ಬೆಂಗಳೂರು: ನಾಳೆ (ಬುಧವಾರ) ಬೆಳಗ್ಗೆ 9 ಗಂಟೆಯಿಂದ ಸಂಜೆ ಏಳು ಗಂಟೆ ವರೆಗೆ ಪ್ರತಿನಿತ್ಯ ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.
ದಿವಂಗತ ನಟ ಪುನೀತ್ ಕುಟುಂಬಸ್ಥರು ಐದನೇ ದಿನವಾದ ಇಂದು (ಮಂಗಳವಾರ) ಶಾಸ್ತ್ರ ಹಾಲುತುಪ್ಪದ ಪೂಜೆ ಬಳಿಕ ಅಪ್ಪು ಸಮಾಧಿ ದರ್ಶನಕ್ಕೆ ಕೆಲವು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.
ಅಭಿಮಾನಿಗಳಿಗೆ ಇಂದು (ಮಂಗಳವಾರ) ಸಂಜೆ 6.30ಕ್ಕೆ, ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ ನೀಡಲಾಯ್ತು. ಕೆಲ ಅಭಿಮಾನಿಗಳು ಅಪ್ಪು ಸಮಾಧಿ ದರ್ಶಿಸಿ ಭಾವುಕರಾದರು. ಸಮಾಧಿ ದರ್ಶನಕ್ಕೆ ಅವಕಾಶ ನೀಡುವ ಕುರಿತಂತೆ ಸಂಜೆ ವರೆಗೂ ಗೊಂದಲ ಮುಂದುವರಿದಿತ್ತು. ಓರ್ವ ಅಭಿಮಾನಿಯಂತೂ ಬ್ಲೇಡ್ ಹಿಡಿದು ಆತ್ಮಹತ್ಯೆ ಮಾಡ್ಕೊಳ್ಳೋದಾಗಿ ಬೆದರಿಸಿದ. ಕೊನೆಗೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾದ ಅನಿವಾರ್ಯತೆ ಎದುರಾಯಿತು.
ನಟ ಶಿವರಾಜ್ಕುಮಾರ್ ಅವರು ಶೀಘ್ರದಲ್ಲಿ ಅಪ್ಪು ಸಮಾಧಿಗೆ ಅಭಿಮಾನಿಗಳು ಭೇಟಿ ನೀಡುವುದಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿದ್ದರು, ಅದರಂತೆ ಈಗ ಪವರ್ ಸ್ಟಾರ್ ಸಮಾಧಿಗೆ ಭೇಟಿ ನೀಡಲು ಸಾರ್ವಜನಿಕರಿಗೆ ಅವಕಾಶವನ್ನು ನೀಡಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ