ಕರ್ನಾಟಕದಲ್ಲಿ ಶನಿವಾರ ಹೊಸದಾಗಿ 347 ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಶನಿವಾರ ಕೊರೊನಾ ಸೋಂಕು ಇಳಿಕೆಯಾಗಿದ್ದು ಸಾವಿನ ಸಂಖ್ಯೆ ಏರಿಕೆಯಾಗಿದೆ.
ಇಂದು ಹೊಸದಾಗಿ 347 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 10 ಮಂದಿ ಮೃತಪಟ್ಟಿದ್ದಾರೆ. ಇದೇ ಸಮಯದಲ್ಲಿ 255 ಮಂದಿ ಚೇತರಿಸಿಕೊಂಡು ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ‌.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 29,88,041ಕ್ಕೆ ಏರಿಕೆಯಾಗಿದೆ. ಗುಣಮುಖರಾದವರ ಸಂಖ್ಯೆ 29,41,233 ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಮೃತರ ಸಂಖ್ಯೆ 38,071 ಕ್ಕೆ ಏರಿದೆ. ರಾಜ್ಯದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 8,708 ಇದೆ.
ರಾಜ್ಯದಲ್ಲಿ‌ ಇಂದು ಬಾಗಲಕೋಟೆ, ಬೀದರ, ಗದಗ, ಹಾವೇರಿ, ಕೊಪ್ಪಳ, ರಾಯಚೂರು , ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಯಾವುದೇ ಸೋಂಕು ಪ್ರಕರಣ ದೃಢಪಟ್ಟಿಲ್ಲ.
ಬೆಂಗಳೂರಿನಲ್ಲಿ ಕೊರೊನಾ ಸೋಂಕು ಪ್ರಕರಣ ಇಂದು ಇಳಿಕೆಯಾಗಿದೆ. 166 ಮಂದಿಗೆ ಕಾಣಿಸಿಕೊಂಡಿದ್ದು, 100 ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. 4 ಮಂದಿ ಮೃತಪಟ್ಟಿದ್ದಾರೆ.
ಜಿಲ್ಲಾವಾರು ಸೋಂಕಿತರ ವಿವರ..:
ಬಾಗಲಕೋಟೆ- 0, ಬಳ್ಳಾರಿ – 1, ಬೆಳಗಾವಿ – 9, ಬೆಂಗಳೂರು ಗ್ರಾಮಾಂತರ- 3, ಬೆಂಗಳೂರು ನಗರ. – 166, ಬೀದರ್ 0, ಚಾಮರಾಜನಗರ- 1,
ಚಿಕ್ಕಬಳ್ಳಾಪುರ- 3, ಚಿಕ್ಕಮಗಳೂರು- 2, ಚಿತ್ರದುರ್ಗ- 1, ದಕ್ಷಿಣ ಕನ್ನಡ – 21, ದಾವಣಗೆರೆ- 4, ಧಾರವಾಡ- 1, ಗದಗ- 0, ಹಾಸನ- 13, ಹಾವೇರಿ- 0,
ಕಲಬುರಗಿ- 1, ಕೊಡಗು- 9, ಕೋಲಾರ- 3, ಕೊಪ್ಪಳ- 0, ಮಂಡ್ಯ- 8, ಮೈಸೂರು- 44, ರಾಯಚೂರು- 0, ರಾಮನಗರ – 1, ಶಿವಮೊಗ್ಗ- 9, ತುಮಕೂರು- 19,
ಉಡುಪಿ- 14, ಉತ್ತರ ಕನ್ನಡ- 14, ವಿಜಯಪುರ – 0, ಯಾದಗಿರಿ- 0

ಪ್ರಮುಖ ಸುದ್ದಿ :-   ಚಿನ್ನ ಕಳ್ಳಸಾಗಣೆ ಪ್ರಕರಣ : ರನ್ಯಾ ರಾವ್‌ ಗೆ ಸೇರಿದ 34 ಕೋಟಿ ರೂ ಮೌಲ್ಯದ ಆಸ್ತಿ ಜಪ್ತಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement