ಬಂಟ್ವಾಳ; ಬಾಲಕಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್

ಮಂಗಳೂರು: ಬಂಟ್ವಾಳದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಅತ್ಯಾಚಾರಕ್ಕೊಳಗಾದ ಬಾಲಕಿಯ ಅಪಹರಣ ನಡೆದಿಲ್ಲ. ಆರೋಪಿಗಳ ಬಳಿ ಬಾಲಕಿಯೇ ತೆರಳಿದ್ದಳು. ಮಂಗಳೂರಿನ ಲಾಡ್ಜ್‌ನಲ್ಲಿ ಅತ್ಯಾಚಾರ ನಡೆದಿತ್ತು ಎನ್ನುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಬಂಟ್ವಾಳದ ಅಮ್ಟಾಡಿಯ 16 ವರ್ಷದ ಬಾಲಕಿಗೆ ಮತ್ತು ಬರುವ ಚಾಕಲೇಟ್ ನೀಡಿ ಅಪಹರಣ ಮಾಡಲಾಗಿತ್ತು. ಸಾಮೂಹಿಕವಾಗಿ ಅತ್ಯಾಚಾರ ನಡೆಸಿ ಬಾಲಕಿಯನ್ನು ಕಾರಿನಲ್ಲಿ ಬಂಟ್ವಾಳದ ಬ್ರಹ್ಮರಕೂಟ್ಲು ಟೋಲ್ ಗೇಟ್ ಬಳಿ ಬಿಡಲಾಗಿತ್ತು ಎಂದು ಸುದ್ದಿಯಾಗಿತ್ತು. ಆದರೆ ಪೊಲೀಸ್ ತನಿಖೆ ಈ ಪ್ರಕರಣಕ್ಕೆ ಟ್ವಿಸ್ಟ್ ನೀಡಿದೆ. ಪೊಲೀಸರು ನಾಲ್ವರು ಆರೋಪಿಗಳನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದು, ವಿಚಾರಣೆ ವೇಳೆ ಲಾಜ್‌ನಲ್ಲಿ ಬಾಲಕಿ ಅತ್ಯಾಚಾರ ನಡೆದಿದೆ ಎಂದು ಗೊತ್ತಾಗಿದೆ.
ಈ ಘಟನೆ ಅಕ್ಟೋಬರ್ 8ರಂದು ನಡೆದಿದ್ದು, ಮಂಗಳೂರಿನ‌ ಸಿಟಿ ಮಹಲ್ ಬಳಿ ಬಾಲಕಿ ಆರೋಪಿಗಳನ್ನು ಭೇಟಿಯಾಗಿದ್ದಾಳೆ. ಬಾಲಕಿ ಆರೋಪಿಗಳಲ್ಲಿ ಒಬ್ಬನಾದ ಉಡುಪಿ ಜಿಲ್ಲೆಯ ಕಾಪು ನಿವಾಸಿ ಜೊತೆ ಫೇಸ್ ಬುಕ್ ಫ್ರೆಂಡ್‌ ಆಗಿದ್ದಳು.
ಆ ಬಳಿಕ ಮೊಬೈಲ್‌ನಲ್ಲಿ ಇಬ್ಬರ ನಡುವೆ ಸಲುಗೆಯ ಮಾತುಕತೆಯಾಗಿದೆ. ಆರೋಪಿ ಶರತ್ ಬಾಲಕಿಯನ್ನು ತನ್ನ ಸ್ನೇಹಿತರಿಗೆ ಪರಿಚಯ ಮಾಡಿಕೊಟ್ಟಿದ್ದಾನೆ.ಆರೋಪಿಯೊಬ್ಬನ ಜೊತೆ ವಾಟ್ಸಪ್‌ನಲ್ಲಿ‌ ಅಶ್ಲೀಲ ವಿಡಿಯೋ ಚಾಟ್ ಕೂಡಾ ಮಾಡಿದ್ದಳು.
ಅಕ್ಟೋಬರ್ 8ರಂದು ಬಾಲಕಿಯನ್ನು ಪರಿಚಯಸ್ಥ ಆರೋಪಿ ಮಂಗಳೂರಿಗೆ ಬರಲು ಹೇಳಿದ್ದಾನೆ. ನಗರದ ಸಿಟಿ ಮಹಲ್ ಬಳಿ ಭೇಟಿಯಾದ ಇವರು ಬಳಿಕ ಲಾಡ್ಜ್‌ಗೆ ತೆರಳಿದ್ದಾರೆ. ಲಾಡ್ಜ್ ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಅತ್ಯಾಚಾರ ಮಾಡಲು ಅವಕಾಶ ನೀಡಿದ್ದ ಲಾಡ್ಜ್ ಸಿಬ್ಬಂದಿ ಸಹ ಅತ್ಯಾಚಾರ ಮಾಡಿದ್ದಾನೆ. ನಂತರ ಬಾಲಕಿ ಮಂಗಳೂರಿನಿಂದ ಬಸ್ ಮೂಲಕ ಬಂಟ್ವಾಳಕ್ಕೆ ತೆರಳಿ ಅತ್ಯಾಚಾರವಾದ ಬಗ್ಗೆ ಸ್ಥಳೀಯನೋರ್ವನ ಬಳಿ ಹೇಳಿ ನಂತರ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ.
ಬಾಲಕಿ ದೂರು ದಾಖಲು ಮಾಡುತ್ತಿದ್ದಂತೆಯೇ ಪೊಲೀಸ್ ತಂಡಗಳು ಆರೋಪಿಗಳ ಹೆಡೆಮುರಿ ಕಟ್ಟಿದೆ. ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿಯಲ್ಲಿ ನಾಲ್ವರನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪ್ರಮುಖ ಸುದ್ದಿ :-   ಶ್ರೀರಂಗಪಟ್ಟಣ: ಐಸ್‌ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಸಾವು

ಆರೋಪಿಗಳ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸಕ್ಷನ್ 366 (A), 376 (D), 506 ಮತ್ತು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement