ಬೆಲೇಕೇರಿ ಬಳಿ ಟ್ರಾಲ್‌ ಬೋಟ್‌ ಮುಳುಗಡೆ: ಆರು ಮೀನುಗಾರರ ರಕ್ಷಣೆ

ಅಂಕೋಲಾ: ಮೀನುಗಾರಿಕೆಗೆ ತೆರಳಿದ ಟ್ರಾಲ್ ಬೋಟ್ ಇಲ್ಲಿನ ಬೆಲೇಕೇರಿ ಬಳಿ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಡೆಗೊಂಡಿದ್ದು ಬೋಟಿನಲ್ಲಿದ್ದ 6 ಮೀನುಗಾರರನ್ನು ಬೇರೆ ಬೋಟ್ ಮತ್ತು ಕರಾವಳಿ ಕಾವಲು ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ.
ತದಡಿ ಮೀನುಗಾರಿಕೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಕಿಮಾನಿಯ ಶಂಕರ ಹರಿಕಂತ್ರ ಎನ್ನುವವರಿಗೆ ಸೇರಿದ ಶಾಂತಿಕಾ ಪರಮೇಶ್ವರಿ ಹೆಸರಿನ ಬೋಟ್ ಬೆಲೇಕೇರಿ ಸಮೀಪ ಮುಳುಗಡೆ ಆಗಿದೆ ಮೀನುಗಾರರನ್ನು ಬೇರೆ ಬೋಟ್ ಮೂಲಕ ಅಮದಳ್ಳಿ ಸಮೀಪದ ಮುದಗಾ ಬಂದರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಬುಧವಾರ ಸಂಜೆ ಮುರ್ಡೇಶ್ವರ ಬಳಿ ಸಹ ಬೋಟ್ ಮುಳುಗಡೆ ಆಗಿ 7 ಜನ ಮೀನುಗಾರರನ್ನು ರಕ್ಷಿಸಲಾಗಿತ್ತು

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ವೀಡಿಯೊ...| ಹೆಗಲ ಮೇಲೆ ಕೈಹಾಕಿದ ಕಾಂಗ್ರೆಸ್​ ಮುಖಂಡನಿಗೆ ಕಪಾಳಕ್ಕೆ ಹೊಡೆದ ಡಿಸಿಎಂ ಡಿ.ಕೆ.ಶಿವಕುಮಾರ

ನಿಮ್ಮ ಕಾಮೆಂಟ್ ಬರೆಯಿರಿ

advertisement