ಶ್ರೀ ಕೃಷ್ಣಾ ಮಿಲ್ಕ್ ಅಧ್ಯಕ್ಷ ಪುತ್ತು ಪೈ ನಿಧನ

ಭಟ್ಕಳ: ಕಿರವತ್ತಿಯ ಪ್ರಸಿದ್ಧ ಶ್ರೀಕೃಷ್ಣಾ ಮಿಲ್ಕ್ಸ್ ಲಿ. ಅಧ್ಯಕ್ಷ ಪುತ್ತು (ಹನುಮಂತ) ಪೈ( 68) ಸೋಮವಾರ ರಾತ್ರಿ ತಮ್ಮ ಕಿರವತ್ತಿಯ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸೋಮವಾರ ಕಿರವತ್ತಿಯ ತಮ್ಮ ನಿವಾಸದಲ್ಲಿ ಶ್ರೀ ಕೃಷ್ಣಾಷ್ಟಮಿಯ ಪೂಜೆಯನ್ನು ನೇರವರಿಸಿದ್ದ. ಇವರಿಗೆ ಪೂಜೆಯ ಬಳಿಕ ಹೃದಯಾಘಾತವಾಗಿ ನಿಧನರಾಗಿದ್ದಾರೆ.
ಮೃತರು ಇಬ್ಬರು ಪುತ್ರಿಯರು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಹಾಂಗ್ಯೋ ಕಾರ್ಯನಿರ್ವಾಹಕ ನಿರ್ದೇಶಕ ಪ್ರದೀಪ ಪೈ ಇವರ ಸಹೋದರರು.
ಶ್ರೀ ಕೃಷ್ಣಾಮಿಲ್ಕ್ಸ್‌ ಸಂಸ್ಥಾಪಕರಾಗಿದ್ದ ಇವರು ಸಾಮಾಜಿಕ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪ್ರಸಿದ್ಧರಾಗಿದ್ದರು. ಶ್ರೀ ಗೋಕರ್ಣ ಪರ್ತಗಾಳಿ ಶ್ರೀಮದ್ ವಿದ್ಯಾಧಿರಾಜ ಶ್ರೀಪಾದ ವಡೇರ ಸ್ವಾಮೀಜಿಯವರ ಶಿಷ್ಯರಾದ ಇವರು ಗೋಕರ್ಣ ಪರ್ತಗಾಳಿ ಮಠದ ಅಭಿವೃದ್ದಿ ಮತ್ತು ಧಾರ್ಮಿಕ ಕಾರ್ಯಗಳಿಗಾಗಿ ಅಪಾರ ಶ್ರಮ ವಹಿಸಿದ್ದರು.
ಭಟ್ಕಳ ಶ್ರೀ ಶಾಂತೇರಿ ಕಾಮಾಕ್ಷೀ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಅಭಿವೃದ್ಧಿಗೆ ತನ್ನದೆ ಕೊಡುಗೆ ನೀಡಿದ್ದರು. ಪುತ್ತು ಪೈ ಅವರ ಅಕಾಲಿಕ ಮರಣದಿಂದ ಜಿಲ್ಲೆಯ ಜಿಎಸ್‌ಬಿ ಸಮಾಜ ಶೋಕಸಾಗರದಲ್ಲಿ ಮುಳುಗಿದ್ದು ಭಟ್ಕಳ ಜಿಎಸ್‌ಬಿ ಸಮಾಜದ ಅಂಗಡಿ ಮಳಿಗೆಗಳು ಬಂದ ಮಾಡಿ ಗೌರವ ಸೂಚಿಸಿದೆ. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ,
ಜಿಲ್ಲಾ ಮಂತ್ರಿ ಶಿವರಾಮ ಹೆಬ್ಬಾರ, ಶಾಸಕ ಆರ್.ವಿ.ದೇಶಪಾಂಡೆ, ಶಾಸಕಿ ರೂಪಾಲಿ ನಾಯ್ಕ, ಭಟ್ಕಳ ಶಾಸಕ ಸುನೀಲ್ ನಾಯ್ಕ, ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯಕ ಮತ್ತಿತರರು ಶೋಕ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement