ಕರ್ನಾಟಕದಲ್ಲಿ ಏಳೆಂಟು ತಿಂಗಳ ನಂತರ 400ಕ್ಕಿಂತ ಕೆಳಕ್ಕೆ ಕುಸಿದ ಕೊರೊನಾ ದೈನಂದಿನ ಸೋಂಕು..!

ಬೆಂಗಳೂರು: ರಾಜ್ಯದಲ್ಲಿಂದು ಬಹಳ ದಿನಗಳ ನಂತರ ಸೋಮವಾರ ಅತಿ ಕಡಿಮೆ ಕೊರೊನಾ ಸೋಂಕು ಧೃಢಪಟ್ಟಿದೆ.
ರಾಜ್ಯದಲ್ಲಿ ಇಂದು (ಸೋಮವಾರ) ಹೊಸದಾಗಿ 397 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 13 ಮದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದೇವೇಳೆ 693 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 11,992 ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಈ ತನಕ ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ 29,77,889 ಕ್ಕೆ ಏರಿಕೆಯಾಗಿದೆ ಹಾಗೂ ಒಟ್ಟಾರೆ ಚೇತರಿಸಿಕೊಂಡವರ ಸಂಖ್ಯೆ 29,27,740ಕ್ಕೆ ತಲುಪಿದೆ.
ಒಟ್ಟು ಮೃತಪಟ್ಟವರ ಸಂಖ್ಯೆ 37,819 ಕ್ಕೆ ಹೆಚ್ಚಳವಾಗಿದೆ. ಬಾಗಲಕೋಟೆ , ಬೀದರ್, ದಾವಣಗೆರೆ, ಧಾರವಾಡ, ಗದಗ, ಕೊಪ್ಪಳ, ರಾಮನಗರ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಇಂದು ಯಾವುದೇ ಸೋಂಕು ದೃಢಪಟ್ಟಿಲ್ಲ.
ರಾಜ್ಯದಲ್ಲಿ ಕೊರೊನಾ ಸೋಂಕಿನ ಶೇಕಡವಾರು ಪ್ರಮಾಣ ಶೇ.0.50 ಕ್ಕೆ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ ಕೊರೊನಾ ಸೋಂಕು ಇಳಿಕೆಯಾಗಿದೆ .ಇಂದು 166 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಇಂದು 5 ಮಂದಿ ಮೃತಪಟ್ಡಿದ್ದಾರೆ. 121 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲಾವಾರು ಸೋಂಕಿನ ಮಾಹಿತಿ:
ಬಾಗಲಕೋಟೆ – 0, ಬಳ್ಳಾರಿ – 2, ಬೆಳಗಾವಿ -3, ಬೆಂಗಳೂರು ಗ್ರಾಮಾಂತರ- 2, ಬೆಂಗಳೂರು ನಗರ–166, ಬೀದರ್ -0, ಚಾಮರಾಜನಗರ –1, ಚಿಕ್ಕಬಳ್ಳಾಪುರ –0, ಚಿಕ್ಕಮಗಳೂರು- 16, ಚಿತ್ರದುರ್ಗ – 2, ದಕ್ಷಿಣ ಕನ್ನಡ -45, ದಾವಣಗೆರೆ -0, ಧಾರವಾಡ -0, ಗದಗ –0, ಹಾಸನ –33, ಹಾವೇರಿ – 1,
ಕಲಬುರಗಿ- 1,ಕೊಡಗು – 25, ಕೋಲಾರ -11, ಕೊಪ್ಪಳ -0, ಮಂಡ್ಯ – 11, ಮೈಸೂರು -40, ರಾಯಚೂರು- 1, ರಾಮನಗರ -0, ಶಿವಮೊಗ್ಗ – 12, ತುಮಕೂರು -7, ಉಡುಪಿ – 6, ಉತ್ತರ ಕನ್ನಡ – 12, ವಿಜಯಪುರ – 0, ಯಾದಗಿರಿ- 0

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement