ಕೋರ್ಟಿನಲ್ಲಿದ್ದ ಪ್ರಕರಣ ಹಿಂಪಡೆಯದ ಕಾರಣಕ್ಕೆ ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸಿದ ಪತಿರಾಯ..!

ಭೋಪಾಲ್: ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ಕೋರ್ಟಿನಲ್ಲಿದ್ದ ಪ್ರಕರಣ ಹಿಂಪಡೆಯಲು ಒಪ್ಪದ ಕಾರಣಕ್ಕೆ ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸಿದ ಘಟನೆ ಬಗ್ಗೆ ವರದಿಯಾಗಿದೆ.
ಮಧ್ಯಪ್ರದೇಶದ ರಾತ್ಲಾಮ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ತನ್ನ ಇಬ್ಬರು ಹೆಣ್ಣು ಮಕ್ಕಳ ಎದುರಲ್ಲೇ ಪತ್ನಿಯ ಮೂಗನ್ನು ಕಚ್ಚಿ ತುಂಡರಿಸಿದ್ದಾನೆ. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ
ಆಲೌಟ್ ಆಂಜುಮನ್ ಕಾಲೋನಿಯಯಲ್ಲಿರುವ ಪತ್ನಿ ಟೀನಾ ತವರು ಮನೆಗೆ ಬಂದಿದ್ದ ಉಜ್ಜೈನಿಯ ದಿನೇಶ್ ಎಂಬಾತ ಈ ಕೃತ್ಯವಸೆಗಿದ್ದಾನೆ. ಕೋರ್ಟ್ ನಲ್ಲಿರುವ ಡೈವೋರ್ಸ್ ಮತ್ತು ಪರಿಹಾರಕ್ಕೆ ಸಂಬಂಧಿಸಿದ ಪ್ರಕರಣ ವಾಪಸ್ ಪಡೆಯಲು ಆತ ಪತ್ನಿಗೆ ಬಲವಂತ ಮಾಡಿದ್ದ ಎನ್ನಲಾಗಿದ್ದು, ಆ ಸಮಯದಲ್ಲಿ ಇಬ್ಬರ ನಡುವೆ ಜಗಳವಾಗಿದೆ. ಆಗ ಸಿಟ್ಟಿನಲ್ಲಿ ತನ್ನ ಮಕ್ಕಳ ಎದುರೇ ಪತ್ನಿಯ ಮೂಗು ಕಚ್ಚಿ ತುಂಡರಿಸಿ ಪರಾರಿಯಾಗಿದ್ದಾನೆ.
ಮಹಿಳೆ ಮತ್ತು ಆಕೆಯ ಮಕ್ಕಳ ಕೂಗಾಟ ಕೇಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಗಾಯಗೊಂಡ ಟೀನಾಳನ್ನು ಅವರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
2008 ರಲ್ಲಿ ಟೀನಾ ಹಾಗೂ ದಿನೇಶ್ ಮದುವೆಯಾಗಿದ್ದು, ಕೆಲಸ ಮಾಡದೆ ಮದ್ಯಪಾನ ಮಾಡಿ ಜಗಳವಾಡುತ್ತಿದ್ದ ದಿನೇಶನಿಂದ ದೂರವಾದ ಪತ್ನಿ ಟೀನಾ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ತವರುಮನೆಯಲ್ಲಿ ವಾಸಿಸುತ್ತಿದ್ದಳು. 2019 ರಲ್ಲಿ ಡೈವೋರ್ಸ್ ಮತ್ತು ಪರಿಹಾರಕ್ಕಾಗಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಳು. ಈ ಕೇಸ್ ಹಿಂದಕ್ಕೆ ಪಡೆಯಬೇಕು ಎಂದು ದಿನೇಶ ಒತ್ತಾಯಿಸುತ್ತಲೇ ಇದ್ದ. ಈ ಘಟನೆ ನಡೆಯಲೂ ಅದೇ ಕಾರಣವಾಗಿದೆ. ಪತ್ನಿ ಪ್ರಕರಣ ಹಿಂಪಡೆಯಲು ಒಪ್ಪದಿದ್ದಾಗ ಆಕೆಯ ತವರು ಮನೆಗೆ ಬಂದು ಮೂಗು ಕಚ್ಚಿ ತುಂಡರಿಸಿದ್ದಾನೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   "ನನ್ನ 90 ಸೆಕೆಂಡುಗಳ ಭಾಷಣವು ಕಾಂಗ್ರೆಸ್, ಇಂಡಿಯಾ ಮೈತ್ರಿಕೂಟದಲ್ಲಿ ತಲ್ಲಣ ಮೂಡಿಸಿದೆ" : ಪ್ರಧಾನಿ ಮೋದಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement