ರಾಮನಗರ: ರಾತ್ರಿ ಮನೆಯೊಳಗೇ ನುಗ್ಗಿದ ಚಿರತೆ ರೂಮಿನಲ್ಲಿ ಬಂಧಿಯಾಯ್ತು..!.. ದೃಶ್ಯ ವಿಡಿಯೊದಲ್ಲಿ ಸೆರೆ

ರಾಮನಗರ: ಚಿರತೆಯೊಂದು ಮನೆಗೆ ನುಗ್ಗಿದ ಘಟನೆ ರಾಮನಗರ ತಾಲೂಕಿನ ಜಾಲಮಂಗಲ ಗ್ರಾಮದಲ್ಲಿ ನಡೆದಿದೆ.
ಬೇಟೆಗೆಂದು ನಾಯಿಯನ್ನು ಹುಡುಕಿಕೊಂಡು ಬಂದಿದ್ದ ಚಿರತೆಯು ರೇಣುಕಯ್ಯ ಎಂಬುವರ ಮನೆಗೆ ತಡರಾತ್ರಿ ನುಗ್ಗಿತ್ತು. ರಾತ್ರಿ ಸಪ್ಪಳ ಕೇಳಿ ಎಚ್ಚರವಾದ ಮನೆಯವರು ನೋಡಿದಾಗ ಮನೆಯ ಒಳಗೇ ಚಿರತೆ ಬಂದಿತ್ತು.

ಸಮಯಪ್ರಜ್ಞೆ ಮೆರೆದ ಮನೆಯವರು ತಾವು ಸುರಕ್ಷಿತವಾಗಿ ಹೊರಬಂದು ಬಾಗಿಲು ಹಾಕಿ ಚಿರತೆಯನ್ನು ರೂಮಿನೊಳಗೇ ಕೂಡಿಹಾಕಿದ್ದಾರೆ. ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು.
ಅರಣ್ಯ ಇಲಾಖೆಯವರು ಕಿಟಕಿ ಮೂಲಕ ಅರವಳಿಕೆ ನೀಡಲು ಪ್ರಯತ್ನಿಸಿದರೆ ಅವರ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿತ್ತು. ಕೊನೆಗೂ ಅರಿವಳಿಕೆ ನೀಡಲು ಸಫಲರಾದ ಅರಣ್ಯ ಇಲಾಖೆಯವರು ಚಿರತೆಯನ್ನು ಎಚ್ಚರ ತಪ್ಪಿಸಿ ಸೆರೆ ಹಿಡಿದಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನ ಪಶು ವೈದ್ಯರು ಚಿರತೆಯನ್ನು ಸೆರೆಹಿಡಿದಿದ್ದಾರೆ.

4 / 5. 1

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

ನಿಮ್ಮ ಕಾಮೆಂಟ್ ಬರೆಯಿರಿ

advertisement