ಭಟ್ಕಳ: ತಲಾಂದ ಸಮೀಪ ಚಿರತೆ ಸಾವು

ಭಟ್ಕಳ: ಉತತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಮುಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತಲಾಂದ ಗ್ರಾಮದ ಸಮೀಪ ಚಿರತೆಯ ಮೃತಪಟ್ಟ ವರದಿಯಾಗಿದೆ.
ಚಿರತೆ ಸತ್ತುಬಿದ್ದಿರುವುದನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆಯ ವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಸತ್ತಿರುವುದು ಹೆಣ್ಣು ಚಿರತೆ ಎಂದು ಹೇಳಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಇತ್ತೀಚಿನ ದಿನಗಳಲ್ಲಿ ಕಾಡಿನಲ್ಲಿ ಆಹಾರ ಕಡಿಮೆಯಾದ ಕಾರಣ ಚಿರತೆಗಳು ಗ್ರಾಮಗಳಿಗೆ ಬರುತ್ತಿವೆ. ಅದೇರೀತಿ ಇದು ಕೂಡ ಆಹಾರ ಹುಡುಕುತ್ತ ಕಾಡಿನಿಂದ ಊರಿನ ಅಂಚಿನಲ್ಲಿರುವ ಗುಡ್ಡ ಪ್ರದೇಶಕ್ಕೆ ಬಂದಿದ್ದು, ಬೇರೆ ಪ್ರಾಣಿಯೊಂದಿಗೆ ಹೊಡೆದಾಟ ನಡೆದು ಚಿರತೆ ಗಾಯಗೊಂಡು ಸತ್ತಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ.ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಿಯೇ ಚಿರತೆಯ ಮೃತ ದೇಹದ ಅಂತ್ಯ ಸಂಸ್ಕಾರ ನೆರವೇರಿಸಿದರು.

 

 

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement