರಮಾಣದ ಮಣ್ಣು ಬಿದ್ದ ಪರಿಣಾಮ ಸ್ಥಗಿತಗೊಂಡಿದೆ,
ಈ ಘಟನೆ ನಡೆದಿದ್ದು ಚಂಬಾದ ತಿಸ್ಸಾ ಎಂಬ ಪ್ರದೇಶದಲ್ಲಿ. ರಸ್ತೆ ಮೇಲೆ ಅಪಾರ ಪ್ರಮಾಣದ ಮಣ್ಣು ಕುಸಿದು ನೀರು ಹರಿಯುತ್ತಿತ್ತು. ರಸ್ತೆಯ ಮತ್ತೊಂದು ಕಡೆ ಹೋಗಬೇಕಿದ್ದ ಸವಾರ ತನ್ನ ದ್ವಿಚಕ್ರ ವಾಹನವನ್ನು ಹೆಗಲ ಮೇಲೆ ಹೊತ್ತುಕೊಂಡು ಕಣಿವೆಯ ಅಂಚಿನಲ್ಲಿ ಅತ್ಯಂತ ದುರ್ಗಮ ಪ್ರದೇಶದಲ್ಲಿ ಹೋಗಿದ್ದಾನೆ. . ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನೆಟ್ಟಿಗರು ನಿಜವಾದ ಬಾಹುಬಲಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಜೀವ ಪಣಕ್ಕಿಟ್ಟು ಈ ಸಾಹಸ ಮಾಡುವ ಅಗತ್ಯವಿರಲಿಲ್ಲ ಎಂದು ಬಾಹುಬಲಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ