ಧಾರವಾಡ: ಇಲ್ಲಿನ ವಿದ್ಯಾಗಿರಿಯ ಜೆ.ಎಸ್.ಎಸ್ ಡಿ.ಆರ್.ಹೆಚ್ ಸಭಾಭವನದಲ್ಲಿ ನವೆಂಬರ್ ೧೨ರಂದು ಬೆಳಿಗ್ಗೆ ೧೦.೩೦ ಕ್ಕೆ ಧಾರವಾಡ ಶಹರ ಅಟೋ ಚಾಲಕರ/ಮಾಲಿಕರ ಸಂಘ (ರಿ) ಹಾಗೂ ಜನತಾ ಶಿಕ್ಷಣ ಸಮಿತಿ, ವಿದ್ಯಾಗಿರಿ, ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದೆ.
ಜೆ.ಎಸ್.ಎಸ್.ನ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ವಾಹನ ನಿರೀಕ್ಷಕರಾದ ಪ್ರಹ್ಲಾದ ದೇಸಾಯಿ, ಕರ್ನಾಟಕ ವಿವಿ ಸಿಂಡಿಕೇಟ್ ಸದಸ್ಯರಾದ ರವಿ ಮಾಳಗೇರ, ಸಮಾಜ ಸೇವಕರಾದ ಇದಾಯತ್ ರಾಯಚೂರ ಹಾಗೂ ಧಾರವಾಡ ಶಹರ ಅಟೋ ಚಾಲಕರ/ಮಾಲಿಕರ ಸಂಘ ದ ಆದ್ಯಕ್ಷರಾದ ಶಿವಾನಂದ ನಿಗದಿ, ಮಹಾವೀರ ಉಪಾದ್ಯೆ, ಗುಲಾಬ ಕಿತ್ತೂರ, ಖಲೀಲ ಶೇಖ್ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ