ಮೋದಿಯವ್ರ ಜೊತೆ ಮಾತಾಡ್ದೆ, ಆದ್ರೆ ಅವ್ರಿಗೆ ಕನ್ನಡ ಬರ್ತಿರಲಿಲ್ಲ.. ನಾನು ಗಿಡನೆಡ್ತೇನೆ ಎಂದು ಕೈಸನ್ನೆಯಲ್ಲಿ ಹೇಳ್ದೆ: ದೆಹಲಿ ಅನುಭವ ಹಂಚಿಕೊಂಡ ತುಳಸಿ ಗೌಡ

ನವದೆಹಲಿ : ವೃಕ್ಷದೇವತೆ ಎಂದೇ ಹೆಸರಾದ ಅಂಕೋಲಾದ ತುಳಸಿ ಗೌಡ ಅವರು ಬರಿಗಾಲಿನಲ್ಲೇ ಸಾಗಿ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪಡೆದು ಎಲ್ಲ ಹೃದಯ ಗೆದ್ದಿದ್ದಾರೆ.
ಕಾಡಿನ ಮರಗಳ ಬಗ್ಗೆ ಸಾಕಷ್ಟು ಜ್ಞಾನ ಹೊಂದಿರುವ ತುಳಸಿ ಗೌಡ ಅವರು ತಮ್ಮ ಎಂದಿನ ದಿರಿಸಿನಲ್ಲೇ ಪ್ರಶಸ್ತಿಯನ್ನು ಸ್ವೀಕರಿಸಿದರು.

ದೆಹಲಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಅಲ್ಲಿ ಯಾರಿಗೂ ಕನ್ನಡ ಬರುತ್ತಿರಲಿಲ್ಲ. ನಾನು ಹೇಳಿದ್ದು ಅವರಿಗೆ ಗೊತ್ತಾಗಲಿಲ್ಲ. ಅವರು ಹೇಳಿದ್ದೂ ನನಗೆ ಗೊತ್ತಾಗಲಿಲ್ಲ. ಸುಮ್ಮನೆ ಎಲ್ಲದಕ್ಕೂ ಹೂ.. ಹೂ.. ಎಂದು ತಲೆಯಲ್ಲಾಡಿಸುತ್ತಿದ್ದರು. ನಾನು ಗಿಡನೆಡುತ್ತಿದ್ದೆ ಎಂದು ಕೈಸನ್ನೆ ಮಾಡಿ ಹೇಳಿದೆ. ಅವರು ನಕ್ಕರು. ಅವರು ಮಾತನಾಡಿದರು, ಆದರೆ ನನಗೆ ಅರ್ಥವಾಗಲಿಲ್ಲ ಎಂದು ತುಳಿಸಿಗೌಡ ಹೇಳಿದರು.

ಅಲ್ಲಿ ಭಾರೀ ಜನ, ಬರೀ ಪ್ರಶಸ್ತಿ ಪಡೆದವರೇ ಇದ್ದರು, ಉಳಿದವರು ಹೆಚ್ಚು ಇರಲಿಲ್ಲ. ನಾಣು ಪ್ರಧಾನಿ ಮೋದಿಯವರ ಜೊತೆನೂ ಮಾತನಾಡಿದೆ. ಆದರೆ ಅವರಿಗೂ ಕನ್ನಡ ಬರುವುದಿಲ್ಲ.. ಅವರು ಹೂ ಹೂ ಎನ್ನುತ್ತಿದ್ದರು ಎಂದು ಅಂಕೋಲಾದ ವೃಕ್ಷ ಮಾತೆ ಖ್ಯಾತಿಯ ತುಳಸಿ ಗೌಡ ನಗುತ್ತಲೇ ಹೇಳಿಕೊಂಡರು.
ನಾನು ಗಿಡ ನೆಡುತ್ತೇನೆ ಎಂದು ಹೇಳಿ ಪ್ರಶಸ್ತಿ ಪಡೆದೆ. ಅವರಿಗೆ ಕನ್ನಡ ಗೊತ್ತಾಗುತ್ತಿರಲಿಲ್ಲ. ಅಲ್ಲಿದ್ದವರಿಗೆ ಕನ್ನಡ ಬರುತ್ತಿರಲಿಲ್ಲ. ಎಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಆದ ಅನುಭವನ್ನು ತುಳಸಿ ಗೌಡ ಹೇಳಿದರು.

ಪ್ರಮುಖ ಸುದ್ದಿ :-   ನ್ಯಾಯಾಲಯದ ನಿರ್ದೇಶನ ಪಾಲಿಸಲು ನಿರ್ಲಕ್ಷ್ಯ: ರಾಜ್ಯ ಸರ್ಕಾರದ 41 ಇಲಾಖೆಗಳಿಗೆ ಹೈಕೋರ್ಟ್‌ ನೋಟಿಸ್‌

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement