ಕರ್ನಾಟಕದಲ್ಲಿ ಮತ್ತಷ್ಟು ಕುಸಿದ ಹೊಸ ಕೋವಿಡ್‌ ಪ್ರಕರಣಗಳು..!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆ ವರದಿಯಾಗಿದೆ. ಆದರೆ ಸಾವಿನ ಸಾವಿನ ಸಂಖ್ಯೆ ‌ ಹೆಚ್ಚಾಗಿದೆ.
ರಾಜ್ಯದಲ್ಲಿ ಸೋಮವಾರ ಹೊಸದಾಗಿ 504 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ಇದೇ ಸಮಯದಲ್ಲಿ 20 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. 893 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 12,804 ರಷ್ಟು ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ 29,73,889 ಕ್ಕೆ ಏರಿಕೆಯಾಗಿದೆ. ಹಾಗೆಯೇ ಚೇತರಿಸಿಕೊಂಡವರ ಸಂಖ್ಯೆ 29,23,230 ಕ್ಕೆ ಹೆಚ್ಚಳವಾಗಿದೆ. ಸೋಂಕಿನಿಂದ ಒಟ್ಟು ಮೃತಪಟ್ಟವರ ಸಂಖ್ಯೆ 37,746ಕ್ಕೆ ಹೆಚ್ಚಳವಾಗಿದೆ.
ಬಾಗಲಕೋಟೆ, ಚಿಕ್ಕಬಳ್ಳಾಪುರ, ಧಾರವಾಡ, ಗದಗ, ಹಾವೇರಿ, ಕೊಪ್ಪಳ , ರಾಮನಗರ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಯಾವುದೇ ಸೋಂಕು ದೃಢಪಟ್ಟಿಲ್ಲ. ರಾಜ್ಯದಲ್ಲಿ ಕೊರೊನಾ ಸೋಂಕಿನ ಶೇಕಡವಾರು ದರ ಶೇ.0.48 ಕ್ಕೆ ಇಳಿಕೆಯಾಗಿದೆ. ಸೋಂಕಿನಿಂದ ಮರಣದ ದರ ಶೇ. 3.96 ಕ್ಕೆ ಏರಿಕೆಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಇಳಿಕೆಯಾಗಿದೆ. ಇಂದು 181 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು 5 ಮಂದಿ ಮೃತಪಟ್ಡಿದ್ದಾರೆ. 265 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ 8 ಜಿಲ್ಲೆಗಳಲ್ಲಿ ಇನ್ನೂ 3 ದಿನ ಭಾರಿ ಗಾಳಿ ಮಳೆಯ ಮುನ್ಸೂಚನೆ

ಜಿಲ್ಲಾವಾರು ಸೋಂಕಿತರ ಸಂಖ್ಯೆ
ಬಾಗಲಕೋಟೆ – 0, ಬಳ್ಳಾರಿ – 3, ಬೆಳಗಾವಿ -4, ಬೆಂಗಳೂರು ಗ್ರಾಮಾಂತರ- 14, ಬೆಂಗಳೂರು ನಗರ – 181, ಬೀದರ್ -1, ಚಾಮರಾಜನಗರ – 4, ಚಿಕ್ಕಬಳ್ಳಾಪುರ – 0, ಚಿಕ್ಕಮಗಳೂರು- 19, ಚಿತ್ರದುರ್ಗ – 7, ದಕ್ಷಿಣ ಕನ್ನಡ -83, ದಾವಣಗೆರೆ -2, ಧಾರವಾಡ -0, ಗದಗ – 0, ಹಾಸನ – 18, ಹಾವೇರಿ – 0, ಕಲಬುರಗಿ- 1, ಕೊಡಗು – 26, ಕೋಲಾರ -11, ಕೊಪ್ಪಳ -0, ಮಂಡ್ಯ – 8, ಮೈಸೂರು -48, ರಾಯಚೂರು -1, ರಾಮನಗರ -0, ಶಿವಮೊಗ್ಗ – 18, ತುಮಕೂರು -20, ಉಡುಪಿ – 24, ಉತ್ತರ ಕನ್ನಡ – 12, ವಿಜಯಪುರ – 0
ಯಾದಗಿರಿ- 0

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement