ಯಾದಗಿರಿ: ವ್ಯಾಕ್ಸಿನ್ ಹಾಕುವ ಸಿಬ್ಬಂದಿಯ ಮಾತಿಗೆ ಜಗ್ಗದ ಯುವಕ ನನಗೆ ವ್ಯಾಕ್ಸಿನ್ ಬೇಡ ಎನ್ನುತ್ತ ಚಕ್ಕಡಿ ಗಾಡಿಯಿಂದ ಜಿಗಿದು ಓಡಿ ತಪ್ಪಿಸಿಕೊಂಡಿರುವ ಘಟನೆ ನಡೆಸ ಬಗ್ಗೆ ವರದಿಯಾಗಿದೆ.
ಯಾದಗಿರಿ ತಾಲೂಕಿನ ಹೆಡಗಿಮುದ್ರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಜಿಲ್ಲೆಯ ಕೆಲವಡೆ ವ್ಯಾಕ್ಸಿನ್ ತೆಗೆದುಕೊಳ್ಳಲು ಜನ ಹಿಂಜರಿಯುತ್ತಿದ್ದಾರೆ.
ಜಿಲ್ಲಾಮಟ್ಟದ ಅಧಿಕಾರಿಗಳೇ ಖುದ್ದಾಗಿ ಮನೆ ಮನೆಗೆ ಹೋದರೂ ಜನ ಅವರ ಮಾತಿಗೆ ಒಪ್ಪುತ್ತಿಲ್ಲ. ಹೀಗಾಗಿ ಅಧಿಕಾರಿಗಳಿಗೆ ಜನರ ಮನವೊಲಿಸುವ ಕಾರ್ಯವೇ ದೊಡ್ಡ ಸವಾಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ