ಬೆಂಗಳೂರು: ರಾಜ್ಯದಲ್ಲಿ ಕೋರೊನಾ ಸೋಂಕು ಸಂಖ್ಯೆ ಇಳಿಕೆಯಾಗಿದ್ದು ಆದರೆ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ.
ರಾಜ್ಯದಲ್ಲಿ ಇಂದು (ಸೋಮವಾರ) ಹೊಸದಾಗಿ 677 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 24 ಮಂದಿ ಸೋಂಕಿನಿಂದ ಮೃತಪಟ್ಟಿದ್ದು 1,678 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ
ಹೊಸದಾಗಿ ದಾಖಲಾಗಿರುವ ಸೋಂಕು ಸೇರಿದಂತೆ ಇಲ್ಲಿಯ ತನಕ ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ 29,68,543 ಕ್ಕೆ ಏರಿಕೆಯಾಗಿದೆ ಜೊತೆಗೆ ಚೇತರಿಸಿಕೊಂಡವರ ಸಂಖ್ಯೆ 29,16,350 ಕ್ಕೆ ಹೆಚ್ಚಳವಾಗಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 14,358 ರಷ್ಟು ಇದೆ. ಸೋಂಕಿನಿಂದ ಒಟ್ಟಾರೆ ಮೃತಪಟ್ಟವರ ಸಂಖ್ಯೆ 37,627 ಕ್ಕೆ ಹೆಚ್ಚಳವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಬಾಗಲಕೋಟೆ, ಚಿಕ್ಕಬಳ್ಳಾಪುರ, ಹಾವೇರಿ ಕೊಪ್ಪಳ, ರಾಯಚೂರು, ರಾಮನಗರ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಇಂದು ಯಾವುದೇ ಸೋಂಕು ದೃಢಪಟ್ಟಿಲ್ಲ. ರಾಜ್ಯದಲ್ಲಿ ಕೊರೊನಾ ಸೋಂಕಿನ ಶೇಕಡವಾರು ಪ್ರಮಾಣ ಶೇ.0.60 ಕ್ಕೆ ಇಳಿಕೆಯಾಗಿದೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಶೇ 3.54 ಕ್ಕೆ ಏರಿಕೆಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಇಳಿಕೆಯಾಗಿದೆ .ಇಂದು 213ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಇಂದು 7 ಮಂದಿ ಮೃತಪಟ್ಡಿದ್ದಾರೆ. ಜೊತೆಗೆ 362 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಂದಿನ ಸೋಂಕು ಸಂಖ್ಯೆ
ಜಿಲ್ಲೆ ಸೋಂಕಿನ ವಿವರ..: ಬಾಗಲಕೋಟೆ – 0, ಬಳ್ಳಾರಿ – 3, ಬೆಳಗಾವಿ -28, ಬೆಂಗಳೂರು ಗ್ರಾಮಾಂತರ- 5, ಬೆಂಗಳೂರು ನಗರ. – 213, ಬೀದರ್ -1, ಚಾಮರಾಜನಗರ – 5, ಚಿಕ್ಕಬಳ್ಳಾಪುರ – 0, ಚಿಕ್ಕಮಗಳೂರು- 35, ಚಿತ್ರದುರ್ಗ – 4, ದಕ್ಷಿಣ ಕನ್ನಡ -102, ದಾವಣಗೆರೆ -3, ಧಾರವಾಡ -2, ಗದಗ – 5
ಹಾಸನ – 37, ಹಾವೇರಿ – 0, ಕಲಬುರಗಿ- 3, ಕೊಡಗು – 29, ಕೋಲಾರ -23, ಕೊಪ್ಪಳ -0, ಮಂಡ್ಯ – 5, ಮೈಸೂರು -37, ರಾಯಚೂರು -0, ರಾಮನಗರ -0,
ಶಿವಮೊಗ್ಗ – 7, ತುಮಕೂರು -26, ಉಡುಪಿ – 63, ಉತ್ತರ ಕನ್ನಡ – 41, ವಿಜಯಪುರ – 0, ಯಾದಗಿರಿ- 0
ನಿಮ್ಮ ಕಾಮೆಂಟ್ ಬರೆಯಿರಿ