ಕುಮಾರಸ್ವಾಮಿ ರಹಸ್ಯ ನನ್ನ ಬಳಿ ಇದೆ, ಬಾಯಿಬಿಟ್ರೆ ಅದು ಬೇರೆಯಾಗುತ್ತೆ: ಯತ್ನಾಳ್

ವಿಜಯಪುರ: ಉಪಚುನಾವಣೆ ಪ್ರಚಾರ ಸಮರ ತಾರಕಕ್ಕೇರಿದ್ದು, ಬಿಜೆಪಿಯಿಂದ ಕಾಂಗ್ರೆಸ್​ ವರಿಷ್ಠ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ಮುಂದುವರಿರುವ ಬೆನ್ನಿಗೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಹುಲ್​ ಗಾಂಧಿಯದ್ದು ಹುಚ್ಚರ ಕಂಪನಿ ಎಂದು ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಹಾಗೂ ಆಲಮೇಲದಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ಕುಮಾರಸ್ವಾಮಿ ರಹಸ್ಯ ನನ್ನ ಬಳಿ ಇದೆ. ಬಾಯಿಬಿಟ್ಟರೆ ಅದು ಬೇರೆಯಾಗುತ್ತದೆ ಎಂದು ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದರು.
ವಿ. ಸೋಮಣ್ಣ ಅವರಿಗೆ ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನ ನೀಡಬೇಕು ಎಂದು ಪ್ರಚಾರ ಸಭೆ ವೇದಿಕೆ ಮೇಲೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಯತ್ನಾಳ್ ಮನವಿ ಮಾಡಿದ್ದಾರೆ.
ಸಿಂದಗಿಯಲ್ಲಿ ಪ್ರಚಾರ ವೇಳೆ ಯತ್ನಾಳ್ ವೇದಿಕೆಗೆ ಬರುತ್ತಿದ್ದಂತೆ ಕೆಲವರು ಹುಲಿ ಹುಲಿ ಎಂದು ಕೂಗಿದರು. ವಿ.ಸೋಮಣ್ಣ ಕಾಲಿಟ್ಟಲ್ಲಿ ಗೆಲುವು ಖಚಿತ ಎಂದು ಸೋಮಣ್ಣ ಅವರನ್ನು ಹೊಗಳಿ ಮಾತನಾಡಿದ ಯತ್ನಾಳ್, ರಾಹುಲ್ ಗಾಂಧಿ ವಿರುದ್ಧ ಕೆಂಡಕಾರಿದರು.
ರಾಹುಲ್ ಗಾಂಧಿ ಅಫೀಮು ಅಮಲಿನಲ್ಲಿ ಇರುತ್ತಾರೆ. ರಾಹುಲ್​ ಗಾಂಧಿ ಒಬ್ಬ ಹುಚ್ಚ, ಅವರದ್ದು ಹುಚ್ಚರ ಕಂಪನಿ. ಅಂಥ ಹುಚ್ಚನಿಗೆ ಮತ ಹಾಕುತ್ತೀರಾ ಎಂದು ಪ್ರಶ್ನಿಸಿದ ಯತ್ನಾಳ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೂಡ ವಾಗ್ದಾಳಿ ನಡೆಸಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ನನಗೆ ಎಲ್ಲ ಗೊತ್ತಿದೆ. ಅವರ ರಹಸ್ಯ ನನ್ನ ಬಳಿ ಇದೆ. ಆ ಕುರಿತು ಬಾಯಿ ಬಿಟ್ಟರೆ ಅದು ಬೇರೆಯದೇ ಆಗುತ್ತದೆ ಎಂದು ಹರಿಹಾಯ್ದರು.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement