ಮಹಾರಾಷ್ಟ್ರ: ನಿಧಿ ಆಸೆಗಾಗಿ ಹೆಂಡತಿಯನ್ನೇ ನರಬಲಿ ನೀಡಲು ಮುಂದಾಗಿದ್ದ ಪತಿರಾಯ..!

ಜಲ್ನಾ: ಮುಂಬೈ; ನಿಧಿಯನ್ನು ಪಡೆಯುವ ಸಲುವಾಗಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನೇ ನರಬಲಿ ನೀಡಲು ಮುಂದಾದ ಘಟನೆ ಮಹಾರಾಷ್ಟ್ರದ (Maharashtra) ಜಲ್ನಾ ಜಿಲ್ಲೆಯ ಜಫ್ರಾಬಾದ್ ತಹಸಿಲ್‌ನಲ್ಲಿ ನಡೆದಿದೆ. ಮಹಿಳೆಯನ್ನು ಬಲಿ ನೀಡಿದರೆ ಅಪಾರ ನಿಧಿ ಸಿಗುತ್ತದೆ ಎಂಬ ಆಸೆಯಿಂದ ನರಬಲಿ ನೀಡಲು ಮುಂದಾಗಿದ್ದರು ಎನ್ನಲಾಗಿದೆ.
ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಜಫ್ರಾಬಾದ್ ತಹಸಿಲ್‌ನಲ್ಲಿ ತನ್ನ ಹೆಂಡತಿಯನ್ನು ನರಬಲಿಗಾಗಿ ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ಒಬ್ಬ ಓರ್ವ ವ್ಯಕ್ತಿ ಹಾಗೂ ಮಹಿಳಾ ತಾಂತ್ರಿಕಳನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಈ ವಾರದ ಆರಂಭದಲ್ಲಿ ಮೌಜೆ ಡೊಂಗಾವ್ ಗ್ರಾಮದಲ್ಲಿ ಸಂಭವಿಸಿದ ಘಟನೆಗೆ ಸಂಬಂಧಿಸಿದಂತೆ ಇನ್ನೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ವ್ಯಕ್ತಿಯ ಪತ್ನಿ ಆತನ ವಿರುದ್ಧ ದೂರು ನೀಡಿದ ನಂತರ ಮೂವರನ್ನು ಬಂಧಿಸಲಾಗಿದೆ.
ಆರೋಪಿಗಳನ್ನು ಸಂತೋಷ್ ಪಿಂಪಲ್ (40), ಜೀವನ್ ಪಿಂಪಲ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಡೊಂಗಾವ್ ನಿವಾಸಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಮಹಿಳೆ ತಾಂತ್ರಿಕಳು ರಾಜ್ಯದ ಬುಲ್ಧಾನಾ ಜಿಲ್ಲೆಯ ದೇವಾಲ್‌ಗಾಂವ್ ರಾಜಾ ತಹಸಿಲ್ ಮೂಲದವರು.
ಸಂತೋಷ್ ಗೆ ಕುಡಿಯುವ ಅಭ್ಯಾಸವಿತ್ತು. ಆತನು ತನ್ನ ಹೆಚ್ಚಿನ ಸಮಯವನ್ನು ಹಳ್ಳಿಯಲ್ಲಿರುವ ಸ್ಮಶಾನಗಳ ಸುತ್ತಲೂ ಕಳೆಯುತ್ತಿದ್ದ ಮತ್ತು ತನ್ನ ಹೆಂಡತಿಗೆ ತಾನು ಶೀಘ್ರದಲ್ಲಿ ಕೆಲವು ಗುಪ್ತ ನಿಧಿಯನ್ನು ಕಂಡುಕೊಳ್ಳುತ್ತೇನೆ ಎಂದು ಹೇಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 22 ರ ರಾತ್ರಿ, ಸಂತೋಷ್ ತನ್ನ ಮನೆಯಲ್ಲಿ ಅಡಗಿದ್ದ ನಿಧಿಯನ್ನು ಕಂಡುಕೊಳ್ಳಲು ಮಹಿಳೆಯೊಬ್ಬಳನ್ನು ಕರೆತಂದಿದ್ದ. ಅವಳು ಕೆಲವು ಆಚರಣೆಗಳನ್ನು ಮಾಡಿದಳು. ಮರುದಿನ, ಸಂತೋಷ್ ತನ್ನ ಹೆಂಡತಿ ಸೀಮಾಗೆ ಅವಳನ್ನು ನರಬಲಿ ಕೊಡುವುದಾಗಿ ಹೇಳಿದ. ನಂತರ ಆಕೆಯು ತನ್ನ ಪತಿ ಹಾಗೂ ಮಹಿಳಾ ತಾಂತ್ರಿಕಳ ದುಷ್ಟ ಉದ್ದೇಶಗಳ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿದಳು ಮತ್ತು ತನ್ನ ತಂದೆಯೊಂದಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದಳು, ನಂತರ ಮೂವರನ್ನು ಬಂಧಿಸಲಾಯಿತು.
ಅವರ ವಿರುದ್ಧ ಮಹಾರಾಷ್ಟ್ರದ ನರಬಲಿ ಮತ್ತು ಇತರ ಅಮಾನವೀಯ, ದುಷ್ಟ ಮತ್ತು ಅಘೋರಿ ಪದ್ಧತಿಗಳು ಮತ್ತು ಬ್ಲ್ಯಾಕ್ ಮ್ಯಾಜಿಕ್ ಕಾಯ್ದೆ ಮತ್ತು ಕೆಲವು ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಇವರು ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ : ತೆಲುಗು ದೇಶಂ ಪಕ್ಷದ ಇವರ ಆಸ್ತಿ 5,785 ಕೋಟಿ ರೂಪಾಯಿ...!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement