ಬೆಂಗಳೂರು: ರಾಜ್ಯದಲ್ಲಿ ಕೋರೊನಾ ಸೋಂಕು ಇಳಿಕೆಯಾಗಿದ್ದು ಆದರೆ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ರಾಜ್ಯದಲ್ಲಿ ಇಂದು (ಶುಕ್ರವಾರ) ಹೊಸದಾಗಿ 789 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 23 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದೇ ಸಮಯದಲ್ಲಿ 1050 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 13,306 ರಷ್ಟು ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಹೊಸದಾಗಿ ದಾಖಲಾಗಿರುವ ಸೋಂಕು ಸೇರಿದಂತೆ ಇಲ್ಲಿಯ ತನಕ ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ 29,71,833 ಕ್ಕೆ ಏರಿಕೆಯಾಗಿದೆ. ಜೊತೆಗೆ ಚೇತರಿಸಿಕೊಂಡವರ ಸಂಖ್ಯೆ 29,20 792ಕ್ಕೆ ಹೆಚ್ಚಳವಾಗಿದೆ.
ಬಾಗಲಕೋಟೆ, ಕೊಪ್ಪಳ, ರಾಯಚೂರು,ಮತ್ತು ಯಾದಗಿರಿ ಜಿಲ್ಲೆಯಲ್ಲಿ ಇಂದು ಯಾವುದೇ ಸೋಂಕು ದೃಢಪಟ್ಟಿಲ್ಲ. ರಾಜ್ಯದಲ್ಲಿ ಕೊರೊನಾ ಸೋಂಕಿನ ಶೇಕಡವಾರು ಪ್ರಮಾಣ ಶೇ.0.58 ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 37,706 ಕ್ಕೆ ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ ಇಳಿಕೆ
ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಇಳಿಕೆಯಾಗಿದೆ .ಇಂದು 285 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಇಂದು 8 ಮಂದಿ ಮೃತಪಟ್ಡಿದ್ದಾರೆ. 273 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲಾವಾರು ಸೋಂಕಿನ ವಿವರ.: ಬಾಗಲಕೋಟೆ – 0, ಬಳ್ಳಾರಿ – 8, ಬೆಳಗಾವಿ -9, ಬೆಂಗಳೂರು ಗ್ರಾಮಾಂತರ- 24, ಬೆಂಗಳೂರು ನಗರ– 285, ಬೀದರ್ -2, ಚಾಮರಾಜನಗರ – 8, ಚಿಕ್ಕಬಳ್ಳಾಪುರ – 1, ಚಿಕ್ಕಮಗಳೂರು- 23, ಚಿತ್ರದುರ್ಗ – 5, ದಕ್ಷಿಣ ಕನ್ನಡ -108, ದಾವಣಗೆರೆ -6, ಧಾರವಾಡ -5, ಗದಗ – 1, ಹಾಸನ – 18, ಹಾವೇರಿ – 1, ಕಲಬುರಗಿ- 2, ಕೊಡಗು – 37, ಕೋಲಾರ -8, ಕೊಪ್ಪಳ -0, ಮಂಡ್ಯ – 19,
ಮೈಸೂರು -71, ರಾಯಚೂರು -0, ರಾಮನಗರ -2, ಶಿವಮೊಗ್ಗ – 13, ತುಮಕೂರು -29, ಉಡುಪಿ– 69, ಉತ್ತರ ಕನ್ನಡ – 34, ವಿಜಯಪುರ – 1,
ಯಾದಗಿರಿ- 0
ನಿಮ್ಮ ಕಾಮೆಂಟ್ ಬರೆಯಿರಿ