ಬೆಂಗಳೂರು: ರಾಜ್ಯದಲ್ಲಿ ಇಂದು (ಬುಧವಾರ) ಹೊಸದಾಗಿ 539 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 17 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದೇ ಸಮಯದಲ್ಲಿ 591 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಸ 12,634ರಷ್ಟು ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ 29,75,067 ಕ್ಕೆ ಏರಿಕೆಯಾಗಿದೆ ಹಾಗೂ 29,24,693 ಜನ ಚೇತಿರಿಸಿಕೊಂಡಿದ್ದಾರೆ. ಸೋಂಕಿನಿಂದ ಒಟ್ಟಾರೆ ಮೃತಪಟ್ಟವರ ಸಂಖ್ಯೆ 37,780ಕ್ಕೆ ಹೆಚ್ಚಳವಾಗಿದೆ.
ಚಿಕ್ಕಬಳ್ಳಾಪುರ, ರಾಯಚೂರು, ಬೀದರ್, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಇಂದು ಯಾವುದೇ ಸೋಂಕು ದೃಢಪಟ್ಟಿಲ್ಲ.
ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.0.48 ಕ್ಕೆ ಇಳಿಕೆಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಏರಿಕೆಯಾಗಿದೆ. ಬುಧವಾರ 239 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು 7 ಮಂದಿ ಮೃತಪಟ್ಡಿದ್ದಾರೆ. ಜೊತೆಗೆ 141 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲಾವಾರು ಸೋಂಕಿನ ಮಾಹಿತಿ:
ಬಾಗಲಕೋಟೆ – 1, ಬಳ್ಳಾರಿ – 1, ಬೆಳಗಾವಿ -8, ಬೆಂಗಳೂರು ಗ್ರಾಮಾಂತರ- 10, ಬೆಂಗಳೂರು ನಗರ.– 239, ಬೀದರ್ -3, ಚಾಮರಾಜನಗರ– 2, ಚಿಕ್ಕಬಳ್ಳಾಪುರ – 0, ಚಿಕ್ಕಮಗಳೂರು- 4, ಚಿತ್ರದುರ್ಗ – 8, ದಕ್ಷಿಣ ಕನ್ನಡ -75, ದಾವಣಗೆರೆ -2, ಧಾರವಾಡ -5, ಗದಗ – 2, ಹಾಸನ – 21, ಹಾವೇರಿ –1,
ಕಲಬುರಗಿ- 2, ಕೊಡಗು – 36, ಕೋಲಾರ -1, ಕೊಪ್ಪಳ -13, ಮಂಡ್ಯ – 10, ಮೈಸೂರು -31, ರಾಯಚೂರು- 0, ರಾಮನಗರ -3, ಶಿವಮೊಗ್ಗ – 14, ತುಮಕೂರು -22, ಉಡುಪಿ – 6, ಉತ್ತರ ಕನ್ನಡ – 19, ವಿಜಯಪುರ – 0, ಯಾದಗಿರಿ- 0
ನಿಮ್ಮ ಕಾಮೆಂಟ್ ಬರೆಯಿರಿ