ಕೆರೆಯಲ್ಲಿ ಸಿಲುಕಿದ್ದ ಪಕ್ಷಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

ಶಿವಮೊಗ್ಗ: ಕೆರೆಯ ಮಧ್ಯದಲ್ಲಿ ಸಿಲುಕಿದ್ದ ಪಕ್ಷಿಯನ್ನು ರಕ್ಷಿಸಲು ಹೋಗಿ ಯುವಕನೊಬ್ಬ ಮೃತಪಟ್ಟ ಘಟನೆ ಇಲ್ಲಿನ ಬೊಮ್ಮನಕಟ್ಟೆ ಕೆರೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಮೃತ ಯುವಕನನ್ನು ಮಹದೇವ (23) ಎಂದು ಗುರುತಿಸಲಾಗಿದೆ. ಕೆರೆಯ ಸಮೀಪ ಹಾದು ಹೋಗುತ್ತಿದ್ದ ಮಹದೇವ ಕೆರೆಯ ಮಧ್ಯದಲ್ಲಿ ಪಕ್ಷಿಯೊಂದು ಸಿಲುಕಿಕೊಂಡಿರುವುದನ್ನು ಗಮನಿಸಿದ್ದಾನೆ. ತಕ್ಷಣವೇ ತನ್ನಿಬ್ಬರು ಸ್ನೇಹಿತರನ್ನು ಕರೆದು ಹಕ್ಕಿಯ ರಕ್ಷಣೆಗೆ ಕೆರೆಗೆ ಇಳಿದಿದ್ದಾನೆ. ಆದರೆ ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದ ಹಿನ್ನೆಲೆಯಲ್ಲಿ ಮಹದೇವನ ಸ್ನೇಹಿತರು ನೀರಿಗಿಳಿಯಲು ಹಿಂಜರಿದಿದ್ದಾರೆ. ಆದರೆ ಮಹದೇವ ಪಕ್ಷಿಯನ್ನು ರಕ್ಷಿಸಲೇಬೇಕು ಎಂದು ನೀರಿಗಿಳಿದಿದ್ದಾನೆ. ಈ ವೇಳೆ ಕೆರೆಯ ಹೂಲಿನಲ್ಲಿ ಸಿಲುಕಿಕೊಂಡು ಮೃತಪಟ್ಟಿದ್ದಾನೆ, ಸ್ನೇಹಿತರು ಸ್ಥಳದಲ್ಲಿದ್ದ ಸೀರೆ ಹಾಗೂ ಹಗ್ಗ ತಂದು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದರೆ ಎಷ್ಟೇ ಪ್ರಯತ್ನಪಟ್ಟರೂ ಮಹದೇವ ಅವರನ್ನು ರಕ್ಷಿಸಲು ಅವರಿಂದ ಸಾಧ್ಯವಾಗಲಿಲ್ಲ. ಘಟನೆ ಸಂಬಂಧ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement