ಹೊಸದಿಲ್ಲಿ: ಪ್ಯಾರಾಲಿಂಪಿಕ್ಸ್ ನ ಜಾವೆಲಿನ್ ಎಸೆತದಲ್ಲಿ ಚಿನ್ನ ಪದಕ ಗೆದ್ದ ಭಾರತದ ಸುಮಿತ್ ಆಂಟಿಲ್ ಅವರಿಗೆ ಹರ್ಯಾಣ ಸರಕಾರವು 6 ಕೋಟಿ ರೂ.ಗಳ ಬಹುಮಾನ ಹಾಗೂ ಸರಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದೆ.
ಪುರುಷರ ಎಫ್ 56 ವಿಭಾಗದ ಡಿಸ್ಕಸ್ ಎಸೆತದಲ್ಲಿ ಬೆಳ್ಳಿ ಪದಕ ಜಯಿಸಿರುವ ಯೋಗೇಶ್ ಕಥುನಿಯಾಗೆ 4 ಕೋಟಿ ರೂ.ಗಳ ಬಹುಮಾನ ಹಾಗೂ ಸರಕಾರಿ ನೌಕರಿ ನೀಡುವುದಾಗಿಯೂ ಸರಕಾರ ತಿಳಿಸಿದೆ.
23ರ ಹರೆಯದ ಸುಮಿತ್ ಹರ್ಯಾಣದ ಸೋನಿಪತ್ ನವರು. 2015ರಲ್ಲಿ ಸಂಭವಿಸಿದ್ದ ಮೋಟಾಬೈಕ್ ಅಪಘಾತದಲ್ಲಿ ಎಡಗಾಲು ಕಳೆದುಕೊಂಡಿದ್ದರು. ಡಿಸ್ಕಸ್ ಎಸೆತದಲ್ಲಿ ಬೆಳ್ಳಿ ಗೆದ್ದಿರುವ ಯೋಗೇಶ್ ಕೂಡ ಹರ್ಯಾಣ ರಾಜ್ಯದವರೇ ಆಗಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ